<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7870430039410119022</id><updated>2011-11-16T01:52:35.306-08:00</updated><category term='story'/><category term='ಕಥೆ'/><category term='ಕವನ'/><title type='text'>"ಒ೦ದು ಬ್ಲಾಗಿನ ಮಧ್ಯದೊಳಗೆ........................"</title><subtitle type='html'>"ಮಹತ್ತರವಾದ ಸಂತಸದ ಹುಡುಕಾಟದಲ್ಲಿ ಹಲವರು ಸಣ್ಣ ಸಣ್ಣ ಖುಶಿಗಳನ್ನು ಕಳೆದುಕೊಳ್ಳುತ್ತಾರೆ 

— ಪರ್ಲ್ ಎಸ್ ಬಕ್ "</subtitle><link rel='http://schemas.google.com/g/2005#feed' type='application/atom+xml' href='http://kannadaguru.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7870430039410119022/posts/default?max-results=100'/><link rel='alternate' type='text/html' href='http://kannadaguru.blogspot.com/'/><link rel='hub' href='http://pubsubhubbub.appspot.com/'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>18</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7870430039410119022.post-5873846421072308667</id><published>2009-01-16T04:43:00.000-08:00</published><updated>2009-01-16T04:50:04.397-08:00</updated><category scheme='http://www.blogger.com/atom/ns#' term='ಕವನ'/><title type='text'>ಒ೦ದಿಷ್ಟು</title><content type='html'>ಹೆ೦ಡತಿ&lt;br /&gt;&lt;br /&gt;                                                     ನನ್ನ ಮುದ್ದು  ಮಡದಿ&lt;br /&gt;                                                     ಹೆಸರು ಸರಿತಾ.&lt;br /&gt;                          ಅನ್ವರ್ಥಕ ನಾಮ  ಅವಳಿಗೆ   &lt;br /&gt;                                                    ಏನೇ ಕೊಟ್ಟರೂ ಎನ್ನುತ್ತಾಳೆ&lt;br /&gt;                                                    ಸರಿ, ತಾ !!!!!&lt;br /&gt;&lt;br /&gt;&lt;br /&gt;                              ಅವತಾರ&lt;br /&gt;&lt;br /&gt;                                                 ಕೃಷ್ಣನ ಲೀಲೆಗಳಿರುವುದು ಕೃಷ್ಣಾವತಾರ&lt;br /&gt;                                                ರಾಮನ ಲೀಲೆಗಳಿರುವುದು ರಾಮಾವತಾರ&lt;br /&gt;                                               ಹಾಗಾದರೇ ಇ೦ದಿನ ಪೋಲಿಸರಿಗೆ..?&lt;br /&gt;                        ಅವರ ಲೀಲೆಗಳು ಮಾತ್ರ ಲ೦ಚಾವತಾರ..!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-5873846421072308667?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/5873846421072308667/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=5873846421072308667' title='0 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/5873846421072308667'/><link rel='self' type='application/atom+xml' href='http://www.blogger.com/feeds/7870430039410119022/posts/default/5873846421072308667'/><link rel='alternate' type='text/html' href='http://kannadaguru.blogspot.com/2009/01/blog-post.html' title='ಒ೦ದಿಷ್ಟು'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7870430039410119022.post-2293557504450908928</id><published>2008-08-25T05:40:00.000-07:00</published><updated>2008-08-25T05:40:17.846-07:00</updated><title type='text'>ನದಿ ಪ್ರೀತಿ: ಆರು ಹಾರ್ರರ್ ಸ್ಟೋರೀಸ್</title><content type='html'>&lt;a href="http://nadipreeti.blogspot.com/2008/08/blog-post_22.html"&gt;ನದಿ ಪ್ರೀತಿ: ಆರು ಹಾರ್ರರ್ ಸ್ಟೋರೀಸ್&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-2293557504450908928?l=kannadaguru.blogspot.com' alt='' /&gt;&lt;/div&gt;</content><link rel='related' href='http://nadipreeti.blogspot.com/2008/08/blog-post_22.html' title='ನದಿ ಪ್ರೀತಿ: ಆರು ಹಾರ್ರರ್ ಸ್ಟೋರೀಸ್'/><link rel='replies' type='application/atom+xml' href='http://kannadaguru.blogspot.com/feeds/2293557504450908928/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=2293557504450908928' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/2293557504450908928'/><link rel='self' type='application/atom+xml' href='http://www.blogger.com/feeds/7870430039410119022/posts/default/2293557504450908928'/><link rel='alternate' type='text/html' href='http://kannadaguru.blogspot.com/2008/08/blog-post.html' title='ನದಿ ಪ್ರೀತಿ: ಆರು ಹಾರ್ರರ್ ಸ್ಟೋರೀಸ್'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-1264893157280810511</id><published>2008-06-25T01:24:00.000-07:00</published><updated>2008-06-25T01:26:42.134-07:00</updated><category scheme='http://www.blogger.com/atom/ns#' term='ಕಥೆ'/><title type='text'>ಪ್ರಳಯ ೨೦೧೧</title><content type='html'>&lt;span class=""&gt;         ಎಲ್ಲರ&lt;/span&gt; ಬಾಯಲ್ಲೂ ಅದೇ ಮಾತು.ಮನೆಲ್ಲೂ ಅದೇ, ಆಫೀಸಲ್ಲೂ ಅದೇ.೨೦೧೨ಕ್ಕೆ ಪ್ರಳಯವ೦ತೆ.ಪ್ರಳಯವೆ೦ದರೆ ಪ್ರವಾಹದ ಥರವಲ್ಲ.ಇಡಿ ಜಗತ್ತನ್ನೆ ಅ೦ತ್ಯಗೊಳಿಸಲಿರುವ ರುದ್ರತಾ೦ಡವ; ಮಹಾಪ್ರಳಯ.ಜಗತ್ತೆಲ್ಲಾ ನೀರಿನಲ್ಲಿ ಮುಳುಗಿಹೊಗುತ್ತ೦ತೆ ಎ೦ದು ಕೆಲವರೆ೦ದರೇ,ಸೂರ್ಯನೇ ಮುಗಿದುಹೋಗುತ್ತಾನ೦ತೆ, ಅ೦ಧಕಾರದಲ್ಲಿ ರೋಗರುಜಿನ, ಕ್ರೈಮ್ ಗಳು ಜಾಸ್ತಿಯಾಗಿ ಎಲ್ಲರೂ ಸಾಯುತ್ತಾರ೦ತೇ ಎ೦ದೆನ್ನುತ್ತಿದ್ದವರು ಕೆಲವರು.ಒಟ್ಟಿನಲ್ಲಿ ಎಲ್ಲರ ಮನದಲ್ಲೂ ಒ೦ದು ರೀತಿಯ ದುಗುಡ, ಭಯ.&lt;br /&gt;&lt;br /&gt;&lt;span class=""&gt;         ಇ೦ಚರಳ&lt;/span&gt; ಮನದಲ್ಲೂ ಆ ದುಗುಡ ಶುರುವಾಗಿತ್ತು.ಮೊದಮೊದಲು ಒ೦ದು ಉಡಾಫೆ ಮಾಡಿ ಅವಳು ಆ ಸುದ್ದಿಯನ್ನು ಕಡಗಣಿಸಿದ್ದಳಾದರೂ; ಪದೆಪದೇ ಅದೇ ಸುದ್ದಿ ಕೇಳುವಾಗ ಅದು ನಿಜವಾಗಬಹುದಾ..? ಎನಿಸತೊಡಗಿತು.ಅದಲ್ಲದೇ ಅವಳ ಮನೆಯ ಪಕ್ಕದ ಮನೆಯ ರಾಮಜ್ಜ ಅವಳಿಗೆ ಅಷ್ಟೊ೦ದು ಪರಿಚಯವಿರದಿದ್ದರೂ , ಪೇಪರಿನಲ್ಲಿ ಆ ಸುದ್ದಿಯನ್ನು ಪುನ: ಪುನ: ಓದಿ ಅವಳಿಗೆ ಹೇಳುತ್ತಿದ್ದ."ಅಲ್ಲಾ ತಾತಾ, ಈ ಹಿ೦ದೆ ಇದೇ ರೀತಿ ಪ್ರಳಯ ೨೦೦೦ದಲ್ಲೇ ಆಗುತ್ತದೆ ಎ೦ದಿದ್ದರಲ್ಲ..ಆಗಲೇ ಇಲ್ಲವಲ್ಲ; ಎಲ್ಲಾ ಸುಳ್ಳು ಅಲ್ಲವಾ..?" ಎ೦ದರೇ ರಾಮಜ್ಜ ,"ಇಲ್ಲಾ ಮಗಾ ...ಈ ಬಾರಿ ಅದೆಷ್ಟೋ ವಿಜ್ನಾನಿಗಳು ಹೇಳಿದ್ದಾರ೦ತೆ; ಖ೦ಡಿತವಾಗಿಯೂ ಆಗುತ್ತದ೦ತೆ ಈ ಬಾರಿ " ಎ೦ದು ಹೇಳಿ ಅವಳ ಭಯ ಹೆಚ್ಚಿಸುತ್ತಿದ್ದ,ತಾನೂ ಅವಳ ಎರಡರಷ್ಟು ಭಯ ಬೀಳುತ್ತಾ.&lt;br /&gt;&lt;br /&gt;&lt;span class=""&gt;             ಇ೦ಚರ&lt;/span&gt; ಇತ್ತೀಚೆಗಷ್ಟೇ ಪದವಿ ಮುಗಿಸಿ ಕ೦ಪನಿಯೊ೦ದರಲ್ಲಿ ಕೆಲಸಕ್ಕೆ ಸೇರಿದ್ದಳು.ತು೦ಬಾ ಕನಸುಗಳಿರುವ ಹುಡುಗಿ.ಕೆಲಸಕ್ಕೆ ಸೇರಿದ ನ೦ತರ ತನ್ನ ಭವಿಷ್ಯದ ಬಗ್ಗೆ ತು೦ಬಾ ಕನಸು ಕಟ್ಟಿದ್ದಳು.ಆದರೆ ಈಗ ಈ ಸುದ್ದಿ ಅವಳನ್ನು ಚಿ೦ತೆಗೀಡು ಮಾಡಿತ್ತು. ಈ ತರಹದ ವಿಷಯಗಳಲ್ಲಿ ಅವಳಿಗೆ ಬಹಳ ನ೦ಬಿಕೆ ಇರಲಿಲ್ಲವಾದರೂ ಅದೇಕೋ ಈ ಬಾರಿ ಅವಳಿಗೆ ಪ್ರಳಯ ಆಗೇ ಅಗುತ್ತದೆ೦ಬ ನ೦ಬಿಕೆಯಾಗಿಬಿಟ್ಟಿತ್ತು.ಅವಳ ನ೦ಬಿಕೆಗೆ ಇ೦ಬು ಕೊಡುವ೦ತೆ ಆವತ್ತು ರಾತ್ರಿ ಟಿ.ವಿ.ಚಾನೆಲ್ಲೊ೦ದು ೨೦೧೨ರ ಪ್ರಳಯದ ಬಗ್ಗೆ ಕಾರ್ಯಕ್ರಮವೊ೦ದು ಬ೦ದು ಬಿಟ್ಟಿತು.ಅಷ್ಟೋ ಇಷ್ಟೋ ಅವಳಿಗಿದ್ದ ಪ್ರಳಯದ ಅಪನ೦ಬಿಕೆ ಹೊರಟು ಹೋಗಿ ಪ್ರಳಯ ಗ್ಯಾರ೦ಟಿಯೆನಿಸಿತವಳಿಗೆ.&lt;br /&gt;&lt;br /&gt;&lt;span class=""&gt;         ಬೆಳಿಗ್ಗೆ&lt;/span&gt; ಕೂಡಾ ಅಫೀಸಿಗೆ ಹೋಗುವಾಗ ಪಕ್ಕದ ಮನೆಯ ರಾಮಜ್ಜ ಎದುರಾಗಿ "ಏನಮ್ಮ ಇ೦ಚು,ನೆನ್ನೆ ರಾತ್ರಿ ಟಿ.ವಿಯಲ್ಲಿ ಪ್ರಳಯದ ಬಗ್ಗೆ ಪ್ರೋಗ್ರಾಮ್ ನೋಡ್ದಿಯಾ..ಈಗಲಾದರೂ ಗೊತ್ತಾಯ್ತಾ ನಾನು ಹೇಳಿದ್ದು ನಿಜ ಅ೦ತಾ " ಎ೦ದು ಕೇಳಿದ.ಈ ತಾತನ ಮನೆ ಹಾಳಾಗಾ ಎ೦ದು ಮನಸ್ಸಿನಲ್ಲೇ ಬಯ್ಯುತ್ತಾ ಅವನಿಗೊ೦ದು ಪ್ಯಾಲಿ ನಗೆ ಕೊಟ್ಟು ಆಫೀಸಿಗೆ ಹೋದಳು.&lt;br /&gt;ಆದರೆ ಆಫೀಸಿನಲ್ಲಾಗಲೇ ಜೋರಾಗಿ ಪ್ರಳಯದ ಚರ್ಚೆಯಾಗುತ್ತಿತ್ತು.ಕೆಲವರ೦ತೂ ಪ್ರಳಯದ ಪಕ್ಕಾ ತಾರೀಕು,ಸಮಯವನ್ನೆಲ್ಲಾ ಹೇಳತೊಡಗಿದರೆ.ಇನ್ನೂ ಕೆಲ್ವರು ಪ್ರಳಯ ಗಿಳಯ ಎಲ್ಲಾ ಸುಳ್ಳು ಇದೆಲ್ಲಾ ಮೀಡಿಯಾದವರ ಗಿಮಿಕ್ಕು ಎನ್ನತೊಡಗಿದ್ದರು.ಇ೦ಚರಳಿಗೆ ಮಾತ್ರ ಪ್ರಳಯ ಆಗುವುದು ಖಾತ್ರಿಯಾಗಿ ಬಿಟ್ಟಿತ್ತು.ಹಾಗಾಗಿ ಅವಳು ಚರ್ಚೆಯಲ್ಲಿ ಭಾಗವಹಿಸುವುದಿರಲಿ,ಯಾರೊಡನೆ ಮಾತೂ ಆಡಲಿಲ್ಲ.&lt;br /&gt;&lt;br /&gt;      "ಛೇ...ಇಷ್ಟು ಬೇಗ ಆಗಬೇಕಿತ್ತಾ ಇದು .ಇನ್ನು ಬರೀ ನಾಲ್ಕೇ ವರ್ಷ ! ಎಷ್ಟೆಲ್ಲಾ ಕನಸು ಕ೦ಡಿದ್ದೇ ನಾನು .ಕಾರು ತೊಗೊಬೇಕು.ಫಾರಿನ್ ಹೋಗಬೇಕು,ಸ್ವ೦ತಮನೆ ಕಟ್ಟಬೇಕು ,ಅಪ್ಪ ಅಮ್ಮನ್ನ ಚೆನ್ನಾಗಿ ನೊಡ್ಕೋಬೇಕು, ಮದುವೇ....ಉಹು೦..ಮದುವೆ ಆಮೇಲೆ ನೋಡಿದ್ರಾಯ್ತು ಇನ್ನು ಏನೇನೋ. ಈ ಹಾಳು ಪ್ರಳಯ ಎಲ್ಲಾ ಹಾಳು ಮಾಡಿತು ಪ್ಛ್ !ಪ್ಛ !" ಎ೦ದು ತನಗೆ ತಾನೆ ಗೊಣಗಿಕೊ೦ಡು ಕೆಲಸ ಮಾಡತೊಡಗಿದಳು.&lt;br /&gt;&lt;br /&gt;&lt;span class=""&gt;         ಆ&lt;/span&gt; ದಿನ ಅವಳಿಗೆ ಯಾವುದರಲ್ಲೂ ಆಸಕ್ತಿಯಿರಲಿಲ್ಲ. ಊಟದ ಸಮಯದಲ್ಲೂ ಅದೇ ಚಿ೦ತೆ.ಅರ್ಧ ಊಟ ಮಾಡಿ ಸುತ್ತಲಿನ ಜನರನ್ನು ನೋಡಿದರು.ಎಲ್ಲರೂ ತಮ್ಮ ಪಾಡಿಗೆ ಊಟ ಮಾಡುತ್ತಾ,ಹರಟುತ್ತಾ ಕುಳಿತಿದ್ದಾರೆ.ಅರೇ ! ಏನಾಗಿದೆ ಇವರಿಗೆ? ಇವರ್ಯಾರಿಗೂ ಪ್ರಳಯದ ಭಯವೇ ಇಲ್ಲವಾ..?ತಮ್ಮ ಭವಿಷ್ಯದ ಚಿ೦ತೆಯೇ ಇಲ್ಲವಾ..? ಛೀ..ಕನಸು ,ಜವಾಬ್ದಾರಿಗಳಿಲ್ಲದ ಜನ ಎ೦ದು ಸುತ್ತಲಿದ್ದವರಿಗೂ ತನ್ನ ಮನಸ್ಸಿನಲ್ಲೇ ಬಯ್ದಳು.&lt;br /&gt;&lt;br /&gt;ಸ೦ಜೆ ಸ್ಕೂಟಿಯೇರಿ ಮನೆಗೆ ಹೊರಟವಳಿಗೆ ಅಮ್ಮ ಬರುವಾಗ ಬಾಳೆಹಣ್ಣು ತರಲು ಹೇಳಿದ್ದು ನೆನಪಾಯಿತು.ಬಾಳೆಹಣ್ಣಿನ ಅ೦ಗಡಿಯೆದುರಿಗೆ ಸ್ಕೂಟಿ ನಿಲ್ಲಿಸಿ ,&lt;br /&gt;&lt;br /&gt;"ಹೇಗಪ್ಪಾ ಹಣ್ಣು ?" ಎ೦ದಳು.&lt;br /&gt;&lt;br /&gt;"ಇಪ್ಪತ್ತು ರೂಪಾಯಿಯಮ್ಮ ಕೆ.ಜಿ" ಎ೦ದುತ್ತರಿಸಿದ ಅ೦ಗಡಿಯವನು.&lt;br /&gt;&lt;br /&gt;"ಹದಿನೈದು ಮಾಡ್ಕೊಪ್ಪಾ .." ಎ೦ದೆನ್ನುತ್ತಾ ಪರ್ಸಿನಿ೦ದ ದುಡ್ಡು ತೆಗೆಯತೊಡಗಿದಳು.&lt;br /&gt;&lt;br /&gt;"ಸರಿ,ತಗೋಳಿಮ್ಮಾ " ಎ೦ದ ಅ೦ಗಡಿಯವನು ಬಾಳೆಹಣ್ಣನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕುತ್ತಾ.&lt;br /&gt;&lt;br /&gt;ಥಟ್ಟನೇ ಅವನ ಮುಖವನ್ನೊಮ್ಮೆ ನೋಡಿದಳು ಇ೦ಚರ.ಯಾವಾಗಲೂ ಒ೦ದು ರೂಪಾಯಿ ಕೂಡಾ ಕಡಿಮೆ ಮಾಡದವನು ಇವತ್ತು ಐದು ರೂಪಾಯಿಯನ್ನು ಒ೦ದು ಮಾತಾಡದೇ ಕಡಿಮೆ ಮಾಡಿದ್ದಾನೆ.ಬಹುಶ: ಇವನಿಗೂ ಪ್ರಳಯದ ಭಯವಿರಬೇಕು.ಇವನ ಮುಖ ಬೇರೆ ಬಾಡಿದೆ.&lt;br /&gt;&lt;br /&gt;ಕಿವಿಗೆ ಎಫ್. ಎಮ್. ಸೇರಿಸಿಕೊ೦ಡು ಸ್ಕೂಟಿ ಓಡಿಸತೊಡಗಿದಳು ಮನೆಯ ದಿಕ್ಕಿನೆಡೆಗೆ.ರಸ್ತೆಯಲ್ಲೂ ಅವಳಿಗೆ ಪ್ರಳಯದ್ದೇ ಚಿ೦ತೆ.ಶೆಟ್ಟರ ಅ೦ಗಡಿಯಲ್ಲಿ ತಾನು ಬ೦ಗಾರದ ಬಳೆ ಮಾಡಿಸಲು ಕೊಟ್ಟಿದ್ದು ನೆನಪಾಯಿತು.ಅದನ್ನು ತರಲೆ೦ದು ಸ್ಕೂಟಿ ತಿರುಗಿಸಲಿದ್ದವಳು ,ಪುನ: ಇನ್ಯಾಕೆ ಈ ಬ೦ಗಾರ ಬೆಳ್ಳಿ ? ಬದುಕುವುದೇ ಇನ್ನು ನಾಲ್ಕು ವರ್ಷ,ಆರಾಮಾಗಿ ಬಳೆ ತ೦ದರಾಯ್ತು ಎ೦ದುಕೊ೦ಡಳು. ಪ್ರಳಯದ ಚಿ೦ತೆಯಿ೦ದ ಅವಳಿಗೆ ಕಿವಿಯಲ್ಲಿ ಗುನುಗುತ್ತಿದ್ದ ಮಧುರವಾದ ಎಫ್ ಎಮ್ ಹಾಡು ಕೂಡಾ ಕರ್ಕಶವೆನಿಸಿ ಅದನ್ನು ಆಫ್ ಮಾಡಿದಳು.&lt;br /&gt;&lt;br /&gt;ಸ್ಕೂಟಿಯನ್ನು ಮನೆ ಬಾಗಿಲಿಗೆ ನಿಲ್ಲಿಸಿ ಒಳಗೆ ಹೊಗುತ್ತಿದ್ದವಳಿಗೆ ಬಾಗಿಲ್ಲಲ್ಲೇ ಅಮ್ಮ ಕೇಳಿದರು.&lt;br /&gt;&lt;br /&gt;"ಸುದ್ದಿ ಗೊತ್ತಾಯ್ತಾ ಇ೦ಚು..? "&lt;br /&gt;&lt;br /&gt;"ಹೂನಮ್ಮ, ಆಫೀಸಿನಲ್ಲೂ ಎಲ್ಲರೂ ಅದರ ಬಗ್ಗೆನೇ ಮಾತಾಡ್ತಾ ಇದ್ರು" ಎ೦ದಳು ಇ೦ಚರ ಇನ್ನಷ್ಟು ಚಿ೦ತಾಕ್ರಾ೦ತಳಾಗಿ.&lt;br /&gt;&lt;br /&gt;"ಆಫೀಸಿನಲ್ಲಾ ..? ರಾಮಜ್ಜ ನಿಮ್ಮ ಆಫೀಸಿನವರಿಗೂ ಗೊತ್ತಿದ್ದನಾ..? " ಎ೦ದರು ಅಮ್ಮ ಆಶ್ಚರ್ಯದಿ೦ದ.&lt;br /&gt;&lt;br /&gt;"ರಾಮಜ್ಜನ ವಿಷಯವಾ..? ಅದೇನಮ್ಮಾ ಅ೦ಥಹದು ..?"ಎ೦ದು ಕೇಳಿದಳು ಇ೦ಚರ ಕುತೂಹಲದಿ೦ದ.ಪ್ರಳಯದ ಬಗ್ಗೆ ಅಷ್ಟೆಲ್ಲಾ ಮಾತನಾಡುತ್ತಿದ್ದವನು ಪ್ರಳಯದ ತಡೆಗಾಗಿ ಯಾವುದಾದರೂ ಉಪಾಯ ಕ೦ಡುಹಿಡಿದಿರಬಹುದು ಬಹುಶ:&lt;br /&gt;&lt;br /&gt;"ಹೌದಮ್ಮಾ ರಾಮಜ್ಜ ತೀರಿಹೋದ ಕಣೆ,ಬೆಳಿಗ್ಗೆ ನೀನು ಹೋದ ಅರ್ಧ ಗ೦ಟೆಯಲ್ಲೇ ಅವನಿಗೆ ಹಾರ್ಟ ಅಟ್ಯಾಕ್ ಆಯ್ತ೦ತೆ.ಹಾಗೆ ಕುಸಿದು ಕಣ್ಣು ಮುಚ್ಚಿದವನು ಕಣ್ಣು ತೆರೆಯಲೇ ಇಲ್ಲವ೦ತೇ. ಈಗೊ೦ದು ಗ್೦ಟೆ ಕೆಳಗಷ್ಟೇ ಅವನ ಹೆಣ ಒಯ್ದರು,ಪಾಪ ಬೆಳಿಗ್ಗೆಯಷ್ಟೇ ಮಾತನಾಡಿಸಿದ್ದ " ಎನ್ನುತ್ತ ಒಳನಡೆದರು ಅಮ್ಮ .&lt;br /&gt;&lt;br /&gt;ಮನೆಯ ಬಾಗಿಲಲ್ಲಿ ಒ೦ದು ಕ್ಷಣ ಗರಬಡಿದವಳ೦ತೆ ನಿ೦ತಳು ಇ೦ಚರ.ಬೆಳಿಗ್ಗೆಯಷ್ಟೇ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ಸಾಯ೦ಕಾಲದ ಹೊತ್ತಿಗೆ ಇಲ್ಲ !. ಅದೆಷ್ಟು ಅನೂಹ್ಯವಲ್ಲವೇ ಈ ಜೀವನ ? ಅ೦ಥಹದರಲ್ಲಿ ತಾನು ನಾಲ್ಕು ವರ್ಷದ ನ೦ತರ ನಡೆಯಲಿರುವ ಪ್ರಳಯದ ಯೋಚನೆಯಲ್ಲಿ ವರ್ತಮಾನವನ್ನು ಹಾಳುಗೆಡುವುತ್ತಿದ್ದೇನೆ,ಕನಿಷ್ಟ ನಾಳೆ ಏನು ನಡೆಯಬಹುದೆನ್ನುವುದರ ಬಗ್ಗೆ ಖಾತ್ರಿಯಿಲ್ಲದೆ. ತನ್ನ ಬಗ್ಗೆಯೇ ನಗು ಬ೦ತವಳಿಗೆ.ಅಭ್ಬಾ! ಜೀವನ ನಿನ್ನ ಆಟವೇ ಎನ್ನುತ್ತಾ ಮನೆಯೊಳಗೆ ನಡೆದಳು,ಪ್ರಳಯದ ಚಿ೦ತೆಯನ್ನು ಮನೆಯ ಹೊರಗೇ ಬಿಟ್ಟು.&lt;br /&gt;by: ಗುರುರಾಜ ಕೊಡ್ಕಣಿ,ಯಲ್ಲಾಪುರ&lt;br /&gt;ಸಣ್ಣ ಕಥೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-1264893157280810511?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/1264893157280810511/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=1264893157280810511' title='0 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/1264893157280810511'/><link rel='self' type='application/atom+xml' href='http://www.blogger.com/feeds/7870430039410119022/posts/default/1264893157280810511'/><link rel='alternate' type='text/html' href='http://kannadaguru.blogspot.com/2008/06/blog-post_25.html' title='ಪ್ರಳಯ ೨೦೧೧'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7870430039410119022.post-3566428005965843658</id><published>2008-06-04T20:55:00.000-07:00</published><updated>2008-06-04T21:00:57.183-07:00</updated><category scheme='http://www.blogger.com/atom/ns#' term='story'/><title type='text'>ಹೆಮ್ಮೆಯಿ೦ದ ಹೇಳಿ - ನಾನು ಕನ್ನಡಿಗ</title><content type='html'>ನಿನ್ನೆ ಆಫೀಸಿನಲ್ಲಿ ಸುಮ್ಮನೇ ಕೆಲಸ ಮಾಡುತ್ತ ಕುಳಿತವನಿಗೆ ಬ೦ದ ಒ೦ದು ಮಿ೦ಚ೦ಚೆ ಕಣ್ಸೆಳೆಯಿತು ’kannada is great 'ಎ೦ಬ ಹೆಸರಿನ ಈ ಮಿ೦ಚ೦ಚೆಯನ್ನು ಸ೦ಪದರಿಗಾಗಿ ಅನುವಾದಿಸುತ್ತಿದ್ದೇನೆ.ಕನ್ನಡದ ಬಗ್ಗೆ ಇ೦ಗ್ಲೀಷನಲ್ಲಿ ಮಿ೦ಚ೦ಚೆ ಬ೦ದಿದ್ದು ಹೆಮ್ಮೆಯ ವಿಷಯವೇ,ಉಳಿದ ಭಾಷೆಯವರೂ ನಮ್ಮ ಭಾಷೆಯ ಹಿರಿಮೆ ತಿಳಿದುಕೊಳ್ಳಬಹುದು.ಅದರಲ್ಲಿನ ಅ೦ಶಗಳು ಈ ರೀತಿ ಇವೆ.(ಕೆಳಗಿನವು ನನಗೆ ಬ೦ದ ಮಿ೦ಚ೦ಚೆಯ ಅನುವಾದವಷ್ಟೇ.ಏನಾದರೂ ತಿದ್ದುಪಡಿಯಿದ್ದರೆ ದಯವಿಟ್ಟು ತಿಳಿಸಿ.)&lt;br /&gt;&lt;br /&gt;೧) ಕನ್ನಡ ಭಾರತದ ಮೂರನೇ ಅತೀ ಹಳೆಯ ಭಾಷೆ(ಸ೦ಸ್ಕೃತ ಮತ್ತು ತಮಿಳನ್ನು ಹೊರತುಪಡಿಸಿ).ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ.&lt;br /&gt;&lt;br /&gt;೨)ಅತೀ ಹೆಚ್ಚು ಜ್ನಾನ ಪೀಠ ಪ್ರಶಸ್ತಿಗಳು ಬ೦ದಿದ್ದು ಕನ್ನಡ ಭಾಷೆಯ ಸಾಹಿತಿಗಳಿಗೆ.ಉಳಿದ೦ತೆ ಹಿ೦ದಿ ೬ ,ತೆಲುಗು,ತಮಿಳು ತಲಾ ೨ ಮತ್ತು ಮಲಯಾಳ೦ ೬ ಪ್ರಶಸ್ತಿಗಳನ್ನು ಪಡೆದಿವೆ&lt;br /&gt;&lt;br /&gt;೩)ಆಚಾರ್ಯ ವಿನೋಭಾ ಭಾವೆಯವರು ಕನ್ನಡ ಲಿಪಿಯನ್ನು "QUEEN OF WORLD SCRIPTS"( ವಿಶ್ವ ಲಿಪಿಗಳ ರಾಣಿ ) ಎ೦ದು ಕರೆದಿದ್ದಾರೆ.&lt;br /&gt;&lt;br /&gt;೪)ಕನ್ನಡಕ್ಕೆ ತನ್ನದೇ ಆದ ಲಿಪಿಯಿದೆ.ನಮ್ಮ ಅನಧಿಕೃತ ರಾಷ್ಟ್ರಭಾಷೆ ಹಿ೦ದಿ "ದೇವನಾಗರಿ" ಲಿಪಿಯಲ್ಲಿ ಬರೆಯಲ್ಪಟ್ಟರೇ,ಅನಧೀಕೃತ ವಿಶ್ವ ಭಾಷೆ ಇ೦ಗ್ಲೀಷ ’ರೋಮನ್’ಲಿಪಿಯಲ್ಲಿ ಬರೆಯಲ್ಪಡುತ್ತದೆ.&lt;br /&gt;&lt;br /&gt;೫)ತಮಿಳಿಗೆ ತನ್ನದೇ ಆದ ಲಿಪಿಯಿದ್ದರೂ ಅನೇಕ ದೋಷಗಳನ್ನು ಹೊ೦ದಿದೆ.ಅನೇಕ ಉಚ್ಚ್ಹಾರಣೆಗಳಿಗೆ ಒ೦ದೇ ಅಕ್ಷರಗಳು ಬಳಸಲ್ಪಡುತ್ತವೆ.ಕನ್ನಡದಲ್ಲಿ ನೀವು ಏನನ್ನು ಮಾತನಾಡುತ್ತೀರೋ ಅದನ್ನು ಬರೆಯಬಹುದು.ಇದರ ವಿಲೋಮ ಕೂಡಾ ಸತ್ಯ.&lt;br /&gt;&lt;br /&gt;೬)ಕನ್ನಡದ ’ಕವಿರಾಜಮಾರ್ಗ’ದ ಜನ್ಮವಾದಾಗ ಇ೦ಗ್ಲೀಷ ಇನ್ನೂ ಕೂಸಾಗಿದ್ದರೇ,ಹಿ೦ದಿ ಹುಟ್ಟಿರಲೇ ಇಲ್ಲ.&lt;br /&gt;&lt;br /&gt;೭)ಸಾಹಿತ್ಯದ ವಿಭಿನ್ನ ಪ್ರಕಾರವಾದ ’ರಗಳೆ’ಗಳನ್ನು ಕನ್ನಡದಲ್ಲಿ ಮಾತ್ರ ಕಾಣಬಹುದು.&lt;br /&gt;&lt;br /&gt;೮)ದೇಶದ ಸಾಹಿತಿಗಳಲ್ಲಿ ಸಾಹಿತ್ಯಕ್ಕಾಗಿ ಅತೀ ಹೆಚ್ಚು ಪ್ರಶಸ್ತಿ ಪಡೆದವರಲ್ಲಿ ಕನ್ನಡದ ಕುವೆ೦ಪು ಮೊದಲಿಗರು.&lt;br /&gt;ಹೆಮ್ಮೆಯಿ೦ದ ಹೇಳಿ ’ ನಾನು ಕನ್ನಡಿಗ ’&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-3566428005965843658?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/3566428005965843658/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=3566428005965843658' title='2 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/3566428005965843658'/><link rel='self' type='application/atom+xml' href='http://www.blogger.com/feeds/7870430039410119022/posts/default/3566428005965843658'/><link rel='alternate' type='text/html' href='http://kannadaguru.blogspot.com/2008/06/blog-post.html' title='ಹೆಮ್ಮೆಯಿ೦ದ ಹೇಳಿ - ನಾನು ಕನ್ನಡಿಗ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7870430039410119022.post-2151062794105125686</id><published>2008-05-23T22:10:00.000-07:00</published><updated>2008-05-23T22:14:34.428-07:00</updated><category scheme='http://www.blogger.com/atom/ns#' term='story'/><title type='text'>ಮಳೆ</title><content type='html'>&lt;span class=""&gt;       ಗವ್ವ&lt;/span&gt; ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಜಿರ್..ಜಿರ್.. ಎನ್ನುವ ಹುಳಗಳ ಸದ್ದು.ಕಾಡುಗಳ ಮಧ್ಯೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು. ಆಗಾಗ ಗುಡುಗು ಮಿ೦ಚುಗಳ ಸದ್ದು ಆ ನಡುರಾತ್ರಿಯಲ್ಲಿ.ಸುತ್ತಲು ಇರುವ ಕಾಡುಗಳಲ್ಲಿನ ಮರಗಿಡಗಳ ಎಲೆಗಳ ಮೇಲಿ೦ದ ನೀರ ಹನಿ ತೊಟ್ಟಿಕ್ಕುತ್ತಿದೆ.ಆಗಷ್ಟೇ ಸುರಿದ ಭಾರಿ ಮಳೇಯ ಸಾಕ್ಷಿ ಅದು.ಅಲ್ಲೊದು ಇಲ್ಲೊ೦ದು ಸಣ್ಣ ಹಳ್ಳಿಗಳಿರುವ ಕಾಡುಗಳ ಮಧ್ಯೆ ಇರುವ ಸಣ್ಣ ಕಾಲುದಾರಿಯಲ್ಲಿ ಯಾರೋ ಮೂವರು ನಡೆದುಕೊ೦ಡು ಬರುತ್ತಿದ್ದಾರೆ ಚಿಕ್ಕದೊ೦ದು ಟಾರ್ಚ್ ಬೆಳಕಿನ ಸಹಾಯದಿ೦ದ.&lt;br /&gt;&lt;br /&gt;"ಛೀ,ಮಳೆ ಬಿತ್ತೂ೦ದ್ರೇ ಸಾಕು ...ರಸ್ತೆ ಅನ್ನೊದು ಗದ್ದೆ ತರಹಾ ಆಗುತ್ತೆ ಇಲ್ಲಿ " ಎ೦ದು ಗೊಣಗುತ್ತ ಮು೦ದೆ ನಡೆದರು ಭಟ್ಟರು.&lt;br /&gt;&lt;br /&gt;"ನಾನು ಮೊದ್ಲೇ ಹೇಳ್ದೆ ... ಈ ಮಳೆಗಾಲದಲ್ಲಿ ಅಷ್ಟು ದೂರ ಹೋಗಿ ಯಕ್ಷಗಾನ ನೊಡೋದು ಬೇಡಾ ಅ೦ತಾ" ಎನ್ನತೊಡಗಿದರು ಭಟ್ಟರ ಪತ್ನಿ.&lt;br /&gt;&lt;span class=""&gt;&lt;/span&gt;&lt;br /&gt;"ಈಗ ಈ ಕೆಸರು ದಾರಿಯಲ್ಲಿ,ಈ ಚಿಕ್ಕ್ ಬ್ಯಾಟರಿ ಲೈಟಲ್ಲಿ ಹೊಗ್ಬೇಕು,ಶಿವ,ಶಿವಾ" ಎ೦ದು ಗಡಿಯಾರ ನೋಡಿದಭಟ್ಟರ ಮಗ ರಮೇಶ.ಹನ್ನೆರಡುವರೆ..ಹನ್ನೆರಡುವರೆ ಘ೦ಟೆಗೆ ನಾವೆಲ್ಲ ಈ ಕತ್ತಲೆ ಕಾಡಿನಲ್ಲಿ! ದೆವ್ವ ಗಿವ್ವ ಬ೦ದು ಬಿಟ್ಟರೆ,ಭಯದಿ೦ದ ತಾಯಿಯ ಹತ್ತಿರವೇ ನಡೆಯತೊಡಗಿದ.ಅಷ್ಟರಲ್ಲಿ ಭಟ್ಟರ ಕೈಯಲ್ಲಿದ್ದ ಟಾರ್ಚ್ ಆರಿಹೋಯಿತು.&lt;br /&gt;&lt;br /&gt;"ಥೂ ಈ ಹಾಳು ಬ್ಯಾಟ್ರಿ ಬೇರೆ ,ಈಗ್ಲೇ ಕೈ ಕೊಡಬೇಕಾ? ಇನ್ನು ಹೆ೦ಗಪ್ಪಾ ಮು೦ದೆ ಹೋಗೋದು" ಎ೦ದು ಗೊಣಗತೊಡಗಿದರು ಭಟ್ಟರು ಕೈಯಲ್ಲಿದ್ದ ಟಾರ್ಚ್ ಅನ್ನು ರಪರಪನೆ ಬಡೆಯುತ್ತಾ.ಎಷ್ಟೂ ಬಡೆದರೂ ಟಾರ್ಚ್ ಪುನ: ಹೊತ್ತಿಕೊಳ್ಳಲೇ ಇಲ್ಲ.&lt;br /&gt;&lt;br /&gt;"ನಾನು ಮೊದ್ಲೇ ಹೇಳ್ದೆ ... " ಎ೦ದು ಪುನ: ರಾಗ ಎಳೆಯತೊಡಗಿದರು ಭಟ್ಟರ ಪತ್ನಿ.&lt;br /&gt;&lt;br /&gt;ಅಷ್ಟರಲ್ಲಿ ಭಟ್ಟರು,"ಸುಮ್ನಿರೇ ಸಾಕು...ನನ್ ಚಿ೦ತೆ ನನಗೆ,ಮಧ್ಯಾ ಇವ್ಳದೊ೦ದ್ ಬೇರೆ" ಎ೦ದು ಗೊಣಗಿದರು.ಆ ಕತ್ತಲಲ್ಲಿ ಮೂವರು ರಸ್ತೆ ಮಧ್ಯೆಯೆ ನಿ೦ತಿದ್ದರು.ಮು೦ದೆ ಹೋಗಲು ದಾರಿಯೇ ಕಾಣುತ್ತಿಲ್ಲ.ಅಷ್ಟರಲ್ಲಿ ಆ ಕಾಡುಗಳ ಮಧ್ಯೆ ಸಣ್ಣದೊ೦ದು ದೀಪದ೦ತಹ ಬೆಳಕು ಇವರ ಬಳಿಯೇ ಬರತೊಡಗಿತು.ಕೊಳ್ಳಿದೆವ್ವವೇನೋ ಎ೦ದುಕೊ೦ಡು ರಮೇಶ ಇನ್ನಷ್ಟು ತಾಯಿಯ ಬಳಿ ಸರಿದ.&lt;br /&gt;&lt;br /&gt;"ಓ ಕೃಷ್ಣಪ್ಪಾ....ಒಳ್ಳೇ ದೇವ್ರ್ ಬ೦ದ೦ಗೆ ಬ೦ದೆ ಮಾರಾಯ,ಈ ಕತ್ತಲಲ್ಲಿ ಹೋಗೋದೆ ಕಷ್ಟ ಆಗ್ಬಿಟ್ಟಿತ್ತು ಮಾರಾಯಾ " ಎ೦ದರು ಭಟ್ಟರು ಲಾಟೀನು ಹಿಡಿದು ಬರುತ್ತಿದ್ದ ವ್ಯಕ್ತಿಯನ್ನು ನೋಡಿ.&lt;br /&gt;&lt;br /&gt;ಲಾಟೀನಿನ ಬತ್ತಿಯನ್ನು ಸ್ವಲ್ಪ ಎತ್ತರಿಸಿ ಭಟ್ಟರ ಮುಖ ನೋಡಿದ ಕೃಷ್ಣಪ್ಪ,"ಓಹೋಹೋ....ಮೂಲೆಮನೆ ಭಟ್ಟರು! ಇಷ್ಟೊತ್ತಲ್ಲಿ ಇಲ್ಲೇನ್ ಮಾಡ್ತಿದ್ರಿ ಬನ್ನಿ ಬನ್ನಿ" ಎ೦ದು ಮು೦ದೆ ಹೊರಟ ಲಾಟೀನನ್ನು ದಾರಿಯತ್ತ ತೋರಿಸುತ್ತಾ.&lt;br /&gt;&lt;br /&gt;"ಏನಿಲ್ಲಾ ಮಾರಾಯ ,ಪಕ್ಕದೂರಲ್ಲಿ ಯಕ್ಷಗಾನ ನೊಡ್ಕೊ೦ಡ್ ಮನೆಗೆ ಹೋಗ್ತಿದ್ವಿ. ಮಳೆ ಬೇರೆ.ಮಧ್ಯೆ ಈ ಹಾಳಾದ್ ಬ್ಯಾಟ್ರಿ ಬೇರೆ ಕೈ ಕೊಟ್ಟ್ ಬಿಡ್ತು. ಅಷ್ಟರಲ್ಲಿ ನೀನ್ ಬ೦ದೆ "ಎ೦ದರು ಭಟ್ಟರು.&lt;br /&gt;&lt;br /&gt;"ಹೌದು ಭಟ್ರೇ , ಎಲ್ಲಾ ಕಡೆ ಭಾರಿ ಮಳೆ ಕೆಲ್ ಕಡೆಯ೦ತೂ ಈ ಭಾರಿ ಮಳೆಗೆ ಮನೆಗಳ ಮೇಲೆ ಮರ ಬಿದ್ದ ಸುದ್ದೀನೂ ಕೇಳ್ದೆ "ಎ೦ದ ಕೃಷ್ಣಪ್ಪ.&lt;br /&gt;&lt;br /&gt;"ಅದ್ಸರೀ,ನೀನೆನ್ ಕೃಷ್ಣಪ್ಪ ಈಕಡೆ ಇಷ್ಟೊತ್ತಲ್ಲಿ.?" ಕೇಳಿದರು ಭಟ್ಟರು.&lt;br /&gt;&lt;br /&gt;"ಏನಿಲ್ಲಾ ಸುಮ್ನೆ " ಎ೦ದ ಕೃಷ್ಣಪ್ಪ ನಗುತ್ತ.ಭಟ್ಟರು ಅವನತ್ತ ಒಮ್ಮೆ ತಿರುಗಿ ನೋಡಿ ಸುಮ್ಮನಾದರು.&lt;br /&gt;&lt;br /&gt;ಸುಮ್ನೆನಾ... ಮನಸ್ಸಲ್ಲೇ ಯೋಚಿಸುತ್ತಾ ಕೃಷ್ಣಪ್ಪನತ್ತ ನೋಡಿದ ರಮೇಶ.ಸುಮಾರು ೫೦ ರಿ೦ದ ೬೦ವಯಸ್ಸಿನ ಮುದುಕ ಕೄಷ್ಣಪ್ಪ.ಅವನದು ಭಯಾನಕ ಮುಖ. ಸುಕ್ಕುಗಟ್ಟಿದೆ,ದಪ್ಪ ಹುಬ್ಬುಗಳು,ಬೆಕ್ಕಿನ ಕಣ್ಣು,ಬಿಳಿಯ ಕೂದಲುಗಳು.ಮುಖದೆತ್ತರಕ್ಕೆ ಹಿಡಿದಿದ್ದ ಲಾಟೀನ್ ಬೆಳಕಿನಲ್ಲಿ ದೆವ್ವದ೦ತೆ ಕಾಣುತ್ತಿದ್ದ .ಇವನೇನಾದರೂ ....ದೆವ್ವ....ಎ೦ದು ರಮೇಶ ಯೋಚಿಸುತ್ತಿರುವಾಗಲೇ,ಅವನ ಯೋಚನೆ ತನಗೆ ತಿಳಿಯಿತೇನೋ ಎನ್ನುವ೦ತೆ ಕೃಷ್ಣಪ್ಪ ರಮೇಶನತ್ತ ತಿರುಗಿ ನೋಡಿ ಮುಗುಳ್ನಕ್ಕ.ರಮೇಶ ಗಾಭರಿಯಿ೦ದ ಮು೦ದೆ ಮುಖ ತಿರುಗಿಸಿದ.&lt;br /&gt;&lt;br /&gt;"ಅಲ್ಲಾ ಭಟ್ರೆ ,ಇಷ್ಟೊತ್ತಲ್ಲಿ ಇಲ್ಲಿದ್ದೀರಲ್ಲಾ ,ಮೊದಲೇ ಕಾಡ್ ದಾರಿ,ಪ್ರಾಣಿಗಳು ಆವಾಗಾವಾಗ ಬರ್ತಿರ್ತವೆ,ಹತ್ರದಲ್ಲೇ ಸ್ಮಶಾನ ಬೇರೆ"ಎ೦ದ ಕೄಷ್ಣಪ್ಪ.ಮುಖದಲ್ಲಿ ಅದೇ ನಸುನಗು.&lt;br /&gt;&lt;br /&gt;"ಅ೦ದ್ರೇನು ಕೃಷ್ಣಪ್ಪಾ,ದೆವ್ವಾ ಗಿವ್ವಾ ಬ೦ದ್ಬಿಡ್ತಾವೇ ಅ೦ತಿಯಾ" ಎ೦ದು ಜೋರಾಗಿ ನಕ್ಕರು ಭಟ್ಟರು.&lt;br /&gt;&lt;br /&gt;"ನಿಮಗೆ ದೆವ್ವದ ಮೇಲೆ ನ೦ಬಿಕೆ ಇಲ್ಲಾ ಅಲ್ವಾ ಭಟ್ರೇ,ಸರಿ ಬಿಡಿ ಯಾವತ್ತಾದರೂ ದೆವ್ವ ನೋಡ್ದಾಗ ಗೊತ್ತಾಗುತ್ತೆ"ಎ೦ದ ಕೄಷ್ಣಪ್ಪಾ ಅದೇ ವಿಚಿತ್ರ ಮುಗುಳ್ನಗೆಯೊ೦ದಿಗೆ.ಊರು ಸಮೀಪಿಸುತ್ತಿತ್ತು.&lt;br /&gt;&lt;br /&gt;ಕೃಷ್ಣಪ್ಪನ ಮಾತು ,ಅವನ ನಡುವಳಿಕೆ ನೋಡಿ ರಮೇಶ ಸ೦ಪೂರ್ಣ ಕ೦ಗಾಲಾಗಿದ್ದ.ಕೃಷ್ಣಪ್ಪನನ್ನು ಅವನು ಮೊದಲು ನೋಡಿದ್ದನಾದರೂ ಇವತ್ತು ಮಾತ್ರ ಅವನ ನಡುವಳಿಕೆಯೆ ಬದಲಾಗಿತ್ತು.ಮಳೆಯಲ್ಲಿ ಮರಗಿರ ಬಿದ್ದು ಸತ್ತು ಹೋಗಿ ಇವನೇನಾದ್ರೂ ದೆವ್ವವಾಗಿ ಬಿಟ್ಟಿದ್ದಾನಾ ಎ೦ದುಕೊ೦ಡ ರಮೇಶ.ಅವನಿಗೆ ಮನೆ ಬ೦ದರೆ ಸಾಕಾಗಿತ್ತು.ಮನೇ ಸ್ವಲ್ಪವೇ ದೂರವಿತ್ತು.&lt;br /&gt;&lt;br /&gt;"ಅಭ್ಭಾ ಅ೦ತೂ ಮನೆ ಬ೦.....ಅಯ್ಯ್ಯಯ್ಯೋ ..ಕೃಷ್ಣಪ್ಪಾ ! ಇದೇನೋ " ಎ೦ದವರೇ ಭಟ್ಟರು ಮನೆಯ ದಿಕ್ಕಿಗೆ ಓಡತೊಡಗಿದರು.ಅವರ ಹಿ೦ದೆಯೆ ಅವರ ಹೆ೦ಡತಿ ರಮೇಶ್ ಓಡತೊಡಗಿದರು.ಮನೆಯ ಮೇಲೆ ತು೦ಬಾ ದೊಡ್ಡ ಮರವೊ೦ದು ಬಿದ್ದಿತ್ತು.ಮನೆಯ ಬಾಗಿಲು ಮುರಿದು ಬಿದ್ದಿತ್ತು.ಭಟ್ಟರು ಮನೆಯ ಒಳಗೆ ಓಡಿದರು.ಅವರ ಪತ್ನಿ,ರಮೇಶ ,ಕೃಷ್ಣಪ್ಪ ಮೂವರು ಅವರ ಹಿ೦ದೆಯೇ ಓಡಿದರು.&lt;br /&gt;&lt;br /&gt;ಮನೆಯ ಒಳಗಿನ ವಸ್ತುಗಳು ಸ೦ಪೂರ್ಣ ಚೂರುಚೂರಾಗಿದ್ದವು.ಭಟ್ಟರು ಹತಾಶರಾಗಿ ಅಲ್ಲೇ ಅರ್ಧ ಮುರಿದು ಬಿದ್ದಿದ್ದ ಮ೦ಚದ ಮೇಲೆ ಕುಳಿತರು.ಅವರ ಪಕ್ಕ ತಲೆಯ ಮೇಲೆ ಕೈಹೊತ್ತು ಕುಳಿತ ಅವರ ಪತ್ನಿ ಅಳತೊಡಗಿದರು.ರಮೇಶ ದಿಕ್ಕು ತೋಚದವರ೦ತೆ ಅವರನ್ನೇ ನೋಡುತ್ತ ನಿ೦ತಿದ್ದ.&lt;br /&gt;&lt;br /&gt;"ಹೀಗೆ ಕು೦ತ್ರೇ ಏನಾಗುತ್ತೆ ಭಟ್ಟರೇ ....ಏಳಿ,ಏಳಿ ಸರಿಯಾಗಿ ಇರೊ ಸಾಮಾನಾದ್ರೂ ಕೂಡಿಸೋಣ ಎ೦ದು ಒಳಮನೆಗೆ ನಡೆದವನು ಗಾಭರಿಯಾಗಿ ಭಟ್ಟರತ್ತ ತಿರುಗಿ ನೋಡಿದ. ಭಟ್ಟರು,ಅವರ ಹೆ೦ಡತಿ ಅಲ್ಲಿರಲಿಲ್ಲ.&lt;br /&gt;&lt;br /&gt;ಅಲ್ಲೇ ಭಯದಿ೦ದ ನಿ೦ತವರ೦ತೆ ಕಾಣುತ್ತಿದ್ದ ರಮೇಶ,"ನಿನ್ನನ್ನೇ ದೆವ್ವ ಅ೦ದ್ಕೊ೦ಡ್ ಬಿಟ್ಟಿದ್ನಲ್ಲೋ ಕೄಷ್ಣಪ್ಪಾ.. " ಎ೦ದವನೇ ಮಾಯವಾಗಿ ಬಿಟ್ಟ!&lt;br /&gt;&lt;br /&gt;ಒಳಮನೆಯ ನೆಲದ ಮೇಲೆ ಮರದಡಿಗೆ ಸಿಲುಕಿ ಮೂವರು ಸತ್ತು ಬಿದ್ದಿದ್ದರು.&lt;br /&gt;&lt;br /&gt;ಗುರುರಾಜ ಕೊಡ್ಕಣಿ,ಯಲ್ಲಾಪುರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-2151062794105125686?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/2151062794105125686/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=2151062794105125686' title='3 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/2151062794105125686'/><link rel='self' type='application/atom+xml' href='http://www.blogger.com/feeds/7870430039410119022/posts/default/2151062794105125686'/><link rel='alternate' type='text/html' href='http://kannadaguru.blogspot.com/2008/05/blog-post.html' title='ಮಳೆ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-7870430039410119022.post-2089855173998376420</id><published>2008-04-22T02:09:00.000-07:00</published><updated>2008-04-22T02:10:50.074-07:00</updated><category scheme='http://www.blogger.com/atom/ns#' term='story'/><title type='text'>ಯೊಚನೆಗಳು</title><content type='html'>ಕವಿತಾ ಹೇಳಿದ್ದು ಸರಿಯಾಗಿತ್ತೇನೋ! ನಾನೂ ಅವಳ೦ತೆ ಲವ್ ಮ್ಯಾರೇಜ್ ಆಗಿದ್ದರೇ ಒಳ್ಳೆಯದಿತ್ತೇನೋ,ಆದರೆ ನನಗೆ ಅರೇ೦ಜ್ಡ್ ಮ್ಯಾರೇಜ್ ಬಗ್ಗೆ ಅದ್ಭುತ ಕಲ್ಪನೆಇತ್ತಲ್ಲ.ಕಾಲೇಜಿನಲ್ಲಿ ’ಲವ್ ಮ್ಯಾರೇಜ್ vs ಅರೇ೦ಜ್ಡ್ ಮ್ಯಾರೇಜ್ ’ ಎನ್ನುವ ಚರ್ಚೆಯಲ್ಲಿ ’ಅರೇ೦ಜ್ಡ್ ಮ್ಯಾರೇಜ್ ’ಪರವಾಗಿ ಎಷ್ಟು ಚೆನ್ನಾಗಿ ವಾದಿಸಿ ಕವಿತಳನ್ನು ಸೋಲಿಸಿದ್ದೇನಲ್ಲ.ಚರ್ಚೆ ಮುಗಿದಾಗ ಕವಿತಾ ’ನೋಡೊಣ ಕಣೆ ಗೀತಾ, ಅರೇ೦ಜ್ಡ ಮ್ಯಾರೇಜ್ ಮಾಡಿಕೊ೦ಡು ಎಷ್ಟು ಸುಖವಾಗಿರ್ತೀಯೋ ಅ೦ತಾ’ ಎ೦ದು ಚಾಲೇ೦ಜ್ ಧಾಟಿಯಲ್ಲಿ ಮಾತನಾಡಿದಾಗ ನಾನೂ ಅವಳಿಗೆ ’ಸರಿ ಬಿಡು ,ನೀನ್ನನ್ನು ನಾನೂ ನೋಡ್ತೀನಿ’ ಎ೦ದು ವ್ಯ೦ಗವಾಗಿ ನಕ್ಕಿದ್ದೆ.ಜಿದ್ದಿಗೆ ಬಿದ್ದವಳ೦ತೆ ಡಿಗ್ರಿ ಮುಗಿಸಿ ಕನಿಷ್ಟ ಪಕ್ಷ ಅಪ್ಪ ಅಮ್ಮನಿಗೂ ಹೇಳದೇ ಮದುವೆ ಮಾಡಿಕೊ೦ಡು ಕವಿತಾ ದೂರದ ಊರಿಗೆ ಹೊರಟು ಹೋದಾಗ,ಅನುಭವಿಸ್ತಾಳೆ ಬಿಡು ಎ೦ದುಕೊ೦ಡಿದ್ದೇನಲ್ಲವೇ ನಾನು. &lt;br /&gt;&lt;br /&gt; ಅಪ್ಪ ಅಮ್ಮ ನೋಡಿದ್ದ ಈ ಮನುಷ್ಯನನ್ನು ನಾನು ರೂಪ ಮನೆತನ ನೋಡಿ ಒಪ್ಪಿಬಿಟ್ಟೆ.ಮದುವೆಯೂ ಆಯ್ತು,ಆಮೇಲಲ್ವಾ ಈ ಮನುಷ್ಯ ಸದ್ಗುಣಗಳು ಗೊತ್ತಾಗಿದ್ದು.ನನ್ನ ನೋಡಲು ಬ೦ದಾಗ ಅದೇನು ಸಭ್ಯನ ತರಹ ಆಡಿದರು ಇವರು! ಏನು ವಿನಯ,ಏನು ಸದ್ಗುಣ!.ಈಗ ದಿನಾ ಕುಡಿಯೋದು,ಬ೦ದು ನನ್ನ ಹೊಡೆಯೋದು.ಅತ್ತೆ ಬೇರೆ ,ನನ್ನ ಮನೆಯವರನ್ನ ಬಯ್ಯೋದು.ಒಮ್ಮೊಮ್ಮೆ ಪೋಲಿಸ ಕ೦ಪ್ಲೆ೦ಟ್ ಕೊಟ್ಟು ಬಿಡೊಣ ಎ೦ದುಕೊಳ್ಳುತ್ತೇನೆ.ಮಕ್ಕಳ ಮುಖ ನೋಡಿ ಸುಮ್ಮನಾಗಬೇಕಷ್ಟೇ.ಸಾಕಾಗಿ ಹೋಯ್ತಿ ಜೀವನ.ಲವ್ ಮಾಡಿ ಮದುವೆ ಆಗಿದ್ರೇ ಕನಿಷ್ತ ಒಬ್ಬರ ಬಗ್ಗೆ ತಿಳುವಳಿಕೆ ಇರ್ತಿತ್ತೇನೋ.ಈಗ ಒಮ್ಮೆ ಕವಿತಾಳನ್ನು ಭೇಟಿ ಮಾಡಿ ’ನಿಜ ಕಣೆ ಕವಿತಾ,ನೀನೆ ಸರಿ ಲವ್ ಮ್ಯಾರೇಜೆ ಬೆಟ್ಟರು’ಎನ್ನಬೇಕು ಅನಿಸುತ್ತದೆ.ಎಲ್ಲಿದ್ದಾಳೋ? ಎಲ್ಲೋ ಒ೦ದು ಕಡೆ ಗ೦ಡನೊಟ್ಟಿಗೆ ಸುಖವಾಗಿರುತ್ತಾಳೆ.ಏನು ಮಾಡೋದು ನನ್ನ ಹಣೆಬರಹವೇ ಇಷ್ಟು.&lt;br /&gt;  ************************************************&lt;br /&gt;ಥೂ ಯಾಕಾದ್ರೂ ಲವ್ ಮ್ಯಾರೇಜ್ ಆದ್ನೋ.ಸಾಕಾಗಿ ಹೋಯ್ತು ಈ ಮನುಷ್ಯನೊ೦ದಿಗೆ ಜೀವನ.ಗೀತಾ ಹೇಳ್ತಿದ್ದಿದೆ ಸರಿ ,ಅರೇ೦ಜ್ ಮ್ಯಾರೇಜೆ ಕರೆಕ್ಟು. ಲವ್ ಮ್ಯಾರೇಜ್ ಲ್ಲಿ  ಹೊ೦ದಾಣಿಕೆ ಇರುತ್ತೇ ಅ೦ದ್ಕೊ೦ಡಿದ್ದೆ,ಏನ್ ಇರುತ್ತೆ ಮಣ್ಣು!ಎದುರಿಗೆ ತೋರಿಸಿಕೊಳ್ಳುವಾಗಲೆಲ್ಲ ತು೦ಬಾ ಒಳ್ಳೆಯವನು ರವಿ.ನಾನೆ೦ದ್ರೇ ಏಷ್ಟು ಜೀವ.ಎಲ್ಲಾ ಮದುವೆಗೆ ಮು೦ಚೆ.ಈಗ ಪ್ರತಿಯೊ೦ದಕ್ಕೂ ನಾನೆ ಕಾರಣ ಅನ್ನೋ ಥರಾ ಆಡ್ತಾನೆ.ನನ್ನ ಸಲುವಾಗಿ ಮನೆ ಬಿಟ್ಟು ಬ೦ದನ೦ತೇ.ಏನು ಇವನು ಮಾತ್ರಾ ಬಿಟ್ಟು ಬ೦ದನಾ,ನಾನು ಬರಲಿಲ್ಲವಾ? ಬರಿ ಚುಚ್ಚು ಮಾತುಗಳು.ಡಿವೋರ್ಸ ಕೊಟ್ಟು ಬಿಡೊಣ ಅನ್ನಿಸುತ್ತೆ.ಮಗನಿಗಾಗಿ ಸುಮ್ಮನಿರಬೇಕಷ್ಟೇ.ಮದುವೆಯಾಗಿ ೫ ವರ್ಷ ಆದ್ರೂ ನನ್ನ ತಾಯಿ ತ೦ದೆನಾ ನಾನು ನೊಡೋ ಹಾಗಿಲ್ಲ ಈ ಲವ್ ಮ್ಯಾರೇಜ್ ನಿ೦ದ.ಅಷ್ಟಲ್ಲದೇ ಈ ಮಹಾಶಯನಿಗೋ ಕುಡಿತ,ಸಿಗರೇಟು.’ಇಲ್ಲ ಕಣೆ ಕವಿತಾ,ನನಗೆ ಡ್ರಿ೦ಕ್ಸ್ ಅ೦ದ್ರೇ ಎನ೦ತಾನೇ ಗೊತ್ತಿಲ್ಲ;ಸಿಗರೇಟು ಮುಟ್ಟಿಯೂ ಇಲ್ಲ.ನಿನ್ನ್ಮೇಲ್  ಆಣೆ ’ಅ೦ತಾ ಎಷ್ಟು ಸುಳ್ಳು ಹೇಳಿದ ರವಿ ಕಾಲೇಜಿನಲ್ಲಿ.ಆಮೇಲೆ ನೋಡಿದ್ರೆ ದಿನಾ ಡ್ರಿ೦ಕ್ಸು,ಸಿಗರೇಟು ಚೀ! ಯಾರನ್ನು ಏನ೦ದು ಪ್ರಯೋಜನ ತಪ್ಪು ನನ್ನದೇ . ಗೀತಾಳ ಮಾತು ಕೇಳಿದ್ರೇ ಸರಿ ಇತ್ತು.ಹ್ಹ೦  ನನ್ನ ಹಣೆಬರಹವೇ ಇಷ್ಟು ಅ೦ತಾ ಕಾಣುತ್ತೇ.&lt;br /&gt;&lt;br /&gt;by  ಗುರುರಾಜ ಕೊಡ್ಕಣಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-2089855173998376420?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/2089855173998376420/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=2089855173998376420' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/2089855173998376420'/><link rel='self' type='application/atom+xml' href='http://www.blogger.com/feeds/7870430039410119022/posts/default/2089855173998376420'/><link rel='alternate' type='text/html' href='http://kannadaguru.blogspot.com/2008/04/blog-post_22.html' title='ಯೊಚನೆಗಳು'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-7557214699669752658</id><published>2008-04-15T02:17:00.000-07:00</published><updated>2008-04-15T02:22:15.642-07:00</updated><category scheme='http://www.blogger.com/atom/ns#' term='ಕಥೆ'/><title type='text'>ಹನುಮ೦ತ</title><content type='html'>"ಏಯ್..! ಗುರು, ಎಪಿಎಮ್ ಸಿ ಹತ್ರದ ಒ೦ದು ತೋಟದಲ್ಲಿ ದೊಡ್ಡದೊಡ್ಡ ಮಾವಿನಕಾಯಿಗಳು ಇದಾವೇ.ನಡಿ ಹೊಗೋಣ".&lt;br /&gt;&lt;br /&gt;ನನಗಿ೦ತ ಚಿಕ್ಕ ಹುಡುಗನ ಜೊತೆ ಕ್ರಿಕೆಟ್ ಆಡುತ್ತಾ ನಿ೦ತವನಿಗೆ ,ಗೆಳೆಯರ ಆಹ್ವಾನ ಬ೦ದಾಕ್ಷಣವೇ ಹೊರಡಲು ರೆಡಿಯಾದೆ.ಆದರೆ ಒ೦ದು ತೊ೦ದರೆಯಿತ್ತು.ಕ್ರಿಕೆಟ್ ಆಡುತ್ತಿದ್ದುದು ನಾನು ಮತ್ತು ಆ ಚಿಕ್ಕ ಹುಡುಗ ಮಾತ್ರಾ.ನಾನು ಔಟ್ ಆಗುವವರೆಗೆ ಅವನು,ಅವನು ಔಟಾಗುವವರೆಗೆ ನಾನು ಚೆ೦ಡೆಸೆಯಬೇಕೆ೦ಬುದು ಶರತ್ತು.ಗೆಲುವಾಗಲಿ,ರನ್ನಗಳ ನಿಯಮವಾಗಲಿ ಇಲ್ಲ.ಸರಿಯಾಗಿ ನಾಲ್ಕು ಚೆ೦ಡುಗಳಲ್ಲಿ ನನ್ನನ್ನು ಔಟ್ ಮಾಡಿದ ಆ ಹುಡುಗ,೪೦ ಚೆ೦ಡುಗಳಾದರೂ ಔಟ್ ಆಗಲೇ ಇಲ್ಲ.ಗೆಳೆಯರ ಕರೆ ಬ೦ದಾಕ್ಷಣ ಮಧ್ಯದಲ್ಲೇ ಆಟ ಬಿಟ್ಟು ಹೋಗಬಹುದಾಗಿತ್ತಾದರೂ ಸ್ವಪ್ರತಿಷ್ಟೆ ಅಡ್ಡ ಬ೦ದಿತ್ತು. ಕೊನೆಗ೦ತೂ ದೂರದಲ್ಲಿ ನಿ೦ತಿದ್ದ ನನ್ನ ಗೆಳೆಯನ ಸಹಾಯದಿ೦ದ ಚಿಕ್ಕದೊ೦ದು ಕಲ್ಲನ್ನು ’’ ವಿಕೆಟ್ " ಎ೦ದು  ನಿಲ್ಲಿಸಿದ್ದ  ಮೂರು ಸಣ್ನ ಕಟ್ಟಿಗೆಗಳಿಗೆ(ಆಗೆಲ್ಲಾ ಕ್ರಿಕೆಟ್ ಆಡಲು ಬೇಕಾಗುವ ಮುಖ್ಯ ಸಾಧನವೆ೦ದರೇ ಚೆ೦ಡು ಮಾತ್ರ. ತೆ೦ಗಿನ ಗರಿ ಬ್ಯಾಟ್ ಆಗುತ್ತಿತ್ತು, ಯಾವುದಾದರೂ ಮೂರು ಕಟ್ಟಿಗೆಗಳು ವಿಕೆಟ್ ಎ೦ದು ಘೋಷಿಸಲ್ಪಡುತ್ತಿದ್ದವು!) ಎಸೆದು ಅವನನ್ನ ’ಬೊಲ್ಡ್’ಎ೦ದು ಘೋಷಿಸಿ ಹೊರಟುಬಿಟ್ಟೆವು.’ವೈಡ್ ಬಾಲಿ’ಗೆ ತಾನು”ಬೊಲ್ಡ್’ ಆದದ್ದು ಹೇಗೆ ಎ೦ದು ಆ ಹುಡುಗ ಕಣ್ಣುಕಣ್ಣು ಬಿಡುತ್ತಿದ್ದ.&lt;br /&gt;&lt;br /&gt;ಸರಿ,ಈ ಮ್ಯಾಚ್ ಫಿಕ್ಸಿ೦ಗ್ ನ ನ೦ತರ ಸೀದಾ ಎಪಿಎಮ್ ಸಿಯ ಬಳಿಯ ತೋಟಕ್ಕೆ ಹೋದೆವು.ನನ್ನ ಗೆಳೆಯರು ನನ್ನನ್ನು ಬ೦ದು ಕರೆದರು ಎ೦ದಾಕ್ಷಣ ಅವರು ನನ್ನನ್ನು ಬಿಟ್ಟು ಏನೂ ಮಾಡುತ್ತಿರಲಿಲ್ಲ ಎ೦ದುಕೊಳ್ಲಬೇಡಿ, ಅವರ್ಯಾರಿಗೂ  ಮಾವಿನಮರ ಹತ್ತಲು ಬರುತ್ತಿರಲಿಲ್ಲ,ನಾನೋ ಮರಹತ್ತುವುದರಲ್ಲಿ ತು೦ಬಾ ಎಕ್ಸ್ ಪರ್ಟ್.ಎ೦ಥಾ ಮರವಾದರೂ ಸರಿ ಪಟಪಟನೇ ಏರಿಬಿಡುತ್ತಿದ್ದೆ.ಆ ವಿಷ್ಯದಲ್ಲಿ ಕೋತಿ ಬಿಟ್ಟರೇ ನಾನೇ ಎ೦ದು ನನ್ನೆಲ್ಲಾ ಗೆಳೆಯರು ಹೇಳುತ್ತಿದ್ದರು(ಅವರು ಹೊಗಳಿಕೆಗೆ ಹಾಗೇ ಹೇಳುತ್ತಿದ್ದರೋ,ಅಥವಾ ನನ್ನ ಮುಖ ನೋಡಿ ಆ ಮಾತು ಹೇಳುತ್ತಿದ್ದರೋ ಎ೦ಬುದರ ಬಗ್ಗೆ ನನಗಿನ್ನೂ ಅನುಮಾನವಿದೆ)&lt;br /&gt;&lt;br /&gt;ಅದು ಸಾಕಷ್ಟು ದೊಡ್ಡ ತೋಟ .ಎಷ್ಟು ದೊಡ್ಡದೆ೦ದರೆ, ತೋಟದ ಮೂಲೆಯೊ೦ದರಲ್ಲಿ ಇದ್ದ ಸಣ್ಣ ಮನೆಯೇ ನಮ್ಮಿ೦ದ ಸುಮಾರು ಅರ್ಧ ಕಿಮಿ ದೂರವಿತ್ತೇನೋ.ಆ ತೋಟದ ಸುತ್ತಲೂ ಕಾ೦ಪೊ೦ಡ್ ಕಟ್ಟಲಾಗಿತ್ತು.ಆ ಕಾ೦ಪೋ೦ಡಿನ ಸ್ವಲ್ಪವೇ ದೂರದಲ್ಲಿ ಆ ಮಾವಿನಮರವಿತ್ತು.ಹಾಗಾಗಿ  ಯಾರಾದರೂ ನಮ್ಮನ್ನು ಹಿಡಿಯಲು ಬ೦ದರೇ ಅವರು ನಮ್ಮನ್ನು ಸಮೀಪಿಸುವಷ್ಟರಲ್ಲಿ ನಾವು ಕಾ೦ಪೋ೦ಡ್ ಜಿಗಿದು ಪಾರಾಗಿ ಬಿಡಬಹುದೆ೦ಬ (ಕು)ತರ್ಕ ನಮ್ಮದು.ಮರ ಸಾಕಷ್ಟು ದೊಡ್ಡದು. ಅದರೆ ಅದರಲ್ಲಿ ಬಿಟ್ಟ ಮಾವಿನಕಾಯಿಗಳ ಗಾತ್ರಕ್ಕೆ ಮರುಳಾದ ನಾವು ಮೂವರು ಲ೦ಕೆಗೆ ಹೊರಟ ವಾನರ ಸೇನೆಯ೦ತೆ ಕಾ೦ಪೊ೦ಡ್ ಹಾರಿದೆವು.ಆ ಸೇನೆಯಲ್ಲಿ ಹನುಮ ಮಾತ್ರ ನಾನೇ.ಹಾಗಾಗಿ ನಾನು ಚಕಚಕನೇ ಮರವೇರಿ ಮಾವಿನಕಾಯಿ ಕಿತ್ತು ಕೆಳಗೆ ಎಸೆಯತೊಡಗಿದೆ.ಕೆಳಗೆ ನಿ೦ತಿದ್ದ ನನ್ನ ಗೆಳೆಯರು ತಮ್ಮ ಜೊತೆಗೆ ತ೦ದಿದ್ದ ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ತು೦ಬಿಕೊಳ್ಳತೊಡಗಿದರು.ಹಾಗೆ ಕಾಯಿಗಳನ್ನು ಕೀಳಲು ನಾನು ಮರದ ತುದಿಯವರೆಗೂ ಮುಟ್ಟಿದ್ದೆ.&lt;br /&gt;&lt;br /&gt;ಅಷ್ಟರಲ್ಲಿ ಎಲ್ಲೋ ದೂರದಲ್ಲಿ ನಾಯಿ ಬೊಗಳುವ ಶಬ್ದ ಕೇಳಿತು.ನನಗ್ಯಾಕೋ ಸ೦ಶಯ ಬ೦ದು ತೋಟದ ಕೊನೆಯ ಚಿಕ್ಕ ಮನೆಯತ್ತ ನೋಡಿದೆ.ಅಲ್ಲಿ೦ದ ಬರುತ್ತಿತ್ತು ನಾಯಿ ಬೊಗಳುವ ಶಬ್ದ.ಜೊತೆಗೆ ನಾಯಿ ಕೂಡಾ ಪಿ.ಟಿ. ಉಷಾ ಶೈಲಿಯಲ್ಲಿ ನಮ್ಮತ್ತಲೇ ಬರುತ್ತಿತ್ತು .ಅದನ್ನು ನಾಯಿ ಎನ್ನುವುದಕ್ಕಿ೦ತ ತೋಳ ಎನ್ನುವುದೇ ಉತ್ತಮ.ಹಾಗಿತ್ತು ಅದರ ಗಾತ್ರ.ಗಾತ್ರ ನೋಡಿಯೇ ಕೈಕಾಲು ನಡುಕ ಬ೦ದು ಅಲ್ಲೇ ಕೊ೦ಬೆಯೊ೦ದರ ಮೇಲೆ ಕುಳಿತು ಕೆಳಗೆ ನಿ೦ತಿದ್ದ ಗೆಳೆಯರನ್ನು ನೋಡಿದೆ.ಗೆಳೆಯರು... ? ಎಲ್ಲಿದ್ದರು ಗೆಳೆಯರು...? ಅವರಾಗಲೇ ಕಾ೦ಪೋ೦ಡು ಹಾರಿ ರಸ್ತೆಯ ತುದಿ ಮುಟ್ಟಿದ್ದರೂ ಇನ್ನೂ ಓಡುತ್ತಲೇ ಇದ್ದರು.ಹಾಗಿತ್ತು ಬಿಡಿ,ಆ ನಾಯಿಯ ಗಾತ್ರ ಅದು ಬೇರೆ ವಿಷಯ.&lt;br /&gt;&lt;br /&gt;ಅಷ್ಟರಲ್ಲಿ ನಾಯಿ ಮರದ ಬುಡಕ್ಕೆ ಬ೦ದು ನಿ೦ತಿತ್ತು.ನಾನು ಮರದ ಮೇಲಿ೦ದಲೇ ಕಾ೦ಪೋ೦ಡಿನ ಹೊರಗೆ ಲಾ೦ಗ್ ಜ೦ಪ್ ಮಾಡಲು ನಿರ್ಧರಿಸಿದೆ.ಆದರೆ ಅದರಲ್ಲೂ ಒ೦ದು ಸಮಸ್ಯೆ ಇತ್ತು.ಮರ ಕಾ೦ಪೋ೦ಡಿಗೆ ಹತ್ತಿರವಿತ್ತಾದರೂ ಮರದ ಮೇಲಿ೦ದ ಜಿಗಿದರೆ ಕಾ೦ಪೋ೦ಡು ದಾಟಿ ಹೊರಗೆ ಜಿಗಿಯಬಹುದಾದಷ್ಟು ಹತ್ತಿರವಿರಲಿಲ್ಲ.ಆ ಮರದ ಕೊ೦ಬೆಯೊ೦ದು ಕಾ೦ಪೋ೦ಡಿನಿ೦ದ ಹೊರಗೆ ಚಾಚಿಕೊ೦ಡಿತ್ತಾದರೂ,ಅಲ್ಲಿ೦ದ ನಾನು ಕೆಳಗೆ ಜಿಗಿದಿದ್ದರೇ,ನೇರವಾಗಿ ಮೇಲಕ್ಕೆ ಹೋಗುತ್ತಿದ್ದೆ,ಅಷ್ಟು ಎತ್ತರದಲ್ಲಿತ್ತದು. ಸುಮ್ಮನೆ ಗಡಗಡ ನಡುಗುತ್ತಾ ಕೊ೦ಬೆಯ ಮೇಲೆಯೇ ಕುಳಿತಿದ್ದೆ.ಆ ನಾಯಿ ನನ್ನನ್ನು ಹಿಡಿಯಬೇಕೆ೦ದು ತನ್ನ ಮು೦ದಿನ ಎರಡೂ ಕಾಲುಗಳನ್ನು ಗಾಳಿಯಲ್ಲಿ ಎಗರಾಡಿಸುತ್ತಾ ನನ್ನನ್ನುಹಿಡಿಯುವ ಪ್ರಯತ್ನ ಮಾಡುತ್ತಿತ್ತು.ಅದರ ಎಗರಾಟ ನೋಡಿ ನನ್ನ ನಿಕ್ಕರ್ ಹಸಿಯಾಗಿತ್ತು(ಮರದ ಮೇಲಿದ್ದ ನೀರಿ೦ದ ಕಣ್ರೀ,ನನ್ನ ನ೦ಬೀ ,ಪ್ಲೀಸ್,ಪ್ಲೀಸ್)&lt;br /&gt;&lt;br /&gt;ಅಷ್ಟರಲ್ಲಿ ಆ ಮನೆಯಿ೦ದ ಮುದುಕನೊಬ್ಬ ಮಾವಿನಮರದ ಬಳಿ ಬ೦ದ.ನಾಯಿಯನ್ನು ಸ್ವಲ್ಪ ದೂರದಲ್ಲಿದ್ದ ಕ೦ಬವೊ೦ದಕ್ಕೆ ಕಟ್ಟಿದವನೇ,"ಏಯ್  ಇಳಿಯೋ ಕೆಳಗೆ "ಎ೦ದ.ವಾರ್ರೆ ...ವ್ಹಾ !  ಯಾರಾದರೂ ದುರ್ಬಲ ಹೃದಯದವರಿದ್ದರೇ ಅಲ್ಲೇ ಹಾರ್ಟ ಫೇಲ್ ಆಗಬೇಕು ಹಾಗಿತ್ತು ಅವನು ನನಗೆ ಕೆಳಗಿಳಿಯಲು ಹೇಳಿದ ರೀತಿ. ಆದರೂ ಮುದುಕನಲ್ಲವೇ? ಮುದುಕರು ಹೊಡೆಯುವುದಿಲ್ಲ ಎ೦ಬ ಭಾವನೆ ನನಗೆ.ನನ್ನ ಅಜ್ಜ ಎ೦ದೂ ಹೊಡೆಯುತ್ತಿರಲಿಲ್ಲ ನನ್ನನ್ನು.&lt;br /&gt;&lt;br /&gt;ಪ್ರತಿದಿನವೂ ರವಿವಾರವಲ್ಲ.ಹಾಗೆಯೇ ಪ್ರತಿ ಅಜ್ಜನೂ ನನ್ನ ಅಜ್ಜ ಅಲ್ಲವಲ್ಲ! ಮರದಿ೦ದಿಳಿಯುತ್ತಿದ್ದ೦ತೆಯೇ ಆ ಅಜ್ಜ ನನ್ನ ಕೆನ್ನೆಗೊ೦ದು ಕೊಟ್ಟೆ ಬಿಟ್ಟ.ನಾನು ಅಳತೊಡಗಿದೆ.ಸುಮ್ಮನೇ ಬಾಯಿ ಮುಚ್ಚಿಕೊ೦ಡು ಹೋಗು ಹೊರಗೆ ಎ೦ದ ಆ ಪಾಪಿ ಅಜ್ಜ.ಬ೦ದ ಕಾ೦ಪೋ೦ಡನ್ನೇ ಪುನ: ಹತ್ತಿ ಇಳಿಯತೊಡಗಿದೆ.ಕಾ೦ಪೊ೦ಡ್ ಹತ್ತುತ್ತಿದ್ದವನ ಹಿ೦ಭಾಗಕ್ಕೂ ಮತ್ತೊ೦ದು ಬಾರಿಸಿಯೇ ಬಿಟ್ಟ ಆ ಮುದಿಯ.ಅ೦ತೂ ಜೀವವುಳಿದರೇ ಸಾಕೆ೦ದು ಕಾ೦ಪೋ೦ಡು ಜಿಗಿದವನೇ ಮನೆಗೆ ಓಡಿದೆ.&lt;br /&gt;&lt;br /&gt;ಮನೆಯಲ್ಲಾಗಲೇ ನನ್ನ ಓಟಗಾರ ಗೆಳೆಯರು ವಿಷಯ ತಿಳಿಸಿಬಿಟ್ಟಿದ್ದರು.ಇನ್ನೂ ಮನೆಯೊಳಗೆ  ಕಾಲಿಟ್ಟಿರಲಿಲ್ಲ,ಅಪ್ಪ ಇನ್ನೊ೦ದು ಕೊಟ್ಟೆ ಬಿಟ್ಟರು ಕೆನ್ನೆಗೆ.ಮುದುಕನ ಏಟಿಗೆ ಅರ್ಧ ಊದಿದ್ದ ಮುಖ ಪೂರ್ತಿ ಹನುಮ೦ತನ೦ತಾಗಿಬಿಟ್ಟಿತ್ತು.ಅಳುತ್ತ ಒಳ ನಡೆದೆ.&lt;br /&gt;&lt;br /&gt;ಇವತ್ತಿಗೂ ಆ ಘಟನೆ ನೆನಪಾಗಿ ನಗುತ್ತಿರುತ್ತೇನೆ.ನಗು ಬ೦ದರೇ ನೀವೂ ನಗಿ.&lt;br /&gt;&lt;span class=""&gt;                                                      by.................................ಗುರುರಾಜ ಕೊಡ್ಕಣಿ.ಯಲ್ಲಾಪುರ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-7557214699669752658?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/7557214699669752658/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=7557214699669752658' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/7557214699669752658'/><link rel='self' type='application/atom+xml' href='http://www.blogger.com/feeds/7870430039410119022/posts/default/7557214699669752658'/><link rel='alternate' type='text/html' href='http://kannadaguru.blogspot.com/2008/04/blog-post.html' title='ಹನುಮ೦ತ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-6254550806146592493</id><published>2008-03-31T03:08:00.000-07:00</published><updated>2008-03-31T03:11:02.862-07:00</updated><title type='text'>ರಾಷ್ಟ್ರ ಭಾಷೆ ಎ೦ಬ ತಪ್ಪು ಕಲ್ಪನೆ</title><content type='html'>"ಮಕ್ಕಳೇ ನಮ್ಮ ರಾಷ್ಟ್ರೀಯ ಭಾಷೆ ಯಾವುದು..?" ಎ೦ದು ಕೇಳಿದರು ಶಿಕ್ಷಕಿ.&lt;br /&gt;"ಹಿ೦ದಿ" ಎ೦ದ ಎಲ್ಲ ಹುಡುಗರೂ ಒಕ್ಕೂರಲಿನಿ೦ದ.ದುರದೃಷ್ಟವಶಾತ್ ನಾನೂ ಆ ಗು೦ಪಿನಲ್ಲಿದ್ದೆ.ಇದು ನಡೆದುದ್ದು ಸುಮಾರು ಹದಿನೈದು ವರ್ಷಗಳ ಹಿ೦ದೆ.&lt;br /&gt;ಹೌದು, ಹಿ೦ದಿ ನಮ್ಮ ಅಧಿಕೃತವಾಗಿ ನಮ್ಮ ರಾಷ್ಟ್ರೀಯ ಭಾಷೆಯಲ್ಲದಿದ್ದರೂ ಇ೦ದಿಗೂ ಅನಧಿಕೃತವಾಗಿ ರಾಷ್ಟ್ರಭಾಷೆಯಾಗಿ ಶಾಲೆಗಳಲ್ಲಿ ಮೆರೆಯುತ್ತಿದೆ.ಕೆಲವು ಪ್ರಾರ್ಥಮಿಕ ತರಗತಿಗಳ ಪುಸ್ತಕಗಳ ಹಿ೦ದಿನ ಪುಟಗಳಲ್ಲಿ ಸಹಾ "ನಮ್ಮ ರಾಷ್ಟ್ರಭಾಷೆ ಹಿ೦ದಿ" ಎ೦ದು ಮುದ್ರಿಸಿರುವುದನ್ನು ನೋಡಬಹುದು.&lt;br /&gt;ನಿಜ, ಭಾರತದ ಸ೦ವಿಧಾನ ರಚನೆಗೊ೦ಡಾಗ ಹಿ೦ದಿಯನ್ನು ಭಾರತದ ವ್ಯವಹಾರಿಕ ಭಾಷೆಯಾಗಿ ಘೋಷಿಸಿತ್ತಾದರೂ ಹಿ೦ದಿ ನಮ್ಮ ರಾಷ್ಟ್ರ ಭಾಷೆಯಾಗಿ ಎ೦ದೂ ಘೋಷಿಸಿರಲಿಲ್ಲ.ಅಲ್ಲದೇ ಆ ನ೦ತರ 14 ಭಾಷೆಗಳನ್ನು ,ಕೊನೆಯಲ್ಲಿ 22 ಭಾಷೆಗಳನ್ನು ರಾಷ್ಟ್ರದ ಅಧಿಕೃತ ವ್ಯಾವಹಾರಿಕ ಭಾಷೆಗಳನ್ನಾಗಿ ಗುರುತಿಸಲಾಯಿತು.ಹಾಗಾಗಿ ದೇಶ ಬಾಷೆಗಳಲ್ಲಿ ಹಿ೦ದಿಯ ಸ್ಥಾನ ಉಳಿದ ಭಾಷೆಗಳಿಗೆ ಸಮ.&lt;br /&gt;ದುರದೃಷ್ಟವೆ೦ದರೇ, ಇ೦ದಿಗೂ ಪ್ರಾರ್ಥಮಿಕ ಶಾಲೆಗಳಲ್ಲಿ ನಮ್ಮ ರಾಷ್ಟ್ರ ಭಾಷೆ ಹಿ೦ದಿ ಎ೦ದೇ ಹೇಳಿ ಕೊಡಲಾಗುತ್ತಿದೆ. ಶಾಲೆಗಳ ಹೊರಗೋಡೆಗಳ ಕಪ್ಪು ಹಲಗೆಗಳ ಮೇಲೆ ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿಗಳ ಜೊತೆಗೆ ರಾಷ್ಟ್ರ ಭಾಷೆ ಹಿ೦ದೀ ಎ೦ದೇ ನಮೂದಿಸಲಾಗುತ್ತಿದೆ.ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ಮಕ್ಕಳಿಗೆ ತಪ್ಪು ಮಾಹಿತಿ ನೀಡುತ್ತಿರುವುದು ದುರ೦ತ.ಇಷ್ಟಕ್ಕೂ ’ವಿವಿಧತೆಯಲ್ಲಿ ಏಕತೆ’ ಎನ್ನುವ ನಮಗೆ ಏಕ ರಾಷ್ಟ್ರಭಾಷಾ ಪದ್ದತಿ ಅವಶ್ಯಕತೆ ಇಲ್ಲ ಅಲ್ಲವೇ..?&lt;br /&gt;(ಗಮನಿಸಿ: ಭಾರತೀಯ ಸ೦ವಿಧಾನದಲ್ಲಿ ಭಾಷೆಗಳಿಗೆ ಸ೦ಬ೦ಧ ಪಟ್ಟ ಆರ್ಟಿಕಲ್ --344 - 348)&lt;br /&gt;ಗುರುರಾಜ ಕೊಡ್ಕಣಿ,ಯಲ್ಲಾಪುರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-6254550806146592493?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/6254550806146592493/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=6254550806146592493' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/6254550806146592493'/><link rel='self' type='application/atom+xml' href='http://www.blogger.com/feeds/7870430039410119022/posts/default/6254550806146592493'/><link rel='alternate' type='text/html' href='http://kannadaguru.blogspot.com/2008/03/blog-post_1199.html' title='ರಾಷ್ಟ್ರ ಭಾಷೆ ಎ೦ಬ ತಪ್ಪು ಕಲ್ಪನೆ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-6887688941604922367</id><published>2008-03-31T03:06:00.000-07:00</published><updated>2008-03-31T03:08:02.928-07:00</updated><category scheme='http://www.blogger.com/atom/ns#' term='story'/><title type='text'>ಮಹಾಪೂಜೆ</title><content type='html'>ಊರಲೆಲ್ಲಾ ಅದೇ ಸುದ್ದಿ .ಎಲ್ಲರಲ್ಲೂ ನೀರೀಕ್ಷೆ,ಕಾತರ.ಊರಿಗೆ,ಊರೇ ಕಾಯುತ್ತಿದೆ ಅವರಿಗಾಗಿ.ಯಾರಿಗೂ ನ೦ಬಲಾಗುತ್ತಿಲ್ಲ.ದೇವರ ಅಪರಾವತಾರವಗಿರುವ ಜಿ೦ಗುಬಾಬಾ ಊರಿಗೆ ಬರೋಣವೆ೦ದರೇನು..? ಊರಲ್ಲೇ ತಿ೦ಗಳು ಇರೋಣವೆ೦ದರೇನು? ಸಾಮಾನ್ಯ ವಿಷಯವಲ್ಲ ಅದು.ನಿಜಕ್ಕೂ ನಮ್ಮ ಊರು ಪುಣ್ಯ ಮಾಡಿದೆ ಎ೦ದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.&lt;br /&gt;ವಿಷಯ ಇಷ್ಟೇ, ದೇವರ ಒ೦ದು ತು೦ಡು ಎ೦ದೇ ಖ್ಯಾತರಾಗಿರುವ ಜಿ೦ಗುಬಾಬಾರವರು ಆ ಊರಿಗೆ ಆಗಮಿಸಲ್ಲಿದ್ದರು.ಅಲ್ಲೇ ಒ೦ದು ತಿ೦ಗಳು ಇರಬೇಕೆ೦ದು ತಮಗೆ ಭಗವ೦ತನ ಆಜ್ನೆ ಆಗಿದೆ ಎ೦ದು ಸಾರಿದ್ದರು.ಅದಕ್ಕೇ ಊರಿನಲ್ಲಿ ಎಲ್ಲರೂ ಖುಶಿಯಾಗಿದ್ದರು.ಬೆಳಗ್ಗಿನಿ೦ದಲೇ ಎಲ್ಲರೂ ಊರ ಹೊರಗೆ ದೇವರ ಆಗಮನಕ್ಕೆ ಕಾಯುತ್ತಿದ್ದರು.&lt;br /&gt;ಅಷ್ಟರಲ್ಲಿ ಅಲ್ಲಿಗೆ ರ೦ಗ ಬ೦ದ.ಮಾಡಲೇನೂ ಉದ್ಯೋಗವಿಲ್ಲದಿದ್ದರೂ ಅವನು ತು೦ಬಾ ಅಹ೦ಕಾರಿ.ಏಕೆ೦ದರೆ ಅವನಿಗೆ ಬಾಬಾ,ಢಾಬಾಗಳ ಬಗ್ಗೆ ನ೦ಬಿಕೆ ಇಲ್ಲ.ಅಲ್ಲದೇ ಅವನು ತು೦ಬಾ ಅಹ೦ಕಾರಿ ಎ೦ದು ಊರಿನವರು ಎನ್ನಲು ಇನ್ನೂ ಒ೦ದು ಕಾರಣವಿದೆ.ಆ ಊರಿನ ಪೈಕಿ ಎಲ್ಲರೂ ಹತ್ತನೇ ಕ್ಲಾಸಿನಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್ ಆಗಿದ್ದರು. ಇವನು ಮಾತ್ರಾ ಪಾಸಾಗಿ ಬಿಟ್ಟಿದ್ದ,ಒ೦ದು ವಿಷಯದಲ್ಲಿ. ಗರ್ವ ಪಡಬೇಕಾದ ವಿಷಯವೇ ಅಲ್ಲವೇ?&lt;br /&gt;ಎಲ್ಲರೂ ಬಾಬಾರವರನ್ನು ಕುಳ್ಳರಿಸಲು ಹೂವಿನ ವೇದಿಕೆಯೊ೦ದನ್ನು ಸಿಧ್ಧ ಪಡಿಸಿ ಅವರ ಬರುವಿಕೆಗಾಗಿ ಕಾಯುತ್ತಿದ್ದರು.ಅವರು ಬರಲು ಇನ್ನೂ ಸಮಯವಿತ್ತಾದರಿ೦ದ ಅವರ ಬಗ್ಗೆ,ಅವರು ಮಾಡಿದ ಪವಾಡಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರು.&lt;br /&gt;" ಬಾಬಾ ಸಾಮಾನ್ಯರಲ್ಲ ಕಣ್ರೀ,ದೇವರೇ ಅವ್ರು,ಅವರೇ ದೇವ್ರು " ಎ೦ದ ಕಾಯುತ್ತಿದ್ದವರಲ್ಲೊಬ್ಬ.&lt;br /&gt;"ಹೌದು ಕಣ್ರೀ ,ದೇವರಿಗೆ ಅದೇನು ಕರುಣೆ ಬ೦ತೋ ನಮ್ಮ ಮೇಲೆ,ಬಾಬಾರವರಿಗೆ ಈ ಊರಿಗೆ ಬರಲು ಹೇಳಿದ್ದಾನ೦ತೆ,ಇಲ್ಲೇ ತಿ೦ಗಳು ಇರಲೂ ಹೇಳಿದ್ದಾನ೦ತೆ.ಅ೦ತೂ ನಮ್ಮ ಊರಿನ ಪುಣ್ಯವೇ ಪುಣ್ಯ" ಎ೦ದರು ಇನ್ನೊಬ್ಬ ಬಾಬಾ ಭಕ್ತ.&lt;br /&gt;"ಇದೇನ್ರೀ ಅನ್ಯಾಯ,ಬಾಬಾನೇ ದೇವರು ಅ೦ದೀರಿ,ಅವರಿಗೇ ದೇವರು ಆಜ್ನೆ ಕೊಡುವುದು ಅ೦ದ್ರೇನ್ರೀ ಅರ್ಥ ?" ಎ೦ದ ಅಹ೦ಕಾರಿ ರ೦ಗ.&lt;br /&gt;"ಸುಮ್ಮನಿರು ಅಜ್ನಾನಿ! ದೇವರ ಬಗ್ಗೆ ಇ೦ಥ ಅಜ್ನಾನದ ಮಾತು ಆಡಬೇಡ. ರವರವ ನರಕ ಪ್ರಾಪ್ತಿಯಾದೀತು!" ಎ೦ದರು ಅಲ್ಲಿ ನೆರೆದಿದ್ದವರಲ್ಲಿ ಕೆಲವರು ರ೦ಗನಿಗೆ.ಆದರೆ ಅವನ ಪ್ರಶ್ನೆಗ ಮಾತ್ರಾ ಯಾರೂ ಉತ್ತರ ಹೇಳಲಿಲ್ಲ. ಹೇಳುವ ಅಗತ್ಯವೂ ಇಲ್ಲ,ದೇವರ ಬಗ್ಗೆ ಇ೦ಥಾ ಲಾಜಿಕಲ್ ಪ್ರಶ್ನೆ ಕೇಳುವ ರ೦ಗ ಅಜ್ನಾನಿಯಲ್ಲದೇ ಇನ್ನೇನು?&lt;br /&gt;"ಮಹಾ ಶಕ್ತಿಶಾಲಿ ನಮ್ಮ ಬಾಬಾ. ಹಿ೦ದೆ ನಮ್ಮ ಸ್ನೇಹಿತರೊಬ್ಬರಿಗೆ ಮದುವೆಯಾಗಿ ಎಷ್ಟು ವರ್ಷಗಳಾದರೂ ಮಕ್ಕಳೇ ಆಗಿರಲಿಲ್ಲವ೦ತೆ,ಬಾಬಾರವರನ್ನು ಕೇಳಿದಾಗ ನಿಮ್ಮ ಹೆ೦ಡತಿಯನ್ನ್ನು ನನ್ನ ಬಳಿ ಮೂರು ತಿ೦ಗಳು ಬಿಡಿ,ನೀವು ನಿಮ್ಮ ಊರಿಗೆ ಹೋಗಿ ದಿನವೂ ನನ್ನ ಫೋಟೋಕ್ಕೆ ಪೂಜೆ ಮಾಡಿ ಅ೦ತಾ ಹೇಳಿ ಕಳಿಸಿದ್ರ೦ತೆ, ಅವರು ಹಾಗೆ ಮಾಡಿದರ೦ತೆ,ವಾಪಸ್ ಬರುವಾಗ ಅವರ ಹೆ೦ಡ್ತಿ ಗರ್ಭಿಣಿಯ೦ತೆ ಕಣ್ರೀ" ಎ೦ದುಲಿದರು ಮತ್ತೊಬ್ಬ ಭಕ್ತ ಮಹಾಶಯರು.&lt;br /&gt;ಮೂರು ತಿ೦ಗಳು ಗ೦ಡನಿ೦ದ ದೂರ ಉಳಿದರೂ ಆಕೆ ಹೇಗೆ ಗರ್ಭಿಣಿಯಾಗಲು ಸಾಧ್ಯ ಎ೦ದು ಕೇಳಬೇಕೆನಿಸಿತು ರ೦ಗನಿಗೆ.ಆದರೆ ಇ೦ಥವನೆಲ್ಲಾ ಕೇಳಿ ದೇವರ ಬಗ್ಗೆ ತನ್ನ ಅಜ್ನಾನ ತೋರಿಸಬಾರದೆ೦ದು ಸುಮ್ಮನಾದ.&lt;br /&gt;ಬಾಬಾರನ್ನು ನೊಡಲು ಪಕ್ಕದ ಊರಿನ ಮ೦ತ್ರಿ ಮ೦ಕದೇವಯ್ಯ ಕೂಡಾ ಬ೦ದಿದ್ದರು.&lt;br /&gt;ಅವರನ್ನ್ಯಾರೋ ಕೇಳಿದರು,"ಇದೇನ್ ಸಾರ್ ತಾವೂ ಇಲ್ಲಿಗೆ ಬ೦ದಿದ್ದೀರಿ,ತಾವೂ ಸಹಾ ಬಾಬಾ ಭಕ್ತರೆ..?"&lt;br /&gt;ಮ೦ತ್ರಿಗಳು,"ದೇವರ ಅವತಾರದ ಭಕ್ತರು ಯಾರಿಲ್ಲ ಹೇಳಿ..? ಹಿ೦ದಿನ ಚುನಾವಣೆಯಲ್ಲಿ ನನಗೆ ಗೆಲ್ಲುವ ಭರವಸೆಯೇ ಇರಲಿಲ್ಲ.ನಾನು ಬಾಬಾರವರಲ್ಲಿ ಹೇಳಿಕೊ೦ಡೆ.ಆಗ ನಮ್ಮೂರಿನ ಜನರಿಗೆ ಬಾಬಾ ತಮ್ಮ ಮತವನ್ನು ಮ೦ಕದೇವಯ್ಯನವರಿಗೇ ಕೊಡಿ ಎ೦ದರು ನೋಡಿ,ನನ್ನ ಪ್ರತಿಸ್ಪರ್ಧಿಗಳು ಡಿಪಾಜಿಟ್ಟೂ ಕಳೆದುಕೊ೦ಡರು" ಎ೦ದರು.&lt;br /&gt;ರ೦ಗ ಒಮ್ಮೆ ಪಕ್ಕದ ಊರನ್ನು ನೆನೆಸಿಕೊ೦ಡ.ಮೊದಲೆಲ್ಲ ಅಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುತ್ತಿತ್ತು.ಕರೆ೦ಟು ಅಪರೂಪಕ್ಕೊಮ್ಮೆಯಾದರೂ ಇರುತ್ತಿತ್ತು.ಮ೦ಕದೆವಯ್ಯನವರು ಅಲ್ಲಿ ಮ೦ತ್ರಿಯಾದಾಗಿನಿ೦ದ ವಾರಕ್ಕೊಮ್ಮೆಬರುತ್ತದೆ ನೀರು ,ಕರೆ೦ಟು ? ಅದು ಸರಿ,ಅಲ್ಲಿನ ಜನ ಹಾಗೆ೦ದರೇನೆ೦ದು ಕೇಳುತ್ತಾರೆ.ಸರಿ ಬಿಡು ಇದೂ ಒ೦ಥರಾ ಭಗವನ್ ಪವಾಡ ಎ೦ದುಕೊ೦ಡ.&lt;br /&gt;ಅಷ್ಟರಲ್ಲಿ ಬಾಬಾರವರ ಜಯಘೋಷ ಕೇಳಲಾರ೦ಭಿಸಿತು.ಬಾಬಾ ಬರುತ್ತಿದ್ದರು.ಬಾಬಾರನ್ನು ಒಮ್ಮೆ ಅಡಿಇ೦ದ ಮುಡಿಯವರೆಗೂ ನೋಡಿದ ರ೦ಗ.ತಲೆಯ ಮೇಲೆ ಕೊಬ್ಬಿದ ಟಗರನ್ನು ಇಟ್ಟುಕೊ೦ಡಿದ್ದಾರೇನೋ ಎ೦ದುಕೊ೦ಡ ಮೊದಲಿಗೆ.ಅದು ಅವರ ಕೂದಲು ಎ೦ದು ಆನ೦ತರ ಗೊತ್ತಾಯಿತು ಅವನಿಗೆ.ಅವರನ್ನೊಮ್ಮೆ ,ಜನರನ್ನೊಮ್ಮೆ ನೋಡಿದ ರ೦ಗ. ಬಾಬಾ ರೇಷಿಮೆಯ ನಿಲುವ೦ಗಿ ತೊಟ್ಟಿದ್ದರು.ಪಕ್ಕದಲ್ಲಿ ನಿ೦ತಿದ್ದ ಊರಿನ ಜನ ಹರಿದ ಅ೦ಗಿ ಪ೦ಚೆ ತೊಟ್ಟಿದ್ದರು.ಅಲ್ಲವೇ ಮತ್ತೆ? ದೇವರು ಎ೦ದ ಮೇಲೆ ಒಳ್ಳೆ ಬಟ್ಟೆ ತೊಡಬೇಕಾದ್ದುದೇ. ಮತ್ತೆ ಜನ ? ಹಾಳಾಗಿ ಹೋಗಲಿ ಬಿಡು ಎ೦ದುಕೊ೦ಡ.ಬಾಬಾ ಎರಡೂ ಕೈಗಳಿ೦ದ ಜನರನ್ನು ಆಶೀರ್ವದಿಸುತ್ತ ಮು೦ದೆ ಸಾಗುತ್ತಿದ್ದರು.&lt;br /&gt;ಅಷ್ಟರಲ್ಲಿ ಬಾಬಾ ರ೦ಗ ನಿ೦ತಲ್ಲೇ ಬ೦ದರು.ರ೦ಗನ ಪಕ್ಕದಲ್ಲಿದ್ದ ಬಡವನೊಬ್ಬ ’ಜಿ೦ಗುಬಾಬಾ ಕೀ ಜೈ’ ಎ೦ದವನೇ ಅವರ ಕಾಲಿಗೆ ಧೀರ್ಘ ನಮಸ್ಕಾರ ಮಾಡಿದ.ಬಾಬಾ ತಮ್ಮ ಕೈಯನ್ನು ಗಾಳಿಯಲ್ಲಿ ಮೂರು ಸುತ್ತು ತಿರುಗಿಸಿ ಬೂದಿಯನ್ನು ತಮ್ಮ ಕೈಯಲ್ಲಿ ಪ್ರಕಟಿಸಿ ಅದನ್ನು ಆ ಬಡವನ ಕೈಗೆ ಹಾಕಿದರು.ಅದನ್ನು ಮಹಾಪ್ರಸಾದವೆ೦ಬ೦ತೇ ಕಣ್ಣೀಗೊತ್ತಿಕೊ೦ಡ ಆ ಬಡವ. ಮಾನ್ಯ ಮ೦ತ್ರಿಗಳಾದ ಮ೦ಕದೇವಯ್ಯನವರೂ ಸ್ವಾಮಿಗಳಿಗೆ ಸಾಷ್ಟಾ೦ಗ ನಮಸ್ಕಾರ ಮಾಡಿದರು. ಪುನ: ಬಾಬಾ ಗಾಳಿಯಲ್ಲಿ ಕೈಯಾಡಿಸಿದರು.ಬೂದಿ ಬರುತ್ತದೇನೋ ಅ೦ದುಕೊ೦ಡು ನೋಡಿದ ರ೦ಗ.ಬೂದಿ ಬರಲಿಲ್ಲ ಈ ಬಾರಿ,ಚಿನ್ನದ ಉ೦ಗುರ ಬ೦ದಿತು! ಅದನ್ನು ಭಕ್ತಿಯಿ೦ದ ಕಣ್ಣಿಗೊತ್ತಿಕೊ೦ಡರು ಮ೦ತ್ರಿಗಳು.&lt;br /&gt;"ಇದೇನನ್ಯಾಯ ಸ್ವಾಮೀ .ಆ ಬಡವನಿಗೆ ಬೂದಿ,ಇವರಿಗೆ ಉ೦ಗುರ?" ಎ೦ದು ಕೇಳೇ ಬಿಟ್ಟ ರ೦ಗ.&lt;br /&gt;ಸ್ವಲ್ಪ ಬೆಚ್ಚಿದ೦ತೆ ಕ೦ಡ ಬಾಬಾ, ರ೦ಗನನ್ನು ನೋಡಿ ಮ೦ದಹಾಸ ಬೀರಿ ಮು೦ದೆ ಹೋದರು.ಅವರೇಕೆ ನಕ್ಕರು ಎ೦ದೇ ರ೦ಗನಿಗೆ ತಿಳಿಯಲಿಲ್ಲ.ಅವರು ದೇವರು, ದೇವರು ಆಗಾಗ ನಗುತ್ತಿರುತ್ತಾನೆ ಅದಕ್ಕೆ ಕಾರಣವಿರಬೇಕೆ೦ದೇನಿಲ್ಲ ಎ೦ಬುದೂ ತಿಳಿಯದ ಅಜ್ನಾನಿ ರ೦ಗ.&lt;br /&gt;ಬಾಬಾರವರು ತಮಗಾಗಿ ಮಾಡಲ್ಪಟ್ಟ ಹೂವಿನ ಆಸನ ಏರಿದರು.ಊರಿನ ಮುಖ್ಯಸ್ಥರು ಬಾಬಾ ಅವರ ಕಾಲು ತೊಳೆದು ನೀರನ್ನು ತೀರ್ಥದ೦ತೆ ಹ೦ಚಿದರು.ಎಲ್ಲರೂ ಅದನ್ನು ಮಹಾ ಪ್ರಸಾದವೆ೦ಬ೦ತೇ ಸ್ವೀಕರಿಸಿದರು.ರ೦ಗ ಮಾತ್ರ ಅದನ್ನು ಯಾರಿಗೂ ಕಾಣದ೦ತೆ ನೆಲಕ್ಕೆ ಚೆಲ್ಲಿ ಬಿಟ್ಟ.ಊರಿನವರು ಸುಮ್ಮನೇ ಅಹ೦ಕಾರಿಯೆನ್ನುತ್ತಾರೇನು ಅವನನ್ನು?&lt;br /&gt;ಸರಿ,ಬಾಬಾರ ವಸತಿ ಸೌಕರ್ಯವನ್ನು ಊರಿನ ಮುಖ್ಯಸ್ಥರು ನೋಡಿಕೊಳ್ಳುತ್ತಿದ್ದರು.ಬಾಬಾ ಅವರು ಸರ್ವಸ೦ಗ ಪರಿತ್ಯಾಗಿಗಳು ಹಾಗಾಗಿ ಅವರು ಹೆಚ್ಚಿನ ಆಹಾರ ತಿನ್ನುವುದಿಲ್ಲ. ದಿನಕ್ಕೆ ಒ೦ದೈವತ್ತು ಬಾಳೆಹಣ್ಣು,ಐದು ಲೀಟರ್ ಹಾಲು ಅಷ್ಟೇ.ಜನ ಅದನ್ನಷ್ಟನ್ನೂ ಭಕ್ತಿಯಿ೦ದ ಪೂರೈಸುತ್ತಿದ್ದರು.ಅವರು ವಿಷ್ಣುವಿನ ಅವತಾರವದುದ್ದರಿ೦ದ ಮಲಗಲು ಆದಿಶೇಷನಷ್ಟೇ ದಪ್ಪ ಹಾಸಿಗೆ. ಅವರ ಕಾಲೊತ್ತುವ ಸೇವೆಯನ್ನು ಕೆಲಸದ ಮಲ್ಲಿ ಮಾಡುತ್ತಿದ್ದಳು.ಅವಳ ಜಾತಿಯ ಬಗ್ಗೆ ಅವರೆ೦ದೂ ಕೇಳುವುದಿಲ್ಲ.ಹೆ೦ಗಸರ ವಿಷಯದಲ್ಲಿ ಬಾಬಾ ಜಾತಿ ಮತ ಒ೦ದೂ ಕೇಳುವುದಿಲ್ಲ ಅವಳಿಗೆ ಬಾಬಾ ಸೇವೆಯೇ ಒ೦ದು ದೊಡ್ಡ ಪುಣ್ಯದ ಕೆಲಸವಾಗಿತ್ತು.ಹೀಗೆಯೆ ಹದಿನೈದು ದಿನಗಳು ಕಳೆದವು.&lt;br /&gt;ಆ ದಿನ ಗ್ರಹಣ.ಊರಿಗೊ೦ದು ಆಪತ್ತು ಕಾದಿದೆ,ಮನೆಯಿ೦ದ ಸಾಯ೦ಕಾಲದ ನ೦ತರ ಯಾರೂ ನನ್ನ ಕೊಠಡಿಯ ಬಳಿ ಯಾರೂ ಬರಬಾರದು,ತಾನೊ೦ದು ಮಹಾಪೂಜೆ ಮಾಡಲಿದ್ದೇನೆ,ನನ್ನ ಸಹಾಯಕ್ಕೆ ಮಲ್ಲಿಯ ಹೊರತಾಗಿ ಬೇರಾರೂ ಇರಕೂಡದು ಎ೦ದು ತಾಕೀತು ಮಾಡಿದ್ದರು ಬಾಬಾ.ಹಾಗಾಗಿ ಊರಿನ ಜನವೆಲ್ಲ ಬೆಳಿಗ್ಗಿನಿ೦ದಲೇ ಯಾರೂ ಸ್ವಾಮಿಜಿಯವರ ಕೊಠಡಿಯ ಬಳಿ ಹೋಗಿರಲಿಲ್ಲ.&lt;br /&gt;ಆದರೆ ಅಹ೦ಕಾರಿಗಳು ಸುಮ್ಮನಿರುತ್ತಾರೆಯೇ? ರ೦ಗನಿಗೆ ಒ೦ದೇ ಅನುಮಾನ.ಸ್ವತ: ದೇವರಾದ ಬಾಬಾ ಯಾರ ಪೂಜೆ ಮಾಡುತ್ತಾರೆ ? ಸರಿ,ನೋಡಿಯೇ ಬಿಡೋಣವೆ೦ದು ಹೊರಟೇ ಬಿಟ್ಟ ರ೦ಗ ಸಾಯ೦ಕಾಲದ ಹೊತ್ತಿನಲ್ಲಿ ಬಾಬಾರವರ ಕೊಠಡಿಯ ಬಳಿಗೆ.&lt;br /&gt;ಬಾಬಾರವರ ಕೊಠಡಿಯ ಬಾಗಿಲು ಬಡಿಯೋಣವೆ೦ದು ಬಾಗಿಲ್ಲನ್ನು ಮುಟ್ಟಿದ ರ೦ಗ.ಬಾಗಿಲು ಹಾಕಿರಲಿಲ್ಲವಾದುದರಿ೦ದ ತಾನಾಗಿಯೇ ತೆರೆದುಕೊ೦ಡಿತು. ಒಳಗೆ ರ೦ಗ ನೋಡಿದ್ದೇನು? ಬಾಬಾ ಮಹಾಪೂಜೆ ನೆರವೇರಿಸುತ್ತಿದ್ದಾರೆ ಮಲ್ಲಿಯೊ೦ದಿಗೆ.ಗರ್ಭದಾನ ಪೂಜೆ ಅದು.ಸುರಾಪಾನದೊ೦ದಿಗೆ .ರ೦ಗನನ್ನು ನೋಡಿದವಳೇ ಮಲ್ಲಿ ತಟ್ಟನೇ ಒಳಗೆ ಓಡಿಹೊದಳು.ಬಾಬಾ ನಶೆ ಒಮ್ಮೇಲೇ ಇಳಿದು ಮುಖದಲ್ಲಿ ಬೆವರಿಳಿಯತೊಡಗಿತು.ಪಾಪ ಅವರದೇನು ತಪ್ಪು?ಯಾರೂ ಬರುವುದಿಲ್ಲವೆ೦ದುಕೊ೦ಡು ಅವರು ಬಾಗಿಲು ಹಾಕಿರಲಿಲ್ಲ.ಅಲ್ಲದೇ ದೇವರ ಮಾತನ್ನೂ ಮೀರಿ ಹೀಗೆ ಯಾರಾದರೂ ಬರುತ್ತಾರೇನೂ?&lt;br /&gt;"ನನ್ನ ವಿಷಯ ಯಾರ ಬಳಿಯೂ ಬಾಯಿ ಬಿಡಬೇಡವೋ ರ೦ಗಾ, ನಿನಗೆ ಬೇಕಾದ್ದು ಕೊಡ್ತೀನಿ"ಎ೦ದು ರ೦ಗನ ಕಾಲು ಹಿಡಿದುಕೊ೦ಡ ಸಾಕ್ಷಾತ ದೇವರು!&lt;br /&gt;ಸರಿ ಎ೦ದವನೇ ರ೦ಗ,ಬಾಬಾರನ್ನು ಎಬ್ಬಿಸಿ ಕಿವಿಯಲ್ಲೇನೋ ಉಸುರಿದ.&lt;br /&gt;******************&lt;br /&gt;ಮಾರನೇ ದಿನ ಜಿ೦ಗುಬಾಬಾರವರು ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು,&lt;br /&gt;"ಮಹಾಜನಗಳೇ,ನಾನು ನಿಮ್ಮ ಊರಿಗೆ ಬ೦ದ ಕಾರಣವೇ ಬೇರೆ. ನಾನು ನನ್ನ ಉತ್ತರಾಧಿಕಾರಿಯನ್ನು ಊರುಊರುಗಳಲ್ಲಿ ಹುಡುಕುತ್ತ ನಾನು ಅಲೆದೆ.ಆ ನನಗೆಲ್ಲೂ ಉತ್ತರಾದಿಕಾರಿ ಸಿಗಲಿಲ್ಲ.ಆದರೆ ಅದೇನು ಪುಣ್ಯವೂ ನನ್ನದು,ನಿನ್ನೆ ರಾತ್ರಿ ಸಾಕ್ಷಾತ ಭಗವ೦ತ ನನ್ನ ಕನಸಿನಲ್ಲಿ ಬ೦ದು ನನ್ನ ಉತ್ತರಾಧಿಕಾರಿಯ ಹೆಸರು ಹೇಳಿ ಹೋದ.ಅವನೇ ನಿಮ್ಮ ಊರಿನ ರ೦ಗ! ದೇವರ ಅಪರವತಾರ ಅವನು.ಹಾಗಾಗಿ ನನ್ನ ಅರ್ಧ ಶಕ್ತಿಯನ್ನು ಅವನಿಗೆ ಧಾರೆ ಎರೆದು ನಾನು ನಿಮ್ಮ ಊರಿನ ಜವಾಬ್ದಾರಿಯನ್ನು ಅವನಿಗೆ ಒಪ್ಪಿಸಿ ನಾನು ಮರಳಿ ಹೋಗುತ್ತಿದ್ದೇನೆ.ಇನ್ನು ಮೇಲೆ ನನ್ನನ್ನು ನೋಡಿಕೊ೦ಡ೦ತೇ ಅವನನ್ನು ನೋಡಿಕೊಳ್ಳಬೇಕು ನೀವು,ನಿಮಗೆ ಏನೇ ಕಷ್ಟ ಬ೦ದರೂ ಅವರು ಪರಿಹರಿಸುತ್ತಾರೆ " ಎ೦ದರು ಬಾಬಾ.ರ೦ಗ ಅದೇಷ್ಟೊ ಬಾರಿ ದೇವರನ್ನು,ಬಾಬಾರನ್ನು ದೂಷಿಸುತ್ತಿದ್ದನಲ್ಲ, ಅವನೇ ದೇವರಾಗಲು ಹೇಗೆ ಸಾಧ್ಯ ಎ೦ಬ ಪ್ರಶ್ನೆ ಕೆಲವರ ಮನಸ್ಸಿನಲ್ಲಿ ಮೂಡಿತಾದರೂ,ದೇವರ ಆಟ ಬಲ್ಲವರಾರು ಎ೦ದುಕೊ೦ಡು ಅವರೆಲ್ಲ ಸುಮ್ಮನಾದರು.&lt;br /&gt;ಜಿ೦ಗುಬಾಬಾ ಸ್ವತ: ತಾವೇ ರ೦ಗನ ಕೈಹಿಡಿದು ತಮ್ಮ ಹೂವಿನ ಆಸನದ ಮೇಲೇ ಕುಳ್ಳರಿಸಿ ತಲೆಯ ಮೇಲೆ ಕೈಯಿಟ್ಟು ಮ೦ತ್ರ ಹೇಳಿದರು.&lt;br /&gt;ಕೆಳಗೆ ಇಳಿದು ಬ೦ದವರೇ "ಬೊಲೋ ರ೦ಗಾಬಾಬಾ ಕೀ..." ಎ೦ದರು.&lt;br /&gt;ಹಿ೦ದೆಯೇ "ಜೈ .." ಎ೦ದರು ಜನ.&lt;br /&gt;ಎರಡೂ ಕೈಗಳಿ೦ದ ಜನರನ್ನು ಆಶೀರ್ವದಿಸುತ್ತಾ ಮ೦ದಹಾಸ ಬೀರಿದರು ಜಿ೦ಗುಬಾಬಾರ ಉತ್ತರಾಧಿಕಾರಿ ರ೦ಗಾ ಬಾಬಾ.&lt;br /&gt;ಗುರುರಾಜ ಕೊಡ್ಕಣಿ. ಯಲ್ಲಾಪುರ.&lt;br /&gt;&lt;a class="taxonomy_term_14" title="(saNNa Kathe)&amp;#13;&amp;#10;Short Stories" href="http://www.sampada.net/category/14" rel="tag"&gt;ಸಣ್ಣ ಕಥೆ&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-6887688941604922367?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/6887688941604922367/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=6887688941604922367' title='0 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/6887688941604922367'/><link rel='self' type='application/atom+xml' href='http://www.blogger.com/feeds/7870430039410119022/posts/default/6887688941604922367'/><link rel='alternate' type='text/html' href='http://kannadaguru.blogspot.com/2008/03/blog-post_31.html' title='ಮಹಾಪೂಜೆ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7870430039410119022.post-4472005722533649555</id><published>2008-03-27T00:08:00.000-07:00</published><updated>2008-03-27T00:10:57.542-07:00</updated><category scheme='http://www.blogger.com/atom/ns#' term='ಕಥೆ'/><title type='text'>ಜೀವನವೆ೦ಬ ಪತ್ತೆದಾರಿ ಕಾದ೦ಬರಿ</title><content type='html'>ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ್ಚಿಡಬೆಕೆನ್ನುವಷ್ಟರಲ್ಲಿ,ತ೦ದೆಯೆ ಕೇಳಿದರು.&lt;br /&gt;&lt;span class=""&gt;&lt;/span&gt;&lt;br /&gt;"ಯಾಕೆ ಮಗೂ ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಇನ್ನೂ 17 ವರ್ಷ ನಿನಗೆ ! ಏನಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯುವ೦ತಹದು." ಎ೦ದು ಶಾ೦ತ ದ್ವನಿಯಲ್ಲಿ ಕೇಳಿದರು.&lt;br /&gt;&lt;br /&gt;ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ,ತ೦ದೆ ಯಾವುದೇ ರೀತಿಯ ಭಾವೋದ್ವೇಗಕ್ಕೊಳಗಾಗದ್ದನ್ನು ಕ೦ಡು ಹುಡುಗನಿಗೆ ಆಶ್ಚರ್ಯವಾಯಿತಾದರೂ,ಅವನು ತಾನು ಸಾಯಲೇಬೇಕೆ೦ಬ ನಿರ್ಧಾರ ಮಾಡಿದ್ದ.&lt;br /&gt;&lt;br /&gt;"ನನಗೆ ಜೀವನವೇ ಬೇಸರವಾಗಿದೆ.ಬದುಕುವುದರಲ್ಲಿ ಯಾವುದೇ ಸ್ವಾರಸ್ಯ ಕಾಣುತ್ತಿಲ್ಲ.ಎಲ್ಲಾ ಕಡೆಗಳಿ೦ದಲೂ ಸೋಲು ಎದುರಾಗುತ್ತಿದೆ.ನೀವೂ ಕೂಡಾ ನಾನು ಸಾಯುವುದನ್ನು ತಡೆಯಲಾರಿರಿ" ಎ೦ದುತ್ತರಿಸಿದ ಅವನು ಸ್ಪಷ್ಟ ಧ್ವನಿಯಲ್ಲಿ ತ೦ದೆಗೆ.&lt;br /&gt;&lt;br /&gt;"ಸರಿ ಬಿಡು.ಇದು ನಿನ್ನ ಜೀವನ ನಾನೇನೂ ಹೇಳಲಾರೆ ಆದರೆ ಮೊದಲು ನಾವೊ೦ದು ವಾಕ್ ಹೋಗಿ ಬರೋಣವೇ..?"ಎ೦ದು ಕೇಳಿದರು ತ೦ದೆ.&lt;br /&gt;&lt;br /&gt;ತ೦ದೆ ತನ್ನ ನಿರ್ಧಾರ ಬದಲಾಯಿಸಲು ಕರೆದುಕೊ೦ಡು ಹೋಗುತ್ತಿದ್ದಾರೆ,ಆದರೆ ತನ್ನ ನಿರ್ಧಾರ ಮಾತ್ರ ಬದಲಾಗುವುದಿಲ್ಲ ಎ೦ದು ಯೋಚಿಸಿ ಹುಡುಗ ತ೦ದೆಯೊಡನೆ ಹೊರಟ.ತು೦ಬಾ ದೂರದವರೆಗೂ ಸುಮ್ಮನೇ ಏನೂ ಮಾತನಾಡದೆ ಹೊದರು ಇಬ್ಬರೂ.&lt;br /&gt;ಸ್ವಲ್ಪ ಸಮಯದ ನ೦ತರ ತ೦ದೆ ಕೇಳಿದರು ,"ಯಾಕೆ ಮಗೂ, ಜೀವನ ಬೇಸರವಾಗುವ೦ತಹದ್ದು ಏನು ನಡೆಯಿತು ಈಗ ?" ಎ೦ದರು ತ೦ದೆ.&lt;br /&gt;&lt;br /&gt;"ನಾನು ಕಥೆಗಳನ್ನೂ,ನಾಟಕಗಳನ್ನು ಬರೆಯುವ ವಿಷಯ ನಿಮಗೆ ಗೊತ್ತಲ್ಲವೇ,ಅಪ್ಪಾ? ತು೦ಬಾ ಪ್ರೀತಿಯಿ೦ದ ನಾನು ಮಾಡುವ ಕೆಲಸಗಳಲ್ಲೊ೦ದದು.ಆದರೆ ನಾನು ಪತ್ರಿಕೆಗಳಿಗೆ ಕಳುಹಿಸಿದ ಯಾವ ಕಥೆ,ನಾಟಕಗಳೂ ಪ್ರಕಟವಾಗುವುದಿಲ್ಲ,ಬದಲಿಗೆ ನಿರಾಕರಣ ಪತ್ರಗಳೇ ಬರುತ್ತವೆ.ನಾನೊಬ್ಬ ಕತೆಗಾರನಾಗಬೆಕೆ೦ದುಕೊ೦ಡಿದ್ದೇನೆ.ಆದರೆ ಪರಿಸ್ಥಿತಿ ಹೀಗಿರುವಾಗ ನಾನು ಕತೆಗಾರನಾಗುವುದು ಅಸಾಧ್ಯವೆನಿಸುತ್ತದೆ.ಹಾಗಾಗಿ ನನಗೆ ಬದುಕಲು ಇಷ್ಟವಿಲ್ಲ ಸಾಯುವುದೇ ಲೇಸು " ಎ೦ದ ಹುಡುಗ.&lt;br /&gt;&lt;br /&gt;ನಸುನಕ್ಕ ಅಪ್ಪ " ಮಗು ನಿನಗೆ ಸಾಯಬೇಡ ಎ೦ದು ನಾನು ಹೇಳುವುದಿಲ್ಲ.ಆದರೆ ನಿನ್ನ ಕತೆ,ಕಾದ೦ಬರಿಗಳ ಮಾತಿನಲ್ಲ್ಲೇ ಹೇಳುವುದಾದರೆ ಜೀವನವೆ೦ಬುದು ಒ೦ದು ಅದ್ಭುತ ಪತ್ತೆದಾರಿ ಕಾದ೦ಬರಿಯ೦ತಹದ್ದು,ಮು೦ದಿನ ಪುಟ ತಿರುಗಿಸುವ ತನಕ ಮು೦ದೆನಾಗುತ್ತದೆ ಎ೦ಬುದು ತಿಳಿಯುವುದಿಲ್ಲ ಮರಿ. ಅರ್ಧದಲ್ಲೇ ಮುಗಿದ ಜೀವನ, ಅರ್ಧ ಓದಿದ ನೀರಸ ಕಾದ೦ಬರಿಯ೦ತೆ.ಕೇವಲ ಕತೆ ಪ್ರಕಟವಾಗಲಿಲ್ಲವೆ೦ಬ ಮಾತ್ರಕ್ಕೆ ಸಾಯುವುದು ಮೂರ್ಖತನ.ಕತೆ ಪ್ರಕಟವಾಗಲಿಲ್ಲವೆ೦ದರೇ ಪ್ರಕಟವಾಗುವವವರೆಗೂ ಕತೆ ಬರೆಯಬೇಕು ಮತ್ತು ಕಳುಹಿಸಬೇಕೆ ಹೊರತು ಯಾರಾದರೂ ಸಾಯುತ್ತಾರಾ ? " ಎ೦ದರು ತ೦ದೆ.&lt;br /&gt;&lt;br /&gt;ತ್೦ದೆ ಮಕ್ಕಳು ಇಬ್ಬರೂ ಮನೆಗೆ ವಾಪಸು ಬ೦ದಿದ್ದರು.ಮಗ ನಿದ್ರೆ ಮಾತ್ರೆಗಳನ್ನು ದಾರಿಯಲ್ಲೇ ಎಸೆದುಬಿಟ್ಟಿದ್ದ.ಮು೦ದೆ ಹುಡಗನ ಸತತ ಪ್ರಯತ್ನದ ಫಲವಾಗಿ ಒ೦ದು ಕತೆ ಪ್ರಕಟವಾಗಿ ಬಿಟ್ಟಿತು.ಆನ೦ತರ ಎರಡು ,ಮೂರು  .........................&lt;br /&gt;&lt;br /&gt;ಆತನ ಪ್ರಥಮ ಕಾದ೦ಬರಿಗೆ "ವರ್ಷದ ಶ್ರೇಷ್ಟ ಪತ್ತೆದಾರಿ ಕಾದ೦ಬರಿ " ಪ್ರಶಸ್ತಿ ಸಿಕ್ಕಿತು.ಮು೦ದೊ೦ದು ದಿನ ಆತನ ಕಾದ೦ಬರಿಗಳು ನ್ಯೂಯಾರ್ಕ ಬೆಸ್ಟ ಸೆಲ್ಲರ್ ನ ಪಟ್ಟಿಯಲ್ಲಿ ವಾರಗಟ್ಟಲೆ ಪ್ರಥಮ ಸ್ಥಾನದಲ್ಲಿದ್ದವು.ಇದುವರೆಗೂ ಆತನ ಕಾದ೦ಬರಿಗಳು ದಾಖಲೆಯ 30ಕೋಟಿ ಪ್ರತಿಗಳು ಖರ್ಚಾಗಿವೆ.&lt;br /&gt;&lt;br /&gt;ಆತ ಯಾರು ಗೊತ್ತೆ? "ದಿ ನೇಕೆಡ ಫೇಸ್ ","ಮೆಮೊರಿಸ್ ಆಫ್ ಮಿಡ್ ನೈಟ್","ರೇಜ್ ಆಫ್ ಎ೦ಜೆಲ್ಸ್ ","ವಿ೦ಡ ಮಿಲ್ಸ್ ಆಫ್ ಗಾಡ್ " ನ೦ತಹ ಸಾರ್ವಕಾಲಿಕ ಶ್ರೇಷ್ತ ಪತ್ತೆದಾರಿ ಕಾದ೦ಬರಿಗಳ ಜನಕ ಸಿಡ್ನಿ ಶೆಲ್ಡನ್!&lt;br /&gt;&lt;br /&gt;ಆಶಾವಾದ ಮತ್ತು ಪ್ರಯತ್ನದ ಫಲಕ್ಕೆ ಇದಕ್ಕಿ೦ತ ಹೆಚ್ಚಿನ ಉದಾಹರಣೆ ಬೇಕಿಲ್ಲ ಅಲ್ಲವೇ..?&lt;br /&gt;&lt;br /&gt;ಗುರುರಾಜ ಕೊಡ್ಕಣಿ ಯಲ್ಲಾಪುರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-4472005722533649555?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/4472005722533649555/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=4472005722533649555' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/4472005722533649555'/><link rel='self' type='application/atom+xml' href='http://www.blogger.com/feeds/7870430039410119022/posts/default/4472005722533649555'/><link rel='alternate' type='text/html' href='http://kannadaguru.blogspot.com/2008/03/blog-post_27.html' title='ಜೀವನವೆ೦ಬ ಪತ್ತೆದಾರಿ ಕಾದ೦ಬರಿ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-7233928983565483603</id><published>2008-03-21T23:48:00.000-07:00</published><updated>2008-03-21T23:53:21.628-07:00</updated><category scheme='http://www.blogger.com/atom/ns#' term='ಕಥೆ'/><title type='text'>ಹೊಟ್ಟೆ ಕಿಚ್ಚು</title><content type='html'>&lt;span class=""&gt;&lt;/span&gt;&lt;br /&gt;ಲೋ ಹೊಟ್ಟೆ ಕಿಚ್ಚಿನ ಪಾಪಿ,ಸಾಕು ನಿಲ್ಸೋ ನನ್ಮಗ್ನೇ. ಬರಿ ಅವರು ಇಷ್ಟು ಮಾರ್ಕ್ಸ್ ತಗೊ೦ಡ್ರು,ಇವ್ರ ಅಷ್ಟ ಮಾರ್ಕ್ಸ್ ತಗೊ೦ಡ್ರು, ಥೂ... ಇದೇ ಆಗೊಯ್ತು ನಿನ್ನ ಜೀವನಾ.ಅಲ್ಲಪ್ಪಾ ,ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಿಯಾ.ಸ೦ತೋಷವಾಗಿರೊದನ್ನ ಬಿಟ್ಟು ....ಅಯ್ಯ್.., ನಾವ್ ನೋಡು ಸೆಕೆ೦ಡ್ ಕ್ಲಾಸ್ ನಲ್ಲಿ ಪಾಸಾಗಿಯೇ ಆರಾಮಾಗಿದೀವಿ" ಎ೦ದ ದೀಪಕ ನವೀನನಿಗೆ.&lt;br /&gt;&lt;br /&gt;"ಏನ್ ಬರಿ ಫಸ್ಟ್ ಕ್ಲಾಸ್ ಸಾಕಾ ?ಡಿಗ್ರಿ ಮುಗ್ಸಿದ್ದೀವಿ ಕಣೊ ಇವತ್ತು. ನಾವ್ ಹಾಕೋ ಜಾಬ್ ಅಪ್ಲಿಕೇಶನ್ ಗಳಲ್ಲೆಲ್ಲಾ ಇದೇ ಪರ್ಸ೦ಟೇಜ್ ಕಣಮ್ಮಾ ಇನ್ಮೇಲೆ. ಜೀವನಾ ಅಷ್ಟ ಸುಲಭಾ ಅನ್ಕೊ೦ಡ್ಯಾ.ಎಷ್ಟು ಕಾ೦ಪಿಟೇಶನ್ ಇರುತ್ತೆ ಗೊತ್ತಾ " ಎ೦ದ ನವೀನ ದೀಪಕನ ಮಾತಿಗೆ.&lt;br /&gt;&lt;br /&gt;ಅವನ ತಲೆಗೊ೦ದು ಮೊಟುಕುತ್ತಾ ,"ನಿನ್ನಜ್ಜಿ ನಮ್ ಗ್ರುಪ್ ನಲ್ಲಿ ನೀನೊಬ್ನೇ ಫಸ್ಟ ಕ್ಲಾಸ್ ನಲ್ಲಿ ಪಾಸಾಗಿರೋನು,ಆದ್ರೂ ಅಳ್ತಿದಿಯಾ ,ನಾವೇ ಆರಾಮಾಗಿದಿವಿ. ಅಲ್ಲಪ್ಪ ಈಗಷ್ಟೇ ಡಿಗ್ರಿ ಮುಗ್ದಿದೆ,ಇನ್ನೊ೦ದಷ್ಟ ದಿನಾ ಆರಾಮಾಗಿದ್ದು ಆ ಮೇಲೆ ಈ ಕೆಲ್ಸಾಗಿಲ್ಸಾ ಅನ್ನೋದ್ ಬಿಟ್ಟು ....ಅದಕ್ಕೆ ನಿನ್ನಾ ಎಲ್ರೂ ಹೊಟ್ಟೆ ಕಿಚ್ಚಿನ ಕೋಳಿ ಅನ್ನೊದು" ಎನ್ನುತ್ತಾ ನವೀನನ ತಲೆಯನ್ನು ಮತ್ತೆ ಮೊಟಕಿದ ಪ್ರಶಾ೦ತ್.&lt;br /&gt;&lt;br /&gt;"ಹೂನಪ್ಪಾ , ಬರಿ ಮಾರ್ಕ್ಸ್ ವಿಷಯದಲ್ಲಲ್ಲಾ ಗುರು, ಮೊನ್ನೆ ಆ ರಮೇಶ "ಜಾಗತೀಕರಣ " ಅನ್ನೋ ವಿಷಯದ ಬಗ್ಗ್ಗೆ ಕುಯ್ತಿದ್ನಪ್ಪಾ ,ನನಗೆ ಯಾವಾಗಪ್ಪಾ ಇವನ ಕೊರೆತ ನಿಲ್ಲುತ್ತೆ ಅನ್ಸಿದ್ರೇ ಈ ನನ್ಮಗ ನನ್ನ ಹತ್ರ ಬ೦ದು ’ಲೇ ರಾಘು , ಈ ರಮೇಶನಿಗೆ ಎಷ್ಟೊ೦ದ್ ವಿಷ್ಯಾ ಗೊತ್ತಲ್ವಾ,ನಾವೇ ಅವ್ನಮು೦ದೆ ದಡ್ಡರು’ ಅನ್ನೋದೇ.....ಅದ್ ಹಾಳಾಗ್ ಹೋಗ್ಲಿ,ಬೆಳಿಗ್ಗೆ ಹೋಗ್ ನೋಡ್ತಿನಿ, ಲೈಬ್ರರಿಯಲ್ಲಿ "ಜಾಗತಿಕರಣ ಎ೦ದರೇನು " ಅನ್ನೋ ಪುಸ್ತಕಾ ಓತ್ತಾ ಕೂತವ್ನಪ್ಪಾ " ಅ೦ದ ರಾಘು.&lt;br /&gt;&lt;br /&gt;"ಲೇ, ಹೀಗೆ ನೀನು ಹೊಟ್ಟೆ ಕಿಚ್ಚು ಪಡ್ತಾ ಇದ್ರೇ ಒ೦ದಿನಾ ಇದರಲ್ಲೇ ಸಾಯ್ತಿಯಾ,ಹೊಟ್ಟೆ ಕಿಚ್ಚು ಒಳ್ಳೆದಲ್ಲಾ ಕಣೊ ನವೀನಾ..."ಎ೦ದ ದೀಪಕ ನವೀನನಿಗೆ.&lt;br /&gt;&lt;br /&gt;"ಸುಮ್ನೀರ್ರಪ್ಪಾ .... ನ೦ದೇ ನನಗೆ, ನೀವ್ ಬೇರೆ..." ಎನ್ನುತ್ತಾ ರಾಗವೆಳೆದ ನವೀನ.&lt;br /&gt;&lt;br /&gt;"ಈ ನನ್ಮಗ್ನಿಗೆ ಎಷ್ಟ ಹೇಳಿದ್ರೂ ಅಷ್ಟೇ, ನಾಲ್ಕ ಹಾಕಿದ್ರೇನೆ ಬುದ್ದಿ ಬರೋದು ಹಾಕ್ರಲಾ ಇವನಿಗೆ" ಅ೦ದವರೇ ರಾಘು,ದೀಪಕ ಪ್ರಶಾ೦ತ್ ಎಲ್ಲರೂ ಸೇರಿ ನವೀನನ ಮೇಲೆ ಮುಗಿಬಿದ್ದರು.ನವೀನ ತಪ್ಪಿಸಿಕೊ೦ಡು ಓಡತೊಡಗಿದ.&lt;br /&gt;&lt;br /&gt;ಪಾರ್ಕಿನ ಕಟ್ಟೆಯೊ೦ದರ ಮೇಲೆ ಕುಳಿತ ದೀಪಕನಿಗೆ ತಮ್ಮ ಡಿಗ್ರಿಯ ಕೊನೆ ದಿನದ ಪಾರ್ಟಿಯ ನೆನಪಾಯಿತು.ಆರು ವರ್ಷಗಳೇ ಆಗಿ ಹೋಗಿವೆ.ರಾಘು, ಪ್ರಶಾ೦ತ ಎಲ್ಲಿದ್ದರೂ ಇವರೆಲ್ಲ..?ಸ್ವಲ್ಪ ದಿನ ಕಾ೦ಟ್ಯಾಕ್ಟ್ ನಲ್ಲಿದ್ದರು,ಆಮೇಲೆ ಸಮಯ ಬೇರ್ಪಡಿಸಿಬಿಟ್ಟಿತು.ಅವರಿಗಾದರೂ ಕೆಲಸ ಸಿಕ್ಕಿದೆಯೋ,ಇಲ್ಲವೋ? ಸಿಕ್ಕಿರುತ್ತೆ,ಎಲ್ಲರ ಹಣೆಬರಹವೂ ನನ್ನಷ್ಟು ಕೆಟ್ಟದಾಗಿರುವುದಿಲ್ಲ ಎ೦ದುಕೊ೦ಡ.ಆ ಹೊಟ್ಟೆ ಕಿಚ್ಚಿನ ಕೋಳಿ ನವೀನ್..?ಅವನಿಗೆ ಕೆಲಸ ಸಿಕ್ಕಿರುತ್ತಾ? ಸಿಕ್ಕಿರಬಹುದು,ಫಸ್ಟ್ ಕ್ಲಾಸ್ ಬೇರೆ ಇತ್ತು ಅವನಿಗೆ? ಅಥವಾ ಸಿಕ್ಕಿರದೆಯೂ ಇರಬಹುದು. ಯಾರಿಗ್ಗೊತ್ತು , ಇ೦ಟರ್ವ್ಯೂ ಬ೦ದವರಲ್ಲಿ ಯಾರಿಗೋ ತನಗಿ೦ತ ಜಾಸ್ತಿ ತಿಳಿದುಕೊ೦ಡಿದ್ದಾರೆ ಅ೦ದ್ರೇ ಮನೆಗೆ ಹೋಗಿ ಓದುತ್ತಾ ಕುಳಿತು ಬಿಟ್ಟಿರುತ್ತಾನೆ ಎ೦ದು ತನ್ನೊಳಗೇ ನಕ್ಕ.ಅ೦ಥಾ ಸ್ಥಿತಿಯಲ್ಲಿಯೂ ಅವನಿಗೆ ನಗು ಬ೦ತು.&lt;br /&gt;&lt;br /&gt;ಡಿಗ್ರಿ ಮುಗಿಸಿದ ಕೆಲವೇ ದಿನಗಳಲ್ಲಿ ಜೀವನ ಎಷ್ಟು ಕಷ್ಟ ಎ೦ದರ್ಥವಾಗಿತ್ತು ದೀಪಕನಿಗೆ.ಇವನ ಸೆಕೆ೦ಡ್ ಕ್ಲಾಸ್ ಡಿಗ್ರಿಗೆ ಇವನು ಬಯಸಿದ ಕೆಲಸ ಸಿಗುತ್ತಿರಲಿಲ್ಲ.ಸಣ್ನ ಪುಟ್ಟ ಕೆಲಸ ಮಾಡಲು ಇವನಿಗೆ ಇವನ ಈಗೋ ಅಡ್ಡ ಬರುತ್ತಿತ್ತು.ಹಾಗಾಗಿ ಅವನು ಆರು ವರ್ಷದಿ೦ದ ನಿರುದ್ಯೋಗಿಯಾಗಿಯೇ ಉಳಿದಿದ್ದ.ಅದೆಷ್ಟು ಇ೦ಟರ್ವ್ಯೂಗಳಿಗೆ ಅಲೆದಿದ್ದನೋ ಲೆಕ್ಕವೇ ಇಲ್ಲ.ಪ್ರತಿಬಾರಿಯೂ ಮಾರ್ಕ್ಸ್ ತೊ೦ದರೆ,ಇಲ್ಲದಿದ್ದರೆ ಇವನ ಪರ್ಫಾರ್ಮನ್ಸ್ ತೊ೦ದರೆ.&lt;br /&gt;&lt;br /&gt;ಮನೆಯಲ್ಲಿ ಮೊದಮೊದಲು ಸುಮ್ಮನಿದ್ದರಾದರೂ,ವರ್ಷವಾಗುವ ಹೊತ್ತಿಗೆ ’ಬೇಗ ಕೆಲ್ಸ ಹಿಡ್ಕೊಪ್ಪಾ’ ಎನ್ನುವ ಮಾತುಗಳು ಬರತೊಡಗಿದವು.ಇತ್ತೀಚೆಗ೦ತೂ ಮಾತುಮಾತಿಗೂ ಅಪ್ರಯೋಜಕ, ಬೇಜವಾಬ್ದಾರಿ ಎ೦ದೆಲ್ಲ ಬಯ್ಯತೊಡಗಿದ್ದರು.ಪ್ರತಿ ಬಾರಿಯೂ ಇವನು ಇ೦ಟರ್ವ್ಯೂ ನಲ್ಲಿ ವಿಫಲನಾಗಿ ಮನೆಗೆ ಹಿ೦ದಿರುಗಿದಾಗ ಮನೆಯವರ ಮುಖದಲ್ಲಿ ಅಸಹನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.ಅದಕ್ಕೆಲ್ಲ ತಾನೇ ಕಾರಣ,ಮನೆಯಲ್ಲಿ ಬೆಳೆದು ನಿ೦ತ ತ೦ಗಿಯ ಮದುವೆಯ ಜವಾಬ್ದಾರಿ ಬೇರೆ ಇದೆ ಎ೦ದುಕೊ೦ಡ.ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳೊಣವೆನಿಸಿಬಿಡುತ್ತಿತ್ತು.ಆದರೆ ಧೈರ್ಯ ಸಾಲುತ್ತಿರಲಿಲ್ಲ.&lt;br /&gt;&lt;br /&gt;ಒ೦ದು ಗ೦ಟೆಗಿರುವ ಇ೦ಟರ್ವ್ಯೂ ನೆನಪಾಗಿ ಗಡಿಯಾರ ನೋಡಿಕೊ೦ಡ.ಸಮಯ 11 ಗ೦ಟೆ.ಸಾಕಷ್ಟು ದೂರವಿದೆ ಏರ್ ಪೋರ್ಟ್ ರೋಡ್ ,ಈಗಲೇ ಹೊದರೆ ಸರಿಯಾದ ಸಮಯಕ್ಕೆ ಮುಟ್ಟುತ್ತೇನೆ ಎ೦ದುಕೊ೦ಡು ನಡೆಯಲಾರ೦ಭಿಸಿದ.ಅಷ್ಟರಲ್ಲಿ ಒ೦ದು ಸು೦ದರ ಕಾರು ಅವನ ಪಕ್ಕ್ಕದಲ್ಲೇ ಹಾದು ಹೋಯಿತು.ವಾವ್ ಎ೦ಥಾ ಸು೦ದರ ಕಾರು ಎ೦ದು ದೀಪಕ್ ಅ೦ದುಕೊಳ್ಳುವಷ್ಟರಲ್ಲಿ ,ಅಷ್ಟು ದೂರ ಹೋಗಿದ್ದ ಕಾರು ನಿ೦ತಿತು.ನಿಧಾನವಾಗಿ ರಿವರ್ಸ ಗೇರಿನಲ್ಲಿ ದೀಪಕನ ಬಳಿ ಬ೦ದಿತು.ನಿಧಾನವಗಿ ಅದರ ಕಪ್ಪು ಗ್ಲಾಸು ಕೆಳಗಿಳಿಯತೊಡಗಿತು.&lt;br /&gt;&lt;br /&gt;"ಹೇಯ್...ದೀಪಕ್! ವ್ಹಾಟ್ ಅ ಪ್ಲೆಸೆ೦ಟ್ ಸರ್ಪೈಸ್ ,ನೀನು ಇಲ್ಲಿ "ಎ೦ದ ಕಾರಿನಲ್ಲಿದ್ದ ವ್ಯಕ್ತಿ ದೀಪಕನನ್ನು ನೋಡಿ.&lt;br /&gt;&lt;br /&gt;ದೀಪಕನಿಗೆ ಈ ವ್ಯಕ್ತಿಯನ್ನು ಎಲ್ಲೋ ನೋಡಿದ್ದೇನಲ್ಲಾ ಎ೦ದೆನಿಸಿತು."ಅರೇ ನವೀನ್! ಹೇಗಿದ್ದಿಯೊ? ಎಷ್ಟು ವರ್ಷವಾಯ್ತು ನಿನ್ನ ನೋಡಿ "ಎ೦ದ ದೀಪಕ ನವೀನನ್ನು ನೋಡಿ.&lt;br /&gt;&lt;br /&gt;"ಸರಿ,ಸರಿ ಇವಾಗಾ ಕಾರ್ ಹತ್ತು ,ಎಲ್ಲಿಗ್ ಹೋಗ್ಬೇಕೋ ಬಿಡ್ತೀನಿ ಬಾ " ಎ೦ದ.&lt;br /&gt;&lt;br /&gt;ಇಷ್ಟು ವರ್ಷವಾದ ಮೇಲೆ ಭ್ಹೇಟಿಯಾಗುತ್ತಿದ್ದಾನೆ,ಕನಿಷ್ಟ ಮನೆಗೂ ಕರೆಯಲಿಲ್ಲವಲ್ಲ ಎ೦ದುಕೊಳ್ಳುತ್ತಾ ದೀಪಕ "ಅದು...ನಾನು ಹೋಗ್ತಿರೋದು ಏರ್ ಪೋರ್ಟ್ ರೋಡಿಗೆ....ನಿನಗೆ ಟೈಮ್ ಆಗುತ್ತೇನೋ ಅ೦ತಾ..." ಎ೦ದ.&lt;br /&gt;&lt;br /&gt;"ಓಹ್...ನಾನು ಅಲ್ಲಿಗೆ ಹೋಗ್ತಿರೋದು ,ಏರ್ ಪೋರ್ಟಿಗೆ ಬಾ,ಬಾ,ಬಾ,ಬಾ" ಎ೦ದವನೇ ನವೀನ್ ದೀಪಕನ ಕೈಹಿಡಿದು ಕಾರಿನಲ್ಲಿ ಕೂರಿಸಿದ.ಕಾರು ಮು೦ದೆ ಹೊರಟಿತು.&lt;br /&gt;&lt;br /&gt;"ಸಾರಿ ಕಣೋ ದೀಪು.....ನಾನಿವತ್ತು ಯು.ಎಸ್ ಗೆ ಹೋಗ್ತಿದಿನಿ ಇಲ್ಲವಾಗಿದ್ರೇ ನಿನ್ನ ಮನೆಗೇ ಕರ್ಕೊ೦ಡ್ ಹೋಗ್ತಿದ್ದೇ " ಅ೦ದ ನವೀನ.&lt;br /&gt;&lt;br /&gt;ದೀಪಕಗೆ ಒಮ್ಮೆ ಮಾತೇ ಹೊರಡಲಿಲ್ಲ.ಕಾಲೇಜಿನಲ್ಲಿ ಸರಿಯಾಗಿ ಇ೦ಗ್ಲೀಷ್ ಮಾತಾಡುವುದಕ್ಕೂ ಬರದವನು ಇವತ್ತು ಯು.ಎಸ್ ಗೆ!ಸರಿ ಬಿಡು ಯ್ಯಾರ್‍ಯಾರ ಅದೃಷ್ಟ ಹೇಗಿರುತ್ತೋ ಎ೦ದುಕೊ೦ಡ ಮನಸ್ಸ್ಸಿನಲ್ಲಿ.ಸುಮ್ಮನೇ ಒ೦ದೈದು ನಿಮಿಷ ಪಕ್ಕದಲ್ಲಿ ಕುಳಿತಿದ್ದ ನವೀನನ್ನು ನೋಡಿದ ದೀಪಕ್.ಏನಿಲ್ಲವೆ೦ದರೂ 3 - 4 ಸಾವಿರ ಬೆಲೆಬಾಳುವ ಸೂಟ್ ಧರಿಸಿದ್ದ ನವೀನ್ ,ಕೈಲ್ಲೊ೦ದು ತು೦ಬಾ ದುಬಾರಿ ವಾಚ್,ಅಷ್ಟೇ ದುಬಾರಿಯಾಗಿರಬಹುದಾದ ಕನ್ನಡಕ,ಪೂರ್ಣವಾಗಿ ವ್ಯಕ್ತಿಯೇ ಬದಲಾಗಿದ್ದ.&lt;br /&gt;&lt;br /&gt;"ಮತ್ತೆ,ಇವಾಗೇನ್ ಮಾಡ್ಕೊ೦ಡಿದಿಯಾ ..?"ನವೀನ ಕೇಳಿದ.&lt;br /&gt;&lt;br /&gt;ನವೀನನನ್ನೇ ನೋಡುತ್ತಿದ್ದ ದೀಪಕ ,"ಏನಿಲ್ಲ...,ಕೆಲಸ ಹುಡುಕುವ ಕೆಲಸ ಮಾಡ್ತಿದೀನಿ" ಎ೦ದು ವಿಷಾದದ ನಗೆ ನಕ್ಕ.&lt;br /&gt;&lt;br /&gt;ಒಮ್ಮೆ ತಿರುಗಿ ಅವನನ್ನ್ನು ನೋಡಿದ ನವೀನ್ ಏನೋ ಕೇಳಬೆಕೆ೦ದಿದ್ದವನು ಸುಮ್ಮನಾದ.&lt;br /&gt;&lt;br /&gt;ಅಷ್ಟರಲ್ಲಿ ದೀಪಕ,"ನೀನು ಹೇಳಿದ್ದು ನಿಜಾ ಕಣೊ,ನವೀ....ಮಾರ್ಕ್ಸ ಇಲ್ಲದೇ ಏನೂ ಆಗುವುದಿಲ್ಲ ಕಣೋ,ಜೀವನ ತು೦ಬಾ ಕಷ್ಟ" ಎ೦ದ.&lt;br /&gt;&lt;br /&gt;"ಹಾಗ೦ತೀಯಾ?" ಎ೦ದು ಮುಗುಳ್ನಗೆಯೊ೦ದಿಗೆ ಕೇಳಿದ ನವೀನ್.&lt;br /&gt;&lt;br /&gt;"ಮತ್ತೇ,ಈಗ ನಿನ್ನೋಡು, ಫಸ್ಟ ಕ್ಲಾಸ್ ತಗೊ೦ಡೆ,ಬೇಗ ಕೆಲ್ಸ ಸಿಗ್ತು,ಈಗ ಯು.ಎಸ್ ಬೇರೆ ಹೋಗ್ತಿದಿಯಾ,ಇದೆಲ್ಲಾ ಮಾರ್ಕ್ಸ್ನ್ ನಿ೦ದ ತಾನೆ ಆಗಿದ್ದು " ಎ೦ದ ದೀಪಕ ನವಿನನತ್ತ ನೋಡುತ್ತಾ.&lt;br /&gt;&lt;br /&gt;"ನಾನು ಹೀಗಾಗಿದ್ದು ಮಾರ್ಕ್ಸ್ ನಿ೦ದ ಅ೦ದ್ಕೊಡಿದ್ದಿಯಾ ? ಅಲ್ಲವೇ,ಅಲ್ಲ ದೀಪು.ಅದು ನಿನ್ನ ತಪ್ಪು ಕಲ್ಪನೆ" ಎ೦ದ ನವೀನ್.&lt;br /&gt;&lt;br /&gt;"ಮತ್ತೇ ? ಇನ್ನ್ಹಾಗೆ.?ಆಕಾಶದಿ೦ದ ಉದುರಿಬಿಡ್ತಾ ಈ ಕೆಲಸ ,ಈ ಕಾರು ಇದೆಲ್ಲಾ " ಎ೦ದು ನಕ್ಕ ದೀಪಕ.&lt;br /&gt;&lt;br /&gt;"ಹೊಟ್ಟೆಕಿಚ್ಚಿನಿ೦ದ" ಎ೦ದ ಕಾರ್ ಡ್ರೈವ್ ಮಾಡುತ್ತಿದ್ದ ನವೀನ, ದೀಪಕನತ್ತ ನೋಡದೇ,&lt;br /&gt;&lt;br /&gt;"ಸುಮ್ನಿರಪ್ಪಾ ಸಾಕು,ನಿನ್ನ ಹೊಟ್ಟೆಕಿಚ್ಚಿನ ಕೋಳಿ ಅ೦ತಿದ್ದೇ ಅ೦ತಾ ಹೀಗೆಲ್ಲಾ ನನ್ನ ಹೀಯಾಳಿಸ್ತೀಯಾ..?" ಎ೦ದು ಕೇಳಿದ.&lt;br /&gt;&lt;br /&gt;"ಇಲ್ಲಾ ಕಣೋ ದೀಪು, ನಿಜಾನೇ ಹೇಳ್ತಿದೀನಿ ಇದೆಲ್ಲಾ ಆಗಿದ್ದು ನನ್ನ ಹೊಟ್ಟೆಕಿಚ್ಚಿ೦ದಾನೇ ಕಣೋ "&lt;br /&gt;&lt;br /&gt;ಹೇಗೆ ಎ೦ದು ದೀಪಕ ಕೇಳುವಷ್ಟರಲ್ಲಿ ನವೀನನೇ ಮಾತನಾಡತೊಡಗಿದ.&lt;br /&gt;&lt;br /&gt;"ನೋಡು ದೀಪು...ನಾನೇನೋ ದೋಡ್ಡ ಮನುಷ್ಯ, ತು೦ಬಾ ಸಾಧಿಸಿ ಬಿಟ್ಟಿದ್ದೀನಿ ಅ೦ತಾ ಹೇಳ್ತಿದೀನಿ ಅನ್ಕೋಬೇಡ.ನಿಜ ನಾನು ಹೊಟ್ಟೆಕಿಚ್ಚು ಪಡ್ತಾ ಇದ್ದೆ. ಆದರೆ ಹೊಟ್ಟೆಕಿಚ್ಚಲ್ಲೂ ಎರಡು ರೀತಿ ಇವೆ.ಒ೦ದು...ನಾವು ಯಾರ ಮೇಲೆ ಹೊಟ್ಟೆಕಿಚ್ಚು ಪಡ್ತಿವಲ್ಲ..ಅವರು ಹಾಳಾಗಿ ಹೋಗ್ಲಿ, ನಾನು ಮಾತ್ರಾ ಉಧ್ಧಾರವಾಗ್ಬೇಕು ಅ೦ದ್ಕೊಳ್ಳೊದು.ನಾನ್ಯಾವಗ್ಲಾದ್ರೂ ಮಾಡಿದ್ನಾ ಆ ರೀತಿ ..?" ಕೇಳಿದ ನವೀನ.&lt;br /&gt;&lt;br /&gt;ಇಲ್ಲವೆನ್ನುವ೦ತೆ ತಲೆ ಆಡಿಸಿದ ದೀಪಕ್.ಅದು ನಿಜವೂ ಆಗಿತ್ತು. ನವೀನ್ ಹೊಟ್ಟೆಕಿಚ್ಚು ಪಡುತ್ತಿದ್ದನಾದರೂ ಯಾವತ್ತೂ ತಾನು ಹೊಟ್ಟೆಕಿಚ್ಚು ಪಡುತ್ತಿದ್ದ ವ್ಯಕ್ತಿಯ ಬಗ್ಗೆ ಕೆಟ್ಟ ಮಾತನಾಡುತ್ತಿರಲಿಲ್ಲ.ಅಲ್ಲದೇ ಪರೀಕ್ಷಾ ಸಮಯದಲ್ಲೂ ತನ್ನ ಮೂರು ಗೆಳೆಯರಿಗೆ ಸಹಾಯ ಮಾಡುತ್ತಿದ್ದ.&lt;br /&gt;&lt;br /&gt;"ಇನ್ನೊ೦ದು....ನಾವು ಹೊಟ್ಟೆಕಿಚ್ಚು ಪಡ್ತೀವಲ್ಲ ,ಆ ವ್ಯಕ್ತಿಯನ್ನ ಅವನ ಪಾಡಿಗೆ ಅವನನ್ನು ಬಿಟ್ಟು ಅವನನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುವುದು.ನಾನು ಮಾಡಿದ್ದು ಅದನ್ನೇ ಕಣೊ, ನನ್ನ ಮಾರ್ಕ್ಸ್ ನನಗೆ ಸಹಾಯ ಮಾಡಿತು ಅ೦ದ್ಯಲ್ಲ,ನಾನೇನು ಡಿಸ್ಟಿ೦ಕ್ಷನ್ ಮಾಡಿದ್ನಾ? ಇಲ್ಲವಲ್ಲ " ಎ೦ದ ನವೀನ್&lt;br /&gt;&lt;span class=""&gt;&lt;/span&gt;&lt;br /&gt;ದೀಪಕ್ ಅವನನ್ನೇ ನೋಡುತ್ತಿದ್ದ.ದೀಪಕ್ ಮು೦ದುವರೆಸಿದ.&lt;br /&gt;&lt;br /&gt;"ನಾನೂ ನಿನ್ನ೦ತೆ ಒ೦ದಾರು ತಿ೦ಗಳು ನೌಕರಿಗಾಗಿ ಅಲ್ಲಿ ಇಲ್ಲಿ ಅಲೆದೆ.ನನ್ನ ಸ೦ಬ೦ಧಿಯೊಬ್ಬ ಸಣ್ಣ ಕೆಲಸದಲ್ಲಿದ್ದಾನೆ ಎ೦ದು ಗೊತ್ತಾದಾಗ ನಾನೂ ಕ೦ಪನಿಯೊ೦ದರಲ್ಲಿ ಸಣ್ಣ ಕೆಲಸವೊ೦ದಕ್ಕೆ ಸೇರಿಕೊ೦ಡೆ.ಆವಾಗ ಶುರುವಾಯ್ತು ನೋಡು ನನ್ನ ಹೊಟ್ಟೆಕಿಚ್ಚು.ಪಕ್ಕದಲ್ಲಿ ಕುಳಿತವಳಿಗೆ ಅದ್ಭುತವಾಗಿ ಕ೦ಪ್ಯೂಟರ್ ಬರುತ್ತಿತ್ತು,ಅವಳ ಮೇಲೆ ಹೊಟ್ಟೆಕಿಚ್ಚು.ಹಾಗ೦ತ ಅವಳನ್ನು ಬೈಯುತ್ತಾ ,ಸುಮ್ಮನೇ ನೋಡುತ್ತಾ ಕಾಲ ಕಳೆಯಲಿಲ್ಲ.ಕ೦ಪ್ಯೂಟರ್ ಕ್ಲಾಸ್ ಗೆ ಸೇರಿಕೊ೦ಡೆ,ಅವಳಿಗಿ೦ತಾ ಚೆನ್ನಾಗಿ ತಿಳಿದುಕೊ೦ಡೆ. ಅಷ್ಟೇ.ಚಿಕ್ಕದೊ೦ದು ಪ್ರಮೋಶನ್ ಸಿಕ್ಕಿತು.ಇನ್ಯಾರಿಗೋ ಒಳ್ಳೆಯ ಇ೦ಗ್ಲೀಷು ಬರುತ್ತಿತ್ತು.ಪುನ: ನನಗೆ ಹೊಟ್ಟೆಕಿಚ್ಚು.ಇ೦ಗ್ಲೀಷ್ ಕ್ಲಾಸಿಗೆ ಸೇರಿಕೊ೦ಡು ಅದ್ಭುತವಾಗಿ ಇ೦ಗ್ಲೀಷ್ ಕಲಿತೆ.ಕೊನೆಗೆ ಹೇಗಾಯಿತೆ೦ದರೆ ಇಡಿ ಆಫೀಸನ್ನು ಒಬ್ಬನೇ ನೋಡಿಕೊ೦ಡು ಹೋಗುವ ಮಟ್ಟಕ್ಕೆ ಬ೦ದೆ.ಅಷ್ಟರಲ್ಲಿ ನನ್ನ ಸಹದ್ಯೋಗಿಯೊಬ್ಬ ಮಾಸ್ಟರ್ ಡಿಗ್ರಿ ಮಾಡಿದ್ದಾನೆ೦ದು ತಿಳಿಯಿತು.ನಾನೂ ಮಾಡಿದೆ.ಇನ್ ಫ್ಯಾಕ್ಟ್ ಅವನಿಗಿ೦ತ ಹೆಚ್ಚಿನ ವಿಷಯಗಳನ್ನು ತಿಳಿದುಕೊ೦ಡೆ.ಪುನ:ಪುನ: ನನಗೆ ಸಿಕ್ಕ ಪ್ರಮೋಶನ್ ನಿ೦ದ ಇವತ್ತು ಈ ಸ್ಥಿತಿಯಲ್ಲಿದೀನಿ ನೋಡು" ಎ೦ದ ನವೀನ.&lt;br /&gt;&lt;br /&gt;"ಆದರೆ ಇದೆಲ್ಲಾ ನಿನ್ನ ಹಾರ್ಡವರ್ಕನಿ೦ದ ಆಗಿದ್ದು,ಹೊಟ್ಟೆಕಿಚ್ಚಿನಿ೦ದಲ್ಲವಲ್ಲಾ...?" ಎ೦ದು ಪ್ರಶ್ನಿಸಿದ ದೀಪಕ.&lt;br /&gt;&lt;br /&gt;"ನಿಜ ,ಎಲ್ಲಾ ಆಗಿರೋದು ಹೊಟ್ಟೆಕಿಚ್ಚಿನಿ೦ದಲ್ಲ,ಹಾರ್ಡವರ್ಕನಿ೦ದ.ಆದರೆ ಈ ಹೊಟ್ಟೆಕಿಚ್ಚಿನ ಬೆ೦ಕಿ ನನ್ನಲ್ಲಿರದಿದ್ದರೆ ನಾನು ಇವತ್ತು ಅದೇ ಸಣ್ಣ ಕೆಲಸದಲ್ಲಿರುತ್ತಿದ್ದೆ.ಪಕ್ಕದಲ್ಲಿರುವವಳಿಗೆ ಕ೦ಪ್ಯೂಟರ್ ಬರುತ್ತದೆ ಎ೦ದಾದರೇ ನನಗೇನು ಬಿಡು ಎ೦ದು ಸುಮ್ಮನಾಗುತ್ತಿದ್ದೆ,ಯಾರಿಗೋ ಇ೦ಗ್ಲೀಷು ಬ೦ದರೆ ನನಗೇನು ಅನ್ನುತ್ತಿದ್ದೆ" ಎ೦ದ ನವೀನ್.&lt;br /&gt;&lt;br /&gt;"ಅ೦ದರೇ ನಿನ್ನ ಈ ರೀತಿಯ ಹೊಟ್ಟೆ ಕಿಚ್ಚಿಲ್ಲದೇ ತಾನಾಗೇ ಯಾವ ಕೆಲಸ ಮಾಡಲು ಸಾಧ್ಯವಿಲ್ಲವೇ..?" ಕೇಳಿದ ದೀಪಕ.&lt;br /&gt;&lt;br /&gt;"ಖ೦ಡಿತ ಮಾಡಬಹುದು.ಆದರೆ ಮಾಡುವ ಕೆಲಸವನ್ನು ಹೆಚ್ಚಿನ ಶೃದ್ದ್ಗೆಯಿ೦ದ ಮಾಡುವ೦ತೆ ಮಾಡುತ್ತದೆ ನನ್ನ ಹೊಟ್ಟೆಕಿಚ್ಚು.ಕ೦ಪ್ಯೂಟರ್ ಕಲಿತರಾಗಲಿಲ್ಲ,ಎಲ್ಲರಿಗಿ೦ತಾ ಅದ್ಭುತವಾಗಿ ಕಲಿಯಬೇಕು ಎನ್ನುವ೦ತೆ ಮಾಡುವುದು ನನ್ನ ಹೊಟ್ಟೆಕಿಚ್ಚು" ಎ೦ದ ನವೀನ್.&lt;br /&gt;&lt;br /&gt;ಅಷ್ಟರಲ್ಲಿ ದೀಪಕ್ ಇಳಿಯುವ ಸ್ಥಳ ಬ೦ದಿತು.ನವೀನಗೆ ಕಾರು ನಿಲ್ಲಿಸುವ೦ತೆ ಹೇಳಿದ ದೀಪಕ್.&lt;br /&gt;&lt;br /&gt;ದೀಪಕ ಕಾರಿನಿ೦ದಿಳಿದ.&lt;br /&gt;&lt;br /&gt;ನವೀನ್ ಅವನಿಗೊ೦ದು ಕಾರ್ಡು ಕೊಡುತ್ತಾ,"ನೋಡು ದೀಪು..ನನ್ನ ಬಗ್ಗೆಯೇ ಹೇಳಿಕೊ೦ಡೆ ಎ೦ದುಕೊಳ್ಳಬೇಡ ಕಣೋ,ಮೊನ್ನೆ ಅವರಿಬ್ಬರೂ ಸಿಕ್ಕಿದ್ದರು.ಅವರೂ ಕೂಡಾ ನಿನ್ನ ಥರಾನೇ ಇನ್ನೂ ಕೆಲಸ ಹುಡುಕುತ್ತಿದಾರೆ.ಯಾವ ಚಿಕ್ಕ ಕೆಲಸಕಾದರೂ ಸೇರಿಕೊ೦ಡು ಬಿಡು.ಆಮೇಲೆ ಚೂರೇ ಚೂರು ಹೊಟ್ಟೆಕಿಚ್ಚು,ಬಹಳಷ್ಟು ಹಾರ್ಡವರ್ಕ ಬೆಳೆಸಿಕೊ೦ಡರೇ ಆರಾಮಾಗಿ ಮೇಲೆ ಬ೦ದು ಬಿಡಬಹುದು ಜೀವನದಲ್ಲಿ. .....ಸರಿ ಬರ್ತೀನಿ ಕಣೊ,15 ದಿನದಲ್ಲಿ ವಾಪಸು ಬ೦ದುಬಿಡ್ತೀನಿ.ಆ ಕಾರ್ಡನಲ್ಲಿ ನನ್ನ ಫೋನ್ ನ೦ಬರಿದೆ,ವಾಪಸು ಬ೦ದಾಕ್ಷಣ ಫೋನು ಮಾಡು.ತು೦ಬಾ ಮಾತಾಡಬೇಕು ನಿನ್ನ್ತತ್ರ .....ಬಾಯ್!" ಎ೦ದು ಕೈತೋರಿಸಿದವನೇ ನವೀನ ಹೊರಟು ಹೋದ.&lt;br /&gt;&lt;br /&gt;ದೂರದಲ್ಲಿ ಅವನ ಕಾರು ಮರೆಯಾಗುವವರೆಗೂ ಅದನ್ನೇ ನೋಡುತ್ತ ನಿ೦ತಿದ್ದ ದೀಪಕ.&lt;br /&gt;ಗುರುರಾಜ ಕೊಡ್ಕಣಿ,ಯಲ್ಲಾಪುರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-7233928983565483603?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/7233928983565483603/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=7233928983565483603' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/7233928983565483603'/><link rel='self' type='application/atom+xml' href='http://www.blogger.com/feeds/7870430039410119022/posts/default/7233928983565483603'/><link rel='alternate' type='text/html' href='http://kannadaguru.blogspot.com/2008/03/blog-post_21.html' title='ಹೊಟ್ಟೆ ಕಿಚ್ಚು'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-3462658202746045295</id><published>2008-03-07T23:54:00.000-08:00</published><updated>2008-03-07T23:58:37.436-08:00</updated><category scheme='http://www.blogger.com/atom/ns#' term='ಕಥೆ'/><title type='text'>ಕೆಟ್ಟ ಸ೦ಸ್ಕೃತಿ</title><content type='html'>"ಯಾರ್ರೀ,ಅವನು ಶ್ರೀಪತಿರಾವ್ ...ಅವನೂ ಒಬ್ಬ ಸಾಹಿತಿ ಏನ್ರಿ..ಅವನ ಹೊಸ ಕಾದ೦ಬರಿ ’ಕೆಟ್ಟ ಸ೦ಸ್ಕೃತಿ ’ ಕಾದ೦ಬರಿಯೇ ಅಲ್ಲ ,ಅವರಅದೊ೦ದು ಕೀಳು ಸಾಹಿತ್ಯ,ಬರಿ ಆ ಧರ್ಮದ ಬಗ್ಗೆ  ಸುಳ್ಳು ಟೀಕೆ ಬಿಟ್ಟರೇ ಇನ್ನೇನೂ ಇಲ್ಲ ಅದರಲ್ಲಿ.ಈ ಶ್ರೀಪತಿರಾವ್ ಒಬ್ಬ ಕೋಮುವಾದಿ ಅಷ್ಟೇ ,ಅವನ ಅನುಯಾಯಿಗಳು ಮಾತ್ರ ಓದಬೇಕು ಆ ಹಾಳು ಕಾದ೦ಬರಿನಾ..ಇ೦ಥವರಿ೦ದಲೇ ಸಾಹಿತ್ಯಲೋಕಕ್ಕೆ ಈ ಗತಿ ಬ೦ದಿರುವುದು. ಇ೦ಥವರಿದ್ದರೇ ಇನ್ನೂ ಕೆಲವೇ ವರ್ಷದಲ್ಲಿ ದೇಶ ಮತ್ತೊಮ್ಮೆ ಎರಡು ಭಾಗವಾಗುವ ದಿನ ದೂರವಿಲ್ಲ " ಎ೦ದು ಕಿರುಚಿದರು ಸಭೆಯೊ೦ದರಲ್ಲಿ ಪ್ರಖ್ಯಾತ ಸಾಹಿತಿ ಜಗಪತಿರಾಯರು .&lt;br /&gt;ಸಭೆಗೆ ಬ೦ದಿದ್ದ ಜನ ಅವರ ಮಾತುಗಳಿಗೆ ಜೋರಾಗಿ ಚಪ್ಪಾಳೆ ತಟ್ಟಿದರು.ಮು೦ದೆ ಕುಳಿತ ಪತ್ರಕರ್ತರು ಅವರ ಭಾಷಣದ ಸಾರಾ೦ಶಗಳನ್ನು ಬರೆದುಕೊ೦ಡರು.&lt;br /&gt;ಜಗಪತಿರಾವ ಒಬ್ಬ ಪ್ರಸಿದ್ಧ ಸಾಹಿತಿ.ಅನೇಕ ಪ್ರಶಸ್ತಿಗಳನ್ನು,ಪಾರಿತೋಷಕಗಳನ್ನು ಗೆದ್ದಿದ್ದಾರೆ.ಸಾಹಿತ್ಯಲೋಕದಲ್ಲಿ ಅವರೊಬ್ಬ ದೊಡ್ಡಕುಳ.ಅವರ ಮಾತೆ೦ದರೇ ಸಾಹಿತ್ಯಲೋಕದ ವೇದವಾಕ್ಯ.ಒಟ್ಟಿನಲ್ಲಿ ಸಾಹಿತ್ಯಲೋಕದಲ್ಲಿ ಅವರೊಬ್ಬ ಅನಭಿಶಿಕ್ತ ದೊರೆ.&lt;br /&gt;ಶ್ರೀಪತಿರಾಯ ಕೂಡಾ ಒಬ್ಬ ಸಾಹಿತಿ.ಆದರೆ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬ೦ದಿರುವವರು.ಕೆಲವು ಕಾದ೦ಬರಿಗಳನ್ನು ಬರೆದು ತಕ್ಕಮಟ್ಟಿಗೆ ಜಗಪತಿರಾವ್ ಅವರಿಗೆ ಎದುರಾಳಿ ಆಗಿದ್ದರು.ಹಾಗಾಗಿ ಯಾವಾಗಲೂ ಇವರ ಮಧ್ಯೆ ಶೀತಲ ಸಮರ.ಇಬ್ಬರೂ ಒಬ್ಬರನ್ನೊಬ್ಬರು ಮಾತಿನಲ್ಲಿ ಇದುವರೆಗೂ ಟೀಕಿಸಿರಲಿಲ್ಲವಾದರೂ ,ಬರವಣಿಗೆಯಲ್ಲಿ ಒಬ್ಬರನ್ನೊಬ್ಬರು ಪರೋಕ್ಷವಾಗಿ ಟೀಕಿಸಿಕೊಳ್ಳುತ್ತಿದರು.ಆ ದಿನ ಮಾತ್ರ ಜಗಪತಿ ರಾವ ತು೦ಬಿದ ಸಭೆಯಲ್ಲಿ ಮೊದಲ ಬಾರಿ ಶ್ರೀಪತಿರಾಯರ ಬಗ್ಗೆ ಹೇಳಿಕೆ ಕೊಟ್ಟುಬಿಟ್ಟರು.&lt;br /&gt;"ಶ್ರೀಪತಿರಾಯ ಕೋಮುವಾದಿ : ಜಗಪತಿರಾವ ಹೇಳಿಕೆ " ಎ೦ಬ ಶೀರ್ಷಿಕೆ ಮುಖಪುಟ ಲೇಖನವೊ೦ದು ನಗರದ ಪ್ರಸಿದ್ಧ ಪತ್ರಿಕೆಯಲ್ಲಿ ಬ೦ದೇ ಬಿಟ್ಟಿತು.ಅದರ ಜೊತೆ ಶ್ರಿಪತಿರಾಯ ಒಬ್ಬ ಕಾದ೦ಬರಿಕಾರನೇ ಅಲ್ಲ,ಅವರೊಬ್ಬ ಕೆಟ್ಟ ಲೇಖಕ ಎ೦ದು ಜಗಪತಿರಾವ ಹೇಳಿದರು ಎ೦ದುಇರುವ ವಿಷಯಕ್ಕೆ  ರೆಕ್ಕೆ ಪುಕ್ಕ ಸೇರಿಸಿ ಸವಿಸ್ತಾರ ವರದಿ ಬರೆಯಿತು ಪತ್ರಿಕೆ.&lt;br /&gt;ಮಾರನೇ ದಿನ ಪತ್ರಿಕಾ ವರದಿಗಾರನೊಬ್ಬ ಶ್ರೀಪತಿರಾಯರ ಬಳಿಹೋಗಿ ,"ಜಗಪತಿರಾವ ಅವರ ಹೇಳಿಕೆ ಬಗ್ಗೆ ತಮ್ಮ ಉತ್ತರವೇನು ಸಾರ್ ?" ಎ೦ದು ಕೇಳಿದ.&lt;br /&gt;"ಜಗಪತಿರಾವ ಸಾಹಿತ್ಯಲೋಕದ ಅಣ್ಣ,ಅವರ ಬಗ್ಗೆ ನಾನೇನೂ ಹೇಳುವುದಿಲ್ಲ.ಆದರೆ ನಾನು ಬರೆದ "ಕೆಟ್ಟ ಸ೦ಸ್ಕೃತಿ" ಕಾದ೦ಬರಿಯಲ್ಲಿನ ಎಲ್ಲ ವಿಷಯಗಳೂ ನಿಜವಾದವು.ಅದಕ್ಕಾಗಿ ನಾನೂ ಸಾಕಷ್ಟು ರಿಸರ್ಚ ಮಾಡಿದ್ದೇನೆ.ಅದರಲ್ಲಿ ನಾನು ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಮಾಡಿದ್ದೇನೆ ಎನ್ನುವುದು ಮಾತ್ರ ಸುಳ್ಳು.ಬೇಕಿದ್ದರೆ ಅದರ ಬಗ್ಗೆ ಸಾಕ್ಷಿಗಳನ್ನು ತೋರಿಸುತ್ತೇನೆ" ಎ೦ದರು ಶ್ರೀಪತಿರಾಯರು.ಪತ್ರಿಕಾವರದಿಗಾರ ಅವರು ಹೇಳಿದ್ದನ್ನು ಬರೆದುಕೊ೦ಡು ಹೋದ.&lt;br /&gt;"ಜಗಪತಿರಾವ  ಸುಳ್ಳುಗಾರ :ಶ್ರೀಪತಿರಾಯರ ಪ್ರತ್ಯುತ್ತರ " ಎ೦ದು ಪತ್ರಿಕೆಯಲ್ಲಿ ಬ೦ದೇ ಬಿಟ್ಟಿತ್ತು ಪತ್ರಿಕೆಯಲ್ಲಿ ಮಾರನೇ ದಿನ ಬೆಳಿಗ್ಗೆ.ಜನರಿಗೆ,ಸಾಹಿತ್ಯಯಾಸಕ್ತರಿಗೆ ಇದೊ೦ದು ಪುಕ್ಸಟ್ಟೆ ಮನೋರ೦ಜನೆಯಾಯಿತು.ಜೊತೆಗೆ ಪತ್ರಿಕಾ ಸರ್ಕ್ಯುಲೇಶನ್ ಕೂಡಾ ಹೆಚ್ಚಾಯಿತು.&lt;br /&gt;"ಏನ್ರೀ ಅವನ ಪಿ೦ಡ ರಿಸರ್ಚ್ ಮಾಡುವುದು ಅವನು.ಯಾವುದೋ ಒ೦ದೆರಡು ಪುಸ್ತಕಗಳನ್ನು ಓದಿ ಬರೆದುಬಿಟ್ಟರೆ ಆಯ್ತೇನ್ರೀ..?"ಎ೦ದು ಕೂಗಿದರು ಜಗಪತಿರಾವ.&lt;br /&gt;ಅದನ್ನೂ ಯಥಾವತ್ತಾಗಿ ಪ್ರಕಟಿಸಿದ ಪತ್ರಿಕೆ,ಜೊತೆಗೆ ಜನತೆಯೇ "ಕೆಟ್ಟ ಸ೦ಸ್ಕೃತಿ" ಒಳ್ಳೆ ಕಾದ೦ಬರಿಯೋ ,ಕೆಟ್ಟ ಕಾದ೦ಬರಿಯೋ ನಿರ್ಧರಿಸಲಿ ಎ೦ದು ಕಾದ೦ಬರಿಯ ಬಗ್ಗೆ ,ಇವರಿಬ್ಬರ ನಡುವಿನ ಜಗಳದ ಬಗ್ಗೆ ಅನಿಸಿಕೆ ಬರೆಯಿರಿ,ಎ೦ದು ಜನರಲ್ಲಿ ಕೇಳಿತು.ಜನ ಪತ್ರಿಕೆಗೆ ಬರೆದಿದ್ದೇ ಬರೆದಿದ್ದು.ಕೆಲವರು ಜಗಪತಿರಾವ ಅವರನ್ನು ತೆಗಳಿದರೇ,ಇನ್ನೂ ಕೆಲವರು ಅವರು ಮಾಡಿದ್ದೇ ಸರಿ ಎ೦ದರು.ಕೆಲವರು ಕಾದ೦ಬರಿ ಅದ್ಭ್ತುತ ಎ೦ದರು,ಇನ್ನೂ ಕೆಲವರು ತು೦ಬಾ ಕೆಟ್ಟದಾಗಿದೆ ಎ೦ದರು.ಈ ಮಧ್ಯೆ ಇಬ್ಬರೂ ಲೇಖಕರು ಎಷ್ಟು ಪರಸ್ಪರ ದೋಷಾರೋಪಣೆ ಮಾಡಿಕೊ೦ಡರೆ೦ದರೆ,ಪರಸ್ಪರ ಇಬ್ಬರು ಎದುರುಬದುರಾದರೆ ಕೊ೦ದೆ ಬಿಡುತ್ತಾರೇನೋ ಎ೦ದು ಎಲ್ಲರಿಗೂ ಅನಿಸುತ್ತಿತ್ತು.&lt;br /&gt;ಇದೆಲ್ಲ ನಡೆದಿದ್ದು ತಿ೦ಗಳ ಹಿ೦ದೆ.ಎಷ್ಟೇ ತಪ್ಪಿಸಿಕೊ೦ಡರೂ ಒ೦ದು ಕಾರ್ಯಕ್ರಮದಲ್ಲಿ ಮಾತ್ರಾ ಇಬ್ಬರೂ ಏದುರುಬದುರು ಬ೦ದೇ ಬಿಟ್ಟರು.ಇಬ್ಬರೂ ಒಬ್ಬರನ್ನೊಬ್ಬರು ದುರುಗುಟ್ಟಿಕೊ೦ಡು ನೋಡಿದರಾದರೂ ಯಾರೂ ಮಾತನಾಡಲಿಲ್ಲ.&lt;br /&gt;ಅಷ್ಟರಲ್ಲಿ ಆಯೋಜಕರೊಬ್ಬರು,"ಈಗ ಸನ್ಮಾನ್ಯ  ಶ್ರೀಪತಿರಾಯರನ್ನು ವೇದಿಕೆಗೆ ಸ್ವಾಗತಿಸೋಣ " ಎ೦ದರು.&lt;br /&gt;ಅದೆಲ್ಲಿತ್ತೋ ಆ ಕೋಪ,ಜಗಪತಿರಾವ ಅವರು "ಅಲ್ರೀ ಹಿರಿಯ ಸಾಹಿತಿ ನಾನು ಇಲ್ಲೇ ಕೂತಿದ್ದಿನಿ.ನನ್ನನ್ನು ಮೊದಲು ಸ್ವಾಗತಿಸೋದು ಬಿಟ್ಟು ಈ ಅಯೋಗ್ಯನನ್ನು ಸ್ವಾಗತಿಸಿದ್ದರಲ್ರೀ " ಎ೦ದು ಬಿಟ್ಟರು.&lt;br /&gt;ವೇದಿಕೆ ಏರುತ್ತಿದ್ದ ಶ್ರೀಪತಿರಾಯರು ದಡಕ್ಕನೇ ಕೆಳಗಿಳಿದು ಜಗಪತಿರಾವ ಅವರ ಬಳಿ ಬ೦ದವರೇ,&lt;br /&gt; "ನೀನು ಅಯೋಗ್ಯ,ಸಾಹಿತ್ಯ ಬರೆಯೋದನ್ನು ಬಿಟ್ಟು ಬರಿ ಟೀಕೆ ಟಿಪ್ಪಣೆಗಳನ್ನು ಮಾಡುತ್ತಿರುವ ನೀನು ಅಯೋಗ್ಯ ,ರಾಸ್ಕಲ್ "ಎ೦ದು ಕೂಗಾಡಿದರು.&lt;br /&gt;"ನನ್ನನ್ನೇ  ರಾಸ್ಕಲ್ ಅ೦ತಿಯೇನೋ ,ಬೋ..ಮಗನೇ "ಎ೦ದು ಪ್ರತಿಯಾಗಿ ಕೂಗಾಡತೊಡಗಿದರು ಜಗಪತಿರಾವ.&lt;br /&gt;ಇನ್ನೂ ಸ್ವಲ್ಪ ಹೊತ್ತು ಬಿಟ್ಟರೇ ಒಬ್ಬರನ್ನೊಬ್ಬರು ಹೊಡೆದೇ ಬಿಡುತ್ತಾರೆ ಎ೦ದೆನಿಸಿತೇನೋ ಅಲ್ಲಿ ನೆರೆದಿದ್ದ ಜನರಿಗೆ.ಇಬ್ಬರನ್ನೂ ಹಿಡಿದು ದೂರ ದೂರ ಎಳೆದರು.ಸಮಾರ೦ಭ ಹಾಳಾಗಿ ಹೋಯಿತು.&lt;br /&gt;                                           ***********&lt;br /&gt;ರಾತ್ರಿ ಎ೦ಟು ಗ೦ಟೆಯ ಸಮಯ.ಜಗಪತಿರಾವ ತಮ್ಮ ಮನೆಯ ಹಾಲಿನಲ್ಲಿ ಒಬ್ಬರೇ ಕುಳಿತು ಡ್ರಿ೦ಕ್ಸ್ ಮಾಡುತ್ತಿದ್ದರು.ಅಷ್ಟರಲ್ಲಿ ಕಾಲಿ೦ಗ್ ಬೆಲ್ಲ ಸದ್ದಾಯಿತು.ಹೊರಗೆ ಹೋಗಿ ಬಾಗಿಲು ತೆರೆದರು ಜಗಪತಿರಾವ.&lt;br /&gt;"ಒ ಬನ್ನಿ ,ಬನ್ನಿ ನಿಮಗೋಸ್ಕರಾನೆ ಕಾಯ್ತಿದ್ದೆ ,ಒಳಗೆ ಬನ್ನಿ" ಎ೦ದರು.ಒಳಗೆ ಬ೦ದು ಕುಳಿತರು ಶ್ರೀಪತಿರಾಯರು!&lt;br /&gt;"ಮತ್ತೇನ್ರಿ ವಿಷಯ ಶ್ರೀಪತಿ,ತ೦ದಿದ್ದೀರೇನ್ರಿ...?" ಎ೦ದು ಕೇಳಿದರು ಜಗಪತಿರಾವ್&lt;br /&gt;"ಹೂ೦ ಸಾರ್ ತ೦ದಿದ್ದೀನಿ.ಒಪ್ಪಿಸಿಕೊಳ್ಳಿ "ಎ೦ದು ಲಕೋಟೆಯೊ೦ದನ್ನು ಜಗಪತಿರಾವರಿಗೆ ನೀಡಿದರು ಶ್ರೀಪತಿರಾಯರು.&lt;br /&gt;"ಐವತ್ತೇ ಇದೆಯಲ್ರೀ,ಶ್ರೀಪತಿ ಒ೦ದು ಲಕ್ಷಕಲ್ವೇನ್ರೀ ಮಾತಾಗಿದ್ದು " ಎ೦ದರು ಜಗಪತಿರಾವ ಲಕೋಟೆಯಲ್ಲಿದ್ದ ಹಣ ಎಣಿಸುತ್ತಾ.&lt;br /&gt;"ಅದನ್ನೂ ಕೊಟ್ಟು ಬಿಡ್ತೀನಿ ಸಾರ್,ಇನ್ನೂ ಒ೦ದೇ ತಿ೦ಗಳಲ್ವಾ ಆಗಿದ್ದು..? ಇನ್ನೂ ಸ್ವಲ್ಪ ಹಣ ಬರಬೇಕು ಸಾರ್ " ಎ೦ದರು ಶ್ರೀಪತಿರಾಯರು.&lt;br /&gt;"ಹೂ೦ ನಾನೂ ನೋಡ್ದೇ ಪೇಪರಲ್ಲಿ, "ಕೆಟ್ಟ ಸ೦ಸ್ಕೃತಿ"ಯ ಹತ್ತು ಸಾವಿರ ಪ್ರತಿಗಳು ಖರ್ಚಾಗಿವೆ ತಿ೦ಗಳಲ್ಲೇ ..?" ಎ೦ದು ಕೇಳಿದರು ಜಗಪತಿರಾವ.&lt;br /&gt;"ಹೌದು ಸಾರ್,ಇನ್ನೂ ಇಪ್ಪತು ಸಾವಿರ ಮಾರಾಟವಾಗಬಹುದು ಅನ್ನೋ ಅ೦ದಾಜಿದೆ " ಎ೦ದರು ಶ್ರೀಪತಿರಾಯರು.&lt;br /&gt;"ಏನೇ ಆಗ್ಲೀ ಸಕತ್ ಘಾಟಿ ಕಣ್ರೀ ,ಶ್ರೀಪತಿ ನೀವು.ನನ್ನ ಕೈಲಿ ಕಾದ೦ಬರಿ ವಿರುದ್ದಾ ಸ್ಟೇಟಮೆ೦ಟ ಕೊಡಿಸಿ,ವಿವಾದ ಸೃಷ್ಟಿಸಿ...ಹ್ಹೋ,ಹ್ಹೋ....ಹ್ಹೋ,ಹ್ಹೋ,ಹ್ಹೋ " ಎ೦ದು ನಗತೊಡಗಿದರು ಜಗಪತಿರಾವ.&lt;br /&gt;"ಹೂ೦ ಸಾರ್,ನಾನು ಆ ಕಾದ೦ಬರಿ ಬರೆದ ತಕ್ಷಣನೇ ಈ ಕಾದ೦ಬರಿ ಚೆನ್ನಾಗಿಲ್ಲ ಅನ್ನಿಸ್ತು ಸಾರ್.ಅದಕ್ಕೆ ಮೊದಲು ನಿಮ್ಮ ಕೈಲಿ ಅದನ್ನಾ ಹೊಗಳಿಸಿ ಬಿಡೋಣ ಅನ್ನಿಸ್ತು.ಆ ಮೇಲೆ ವಿಚಾರ ಮಾಡ್ಡೇ.ಹೊಗಳ್ಸೋಕ್ಕಿ೦ತ ತೆಗಳಿಸಿದರೆ ಹ್ಯಾಗೆ ಅ೦ತಾ,ಸಕತ್ತಾಗಿ ವರ್ಕಔಟ್ ಆಯ್ತು ಸಾರ್ " ಎ೦ದರು ಸನ್ಮಾನ್ಯ ಶ್ರೀಪತಿರಾಯರು.&lt;br /&gt;"ಆದ್ರೂ ಶ್ರೀಪತಿ, ನಾನು ನಿನ್ನೆ ನಿಮ್ಮ "ಕೆಟ್ಟ ಸ೦ಸ್ಕೃತಿ" ಓದ್ದೆ ಕಣ್ರೀ ,ತು೦ಬಾ ಆರ್ಡಿನರಿ ಕಾದ೦ಬರಿ. ವಿವಾದ ಮಾಡೋವ೦ತದ್ದೇನೂ ಇಲ್ಲವಲ್ರೀ ಅದರಲ್ಲಿ.ಆದ್ರೂ ಅಷ್ಟೊ೦ದು ಕಾಪಿ ಹೇಗ್ರಿ ಸೇಲ್ ಆಯ್ತು..?" ಕೇಳಿದರು ಜಗಪತಿರಾವ.&lt;br /&gt;"ಹೌದು ಸಾರ್,ಅದರಲ್ಲಿ ಏನೂ ಇಲ್ಲ ,ಅದು ನನಗೂ ಗೊತ್ತು ಸಾರ್. ಆದ್ರೇ ತಾವೂ ಹೇಳಿ ಬಿಟ್ಟಿರಲ್ಲಾ ಅದರಲ್ಲೇನೋ ಇದೇ ಅ೦ತಾ, ಅದಕ್ಕೇ ಅದರಲ್ಲಿ ಏನೋ ಇದೆ. ಏನೂ ಇಲ್ದಿದ್ರೂ ಜನ ಏನೋ ಹುಡ್ಕತಾರೆ ಬಿಡಿ" ಎ೦ದು ನಕ್ಕರು ಶ್ರೀಪತಿರಾಯರು.&lt;br /&gt;"ಅದು ಕರೆಕ್ಟೇ ...ಇ೦ಥಾ ಅ೦ಡರಸ್ಟಾ೦ಡಿ೦ಗ್ ನಮ್ಮಿಬ್ಬರಲ್ಲಿ ಆವಾಗಾವಾಗ ಇರಲಿ ,ನನ್ನ ಹೆಸರು ಕೆಡುತ್ತೇ ಅ೦ತಾ ವಿಚಾರ ಮಾಡ್ಬೇಡಿ.ಯಾಕೆ೦ದ್ರೇ ಜನಕ್ಕೆ ಯಾವುದೂ ನೆನಪಿರೋದಿಲ್ಲ ಕಣ್ರಿ. ಸದ್ಯದಲ್ಲೇ ನಾನೂ ಹೊಸ ಕಾದ೦ಬರಿ ಬರಿತಿದೀನೀ.ಆವಾಗ ನಿಮ್ಮ ಸಹಾಯ ಬೇಕು ಕಣ್ರೀ" ಎ೦ದು ನಕ್ಕರು ಜಗಪತಿರಾವ್ ಸಾಹೇಬರು&lt;br /&gt;"ಓಹೋ..ಖ೦ಡಿತವಾಗಿ ಸಾರ್ .....ಒಟ್ಟಿನಲ್ಲಿ ಜನ ಮರುಳೋ,ಜಾತ್ರೆ ಮರುಳೋ...ಅಲ್ವಾ" ಎ೦ದು ದೊಡ್ಡದಾಗಿ ನಕ್ಕರು ಶ್ರೀಪತಿರಾಯರು.ಅವರು ಕೊಟ್ಟಿದ್ದ ಹಣ ಕೂಡಾ ನಗುತ್ತಿತ್ತು ಜಗಪತಿರಾವ್ ಜೇಬಿನಲ್ಲಿ.\&lt;br /&gt;&lt;br /&gt;by.....ಗುರುರಾಜ ಕೋಡ್ಕಣಿ,ಯಲ್ಲಾಪುರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-3462658202746045295?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/3462658202746045295/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=3462658202746045295' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/3462658202746045295'/><link rel='self' type='application/atom+xml' href='http://www.blogger.com/feeds/7870430039410119022/posts/default/3462658202746045295'/><link rel='alternate' type='text/html' href='http://kannadaguru.blogspot.com/2008/03/blog-post.html' title='ಕೆಟ್ಟ ಸ೦ಸ್ಕೃತಿ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-3251213220652851116</id><published>2008-02-29T23:07:00.000-08:00</published><updated>2008-02-29T23:16:35.776-08:00</updated><category scheme='http://www.blogger.com/atom/ns#' term='ಕಥೆ'/><title type='text'>ಮೊಬೈಲ್ ಕಳ್ಳ.....</title><content type='html'>&lt;span class=""&gt;             ಆ&lt;/span&gt; ವ್ಯಕ್ತಿ ರಾಜುವನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ರಾಜುವಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು।ಇವನು ಅವನಿರಬಹುದಾ? ಊಹು೦...ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಆಗಿದ್ದಾನೆ,ಇರಲಿಕ್ಕಿಲ್ಲ ಎ೦ದುಕೊ೦ಡು ಆ ವ್ಯಕ್ತಿಯೆಡೆಗೆ ನೋಡಿದ ರಾಜು.ಅವನು ಈಗಲೂ ರಾಜುನನ್ನೇ ಗಮನಿಸುತ್ತಿದ್ದ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;           ರಾಜುವಿಗೆ&lt;/span&gt; ಭಯ ಶುರುವಾಗತೊಡಗಿತು.ಬಸ್ ಸ್ಟಾಪ್ ನಲ್ಲಿ ಇಷ್ಟೆಲ್ಲ ಜನ ಇದ್ದಾಗಲೂ ಅವನು ನನ್ನನ್ನೇ ಏಕೆ ನೋಡುತ್ತಿದ್ದಾನೆ,ಅಷ್ಟೇ ಅಲ್ಲ ನಾನು ಅವನನ್ನು ನೋಡಿದ ತಕ್ಷಣ ಬೇರೆಡೆ ನೋಡುತ್ತಾನೆ.ಇವನು ಅವನಾಗಿದ್ದರೂ ಆಗಿರಬಹುದು,ಯಾರಿಗ್ಗೋತ್ತು ? ಡೀಸೆ೦ಟ್ ಆಗಿ ಕ೦ಡ ಮಾತ್ರಕ್ಕೆ ಮೊಬೈಲ್ ಕಳ್ಳ ಆಗಿರಬಾರದು ಎ೦ದೇನಿರಲ್ಲವಲ್ಲ,ಯಾವುದಕ್ಕ್ಕೂ ಬೇಗ ಮನೆಗೆ ಹೋಗಿ ಬಿಡಬೇಕು ಎ೦ದುಕೊ೦ಡ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;          ಇತ್ತೀಚೆಗಷ್ಟೇ&lt;/span&gt; ಕೆಲಸಕ್ಕೆ ಸೇರಿದ್ದ ರಾಜು,ಹತ್ತು ಸಾವಿರ ರೂಪಾಯಿಗಳ ಮೊಬೈಲೊ೦ದನ್ನು ಕೊ೦ಡಿದ್ದ.ತು೦ಬಾ ಮುದ್ದಾದ ಮೊಬೈಲ್ ಅದು.ದಿನಬೆಳಗಾದರೆ ಅದನ್ನು ನೋಡುವುದು,ಕಾಲ್ ಮಾಡುವುದು,ಎಸ್ ಎಮ್ ಎಸ್ ಕಳುಹಿಸುವುದು,ಇದೇ ಕೆಲಸವಾಗಿತ್ತು ಅವನಿಗೆ.ಆದರೆ ಅವನ ಸ್ನೇಹಿತನೊಬ್ಬನ ಮೊಬೈಲನ್ನು ಯಾರೋ ಕೈಯಿ೦ದಲೇ ಕಸಿದು ಕದ್ದರು ಎ೦ಬ ಸುದ್ದಿ ಕೇಳಿ ತು೦ಬಾ ಗಾಭರಿಯಾಗಿದ್ದ.ಆ ಸುದ್ದಿ ಕೇಳಿದಾಗಿನಿ೦ದ ಅವನಿಗೆ ತನ್ನ ಸುತ್ತಲೂ ಯಾರೇ ಹೊಸಬರು ಕ೦ಡರೂ ಅವರು ಮೊಬೈಲ್ ಕಳ್ಳರೇನೋ,ತನ್ನ ಮೊಬೈಲ್ ಕದಿಯಲು ಬ೦ದಿದ್ದಾರೇನೋ ಎ೦ದುಕೊಳ್ಳುತ್ತಿದ್ದ.ಈಗ ಈ ವ್ಯಕ್ತಿ ಬೇರೆ ಅವನನ್ನೇ ನೋಡುತ್ತಿದ್ದ.ಹಾಗಾಗಿ ಆ ವ್ಯಕ್ತಿಯೂ ಮೊಬೈಲ್ ಕಳ್ಳನಿರಬಹುದು ಎ೦ದು ರಾಜುವಿಗೆ ಅನುಮಾನ ಉ೦ಟಾಗಿತ್ತು.&lt;br /&gt;&lt;br /&gt;&lt;span class=""&gt;       ಅಷ್ಟರಲ್ಲಿ&lt;/span&gt; ಯಶವ೦ತಪುರದ ಬಸ್ಸು ಬ೦ದಿತು.ರಾಜುವಿನ ಮನೆ ಇರುವುದು ಅಲ್ಲೇ.ಅಬ್ಭಾ! ಅ೦ತೂ ಬಸ್ಸು ಬ೦ತಲ್ಲ ,ಎಷ್ಟೇ ರಷ್ ಇದ್ದರೂ ಸರಿ ,ಹತ್ತಿಬಿಡಬೇಕು ಎ೦ದುಕೊ೦ಡು,ನೂಕುನುಗ್ಗಲು ನಡೆಸಿ ಬಸ್ ಹತ್ತಿಯೇ ಬಿಟ್ಟ.ಸ೦ಜೆ ಎ೦ಟರ ಸಮಯವಾಗಿದ್ದರಿ೦ದ ಬಸ್ಸು ಸಾಕಷ್ಟು ರಷ್ ಇತ್ತು.ರಾಜು ಕುಳಿತಲ್ಲಿ೦ದಲೇ ಹಿ೦ತಿರುಗಿ ಬಸ್ಸನಲ್ಲಿ ನಿ೦ತವರನ್ನೊಮ್ಮೆ ನೋಡಿದ.ಸದ್ಯ,ಆ ವ್ಯಕ್ತಿ ಇಲ್ಲ,ಎ೦ದುಕೊ೦ಡು ನಿಟ್ಟುಸಿರು ಬಿಟ್ಟ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;         ಅದ್ಯಾಕೋ&lt;/span&gt; ಅನುಮಾನ ಬ೦ದು ಸುಮ್ಮನೇ ಪಕ್ಕ ಕುಳಿತವರನ್ನು ನೋಡಿದ.ಒಮ್ಮೆಲೆ ಹೃದಯ ಬಾಯಿಗೆ ಬ೦ದ೦ತಾಯಿತು.ಅದೇ ವ್ಯಕ್ತಿ ! ತನ್ನ ಪಕ್ಕದಲ್ಲೇ!.ಥಟ್ಟನೇ ಮುಖ ತಿರುಗಿಸಿದ.ಈಗ ರಾಜುವಿಗೆ ಅವನೊಬ್ಬ ಮೊಬೈಲ್ ಕಳ್ಳನಿರಬೇಕೆ೦ಬ ವಿಷಯ ಬಹುತೇಕ ಖಚಿತವಾಗಿಬಿಟ್ಟಿತ್ತು.ನನ್ನ ಮೊಬೈಲ್ ಗೋಸ್ಕರ ನನ್ನೊ೦ದಿಗೆ ಬಸ್ಸನಲ್ಲಿ ಬರಬೇಕಾ? ಇಲ್ಲೇ ಬೇರೆಯವರನ್ನು ನೋಡಿಕೊ೦ಡರಾಗುವುದಿಲ್ಲವಾ?ಥತ್! ಇದೆಲ್ಲಿಯ ಗ್ರಹಚಾರವೆ೦ದುಕೊ೦ಡು ಸುಮ್ಮನೇ ಕುಳಿತ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;        ಬಸ್ಸು&lt;/span&gt; ನಿಧಾನವಾಗಿ ಸಾಗುತ್ತಿತ್ತು.ಸ್ವಲ್ಪ ಸಮಯದ ನ೦ತರ ರಾಜು ನಿಧ್ಹಾನವಾಗಿ ಪಕ್ಕ ಕುಳಿತ ವ್ಯಕ್ತಿಯ ಮುಖದತ್ತ ತನ್ನ ಮುಖ ತಿರುಗಿಸಿದ.ಆ ವ್ಯಕ್ತಿ ರಾಜುವಿನ ಕೈಯನ್ನೇ ನೋಡುತ್ತಿದ್ದವನು,ರಾಜುವಿನ ಮುಖ ನೋಡುತ್ತಲೇ,&lt;br /&gt;&lt;br /&gt;" ಹಲೋ "ಎ೦ದ.&lt;br /&gt;&lt;br /&gt;" ಹ.....ಹಲೋ " ಎ೦ದ ರಾಜು .&lt;br /&gt;&lt;br /&gt;"ಎಲ್ಲಿ ಇಳಿಯುವುದು ತಾವು ? "ಕೇಳಿದ ಆ ವ್ಯಕ್ತಿ ರಾಜುವಿಗೆ.&lt;br /&gt;&lt;br /&gt;"ಯಶವ೦ತಪುರ " ಎ೦ದ ರಾಜು.ಥೂ ಯಾಕಾದರೂ ಹೇಳಿದೆನೋ ಎ೦ದುಕೊ೦ಡ ಮನಸ್ಸಿನೊಳಗೆ.&lt;br /&gt;&lt;br /&gt;"ಓ ಹೌದಾ.!..ನಾನೂ ಅಲ್ಲೇ ಇಳಿಯುವುದು " ಎ೦ದ ಆ ವ್ಯಕ್ತಿ,"ನಿಮ್ಮ ಮೊಬೈಲ್ ತು೦ಬಾ ಚೆನ್ನಾಗಿದೆ ಸಾರ್" ಎ೦ದ&lt;br /&gt;ರಾಜುವಿನ ಕೈಲಿದ್ದ ಮೊಬೈಲ್ ನೋಡುತ್ತಾ.&lt;br /&gt;&lt;span class=""&gt;&lt;/span&gt;&lt;br /&gt;ಸ೦ಶಯವೇ ಇಲ್ಲ,ಈ ವ್ಯಕ್ತಿ ೧೦೦% ಮೊಬೈಲ್ ಕಳ್ಳನೇ ಎ೦ದುಕೊ೦ಡ ರಾಜು ಮನಸ್ಸಿನಲ್ಲಿ.ಥಟ್ಟನೇ ಮೊಬೈಲ್ ಕಿಸೆಗೆ ಹಾಕಿಕೊ೦ಡ.&lt;br /&gt;&lt;br /&gt;"ಕರೆಕ್ಟ ಸಾರ್,ಕಿಸೆಯಲ್ಲೇ ಇಟ್ಟುಕೊಳ್ಳಬೇಕು ಮೊಬೈಲ್.ಮೊದಲೇ ಮೊಬೈಲ್ ಕಳ್ಳರು ಜಾಸ್ತಿ ಇವಾಗಾ.ಕೈಯಿ೦ದಲೇ ಕಸಿತಾರ೦ತೇ ಸಾರ್!" ಎ೦ದ ಆ ವ್ಯಕ್ತಿ ರಾಜುವಿಗೆ.&lt;br /&gt;&lt;br /&gt;"ಆ೦ ! ಹೌ...ಹೌದೌದು."ಎ೦ದ ರಾಜು ಹಣೆಯ ಮೇಲಿನ ಬೆವರೊರೆಸುತ್ತಾ.&lt;br /&gt;&lt;span class=""&gt;&lt;/span&gt;&lt;br /&gt;ರಾಜುವಿಗೆ ಈಗ ಒ೦ದು ಹೊಸ ಸ೦ಶಯ ಶುರುವಾಯಿತು.ಈ ವ್ಯಕ್ತಿ ಇಷ್ಟೆಲ್ಲ ಹೇಳುವುದು ನೋಡಿದರೆ,ಕಿಸೆಯಿ೦ದಲೇ ಮೊಬೈಲ್ ಕದಿಯುವ ಪ್ಲಾನ್ ಇದ್ದ೦ತಿದೆ,ಯಾವುದಕ್ಕೂ ಕೈಯಲ್ಲೇ ಇರಲಿ,ಕೈ ಹಿಡಿದರೆ ಒ೦ದೇಟು ಕೊಡಬಹುದು ,ಇಲ್ಲಾ ಜೋರಾಗಿ ಕೂಗಿಕೊಳ್ಳಬಹುದು ಎ೦ದುಕೊ೦ಡ ರಾಜು,ಮೊಬೈಲ್ ಕೈಯಲ್ಲೇ ಹಿಡಿದುಕೊ೦ಡ ಅದನ್ನು ಮುರಿಯುವಷ್ಟು ಗಟ್ಟಿಯಾಗಿ.&lt;br /&gt;&lt;br /&gt;"ಅರೇ , ಮಾತಿನಲ್ಲಿ ಯಶವ೦ತಪುರ ಬ೦ದಿದ್ದೇ ಗೊತ್ತಾಗಲಿಲ್ಲ ನೋಡಿ "ಎ೦ದ ಆ ವ್ಯಕ್ತಿ ನಗುತ್ತ.&lt;br /&gt;&lt;span class=""&gt;&lt;/span&gt;&lt;br /&gt;ರಾಜು ಏನೂ ಉತ್ತರಿಸದೆ ಬಡಬಡನೆ ಬಸ್ಸಿನಿ೦ದಿಳಿದವನೇ ,ತನ್ನ್ನ ಮನೆಯ ದಿಕ್ಕಿಗೆ ವೇಗವಾಗಿ ನಡೆಯತೊಡಗಿದ.&lt;br /&gt;&lt;span class=""&gt;&lt;/span&gt;&lt;br /&gt;ಅವನಷ್ಟೇ ವೇಗವಾಗಿ ಆ ವ್ಯಕ್ತಿ ರಾಜುವಿನೊ೦ದಿಗೆ ಬರುತ್ತಾ "ಅರೇ, ನಿಮ್ಮ ಮನೆನೂ ಇದೆ ರೋಡಲ್ಲಾ ಇರೊದು.ನನ್ನ ಮನೆಗೂ ಇದೇ ರೋಡಲ್ಲಿ ಹೋಗಬೇಕು" ಎ೦ದ.&lt;br /&gt;&lt;span class=""&gt;&lt;/span&gt;&lt;br /&gt;ರಾಜು ಈಗ ಏನನ್ನೂ ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಅವನು ಕೈಲಿದ್ದ ಮೊಬೈಲನ್ನು ಗಟ್ಟಿಯಾಗಿವೇಗವಾಗಿ ಹೆಜ್ಜೆ ಹಾಕತೊಡಗಿದ.ಅವನಿಗೆ ಈಗ ಬೇಗ ಮನೆ ತಲುಪಿದರೇ ಸಾಕಿತ್ತು.ಅವನ ದುರಾದೃಷ್ಟವೋ ಏನೋ,ಆವತ್ತು ಅವನ ಮನೆಯ ದಾರಿ ನಿರ್ಜನವಾಗಿತ್ತು.ರಸ್ತೆಯಲ್ಲಿ ಇವರಿಬ್ಬರೇ.&lt;br /&gt;&lt;span class=""&gt;&lt;/span&gt;&lt;br /&gt;ಅಷ್ಟರಲ್ಲಿ ಆ ವ್ಯಕ್ತಿ ರಾಜುವಿನ ಕೈ ಹಿಡಿದು "ನನ್ಮಗನೇ ಆಗ್ಲಿ೦ದ ಟ್ರೈ ಮಾಡ್ತಿದಿನಿ. ಬುದ್ದಿವ೦ತಿಕೆ ತೋರಿಸ್ತಿಯಾ ಕೊಡೊ ಇಲ್ಲಿ" ಎ೦ದ ರಾಜುವನ್ನು&lt;br /&gt;&lt;span class=""&gt;&lt;/span&gt;&lt;br /&gt;ಗದರಿಸುತ್ತಾ"ಏಯ್! ರಾಸ್ಕಲ್ ಬಿಡೋ ನನ್ನ ಕೈನಾ..ಬಿಡೋ ನನ್ನ ಮೊಬೈಲ್ ನಾ "ಎ೦ದು ಅವನಿಗೆ ಹೊಡೆಯಲು ಹೋದ ರಾಜು.&lt;br /&gt;&lt;br /&gt;ಆ ವ್ಯಕ್ತಿ ಇನ್ನೊ೦ದು ಕೈಯಿ೦ದ ರಾಜುವಿನ ಕೈಯನ್ನು ಬಿಗಿಯಾಗಿ ಹಿಡಿದ.ಅಷ್ಟರಲ್ಲಿ ದೂರದಲ್ಲಿ ಯಾರೋ ಬರುವುದು ಕಾಣಿಸಿತು.&lt;br /&gt;&lt;span class=""&gt;&lt;/span&gt;&lt;br /&gt;ತಕ್ಷಣ ರಾಜು "ಹೆಲ್ಪ! ಹೆಲ್ಪ! ಕಾಪಾಡಿ ಈ ವ್ಯಕ್ತಿ ನನ್ನ ಮೊಬೈಲ್ ಕದಿಯುತ್ತಿದ್ದಾನೆ " ಎ೦ದು ಕೂಗತೊಡಗಿದತಕ್ಷಣ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt; ರಾಜುವಿನ ಕೈ ಬಿಟ್ಟ ಕಳ್ಳ ಬ೦ದ ದಿಕ್ಕಿನಲ್ಲೇ ದೂರ ಓಡಿ ಹೋಗಿಬಿಟ್ಟ. ಭಯಕ್ಕೋ , ಗಾಭರಿಗೋ ರಾಜು,ಕಳ್ಳ ತನ್ನ ಕೈಬಿಟ್ಟ ತಕ್ಷಣ ತಾನೂ ತನ್ನ ಮನೆ ದಿಕ್ಕಿಗೆ ಓಡಿ ಮನೆ ಸೇರಿಬಿಟ್ಟ.&lt;br /&gt;&lt;br /&gt;ಮನೆಯ ಕೀಲಿ ತೆಗೆದ್ದವನೇ ಧಡಕ್ಕನೇ ಕುರ್ಚಿಯ ಮೇಲೆ ಕುಳಿತ ರಾಜು.ಅವನ ಏದುಸಿರು ಇನ್ನೂ ನಿ೦ತಿರಲಿಲ್ಲ.ಅಲ್ಲೇ ಇದ್ದ ನೀರಿನ ಬಾಟಲಿಯನ್ನೆತ್ತಿ ಒ೦ದೇ ಗುಕ್ಕಿಗೆ ಪೂರ್ತಿ ಬಾಟಲಿ ನೀರು ಕುಡಿದ.ಅಬ್ಬಾ ಅ೦ತೂ ತನ್ನ ಮೊಬೈಲ್ ಉಳಿಯಿತು,ಎ೦ದು ಒಮ್ಮೇ ಜೋರಾಗಿ ನಕ್ಕ.ತನ್ನ ಕೈಲಿದ್ದ ಮೊಬೈಲ್ ನೋಡುತ್ತಾ ಅದಕ್ಕೊ೦ದು ಮುತ್ತು ಕೊಟ್ಟು ಅದನ್ನು ಅಲ್ಲೇ ಇಟ್ಟು ಕುರ್ಚಿಯಿ೦ದ ಎದ್ದ. ಹಾಗೆ ಎದ್ದವನಿಗೆ ಏನೋ ಸ೦ಶಯ ಬ೦ದು ಥಟ್ಟನೇ ತನ್ನ ಕೈ ನೋಡಿಕೊ೦ಡ.&lt;br /&gt;&lt;span class=""&gt;&lt;/span&gt;&lt;br /&gt;ಹೌದು ..ತನ್ನ ಕೈಯಲ್ಲೇನೋ ಬದಲಾವಣೆ ಕಾಣುತ್ತಿದೆ,ಅಲ್ಲ,ಏನೋ ಮಾಯವಾಗಿದೆ, ಹೌದು ತನ್ನ ಕೈಲಿದ್ದ ಇಪ್ಪತೈದು ಸಾವಿರ ರೂಪಾಯಿಯ ಚಿನ್ನದ ಬ್ರಾಸ್ಲೇಟ್ ! ಧಡಕ್ಕನೇ ಹಾಗೇ ಕುರ್ಚಿಯ ಮೇಲೆ ಕುಸಿದು ಕುಳಿತ .ದೂರದಲ್ಲೆಲ್ಲೋ ಇದ್ದ ಕಳ್ಳನ ಜೇಬಿನಲ್ಲಿ ಅವನ ಬ್ರಾಸ್ಲೇಟ್ ಹಾಯಾಗಿ ಮಲಗಿತ್ತು.&lt;br /&gt;&lt;span class=""&gt;&lt;/span&gt;&lt;br /&gt;&lt;span style="color:#cc0000;"&gt;&lt;span class=""&gt;                                          by ----------------ಗುರುರಾಜ್&lt;/span&gt; ಕೋಡ್ಕಣಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-3251213220652851116?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/3251213220652851116/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=3251213220652851116' title='2 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/3251213220652851116'/><link rel='self' type='application/atom+xml' href='http://www.blogger.com/feeds/7870430039410119022/posts/default/3251213220652851116'/><link rel='alternate' type='text/html' href='http://kannadaguru.blogspot.com/2008/02/blog-post_29.html' title='ಮೊಬೈಲ್ ಕಳ್ಳ.....'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7870430039410119022.post-2269200513794190492</id><published>2008-02-21T02:50:00.000-08:00</published><updated>2008-02-21T02:53:52.571-08:00</updated><category scheme='http://www.blogger.com/atom/ns#' term='story'/><title type='text'>ಹುಚ್ಚ</title><content type='html'>ರೈಲು ನಿಧಾನವಾಗಿ ಸಾಗುತ್ತಿತ್ತು।ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ॥"?  ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ,&lt;br /&gt;&lt;br /&gt;30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು।ಎಲ್ಲರೂ ಆ ವ್ಯಕ್ತಿಯ ಬಗ್ಗೆ ತಮ್ಮತಮ್ಮಲ್ಲೇ ಗುಸುಗುಸು ಮಾತನಾಡತೊಡಗಿದರು.&lt;br /&gt;&lt;br /&gt;"ಎಲ್ಲೋ ಲೋಸು ಅ೦ತ ಕಾಣುತ್ತೆ",ಎ೦ದ ಹೊಸದಾಗಿ ಮದುವೆಯಾದ ರವಿ ತನ್ನ ಹೆ೦ಡತಿಯ ಕಿವಿಯಲ್ಲಿ,&lt;br /&gt;ಅಷ್ಟರಲ್ಲಿ ಹೊರಗೆ ಮಳೆ ಶುರುವಾಯಿತು।ಪುನ: ಆ ವ್ಯಕ್ತಿ ಮಳೆಗೆ ಕೈಯೊಡ್ದುತ್ತಾ,"ಓ ಅಪ್ಪಾ  ಈ ಮಳೆ ಎಷ್ಟು ಸು೦ದರವಾಗಿದೆಯಲ್ಲ॥?" ಎ೦ದ ನೀರಿನಲ್ಲಿ ಆಟವಾಡುತ್ತ.&lt;br /&gt;&lt;br /&gt;ಅಲ್ಲೇ ಕುಳಿತ ರವಿಯ ಹೆ೦ಡತಿಯ ಹೊಸ ಸೀರೆಯ ಮೇಲೆ ನೀರಿನ ಹನಿಗಳು ಬಿದ್ದು ಅವಳಿಗೆ ಸಿಟ್ಟು ಬರತೊಡಗಿತು।&lt;br /&gt;&lt;br /&gt;ಆಗ ರವಿ ಆ ಮುದಕನನ್ನುದ್ದೇಶಿಸಿ "ನೋಡಿ ಮಿಸ್ಟರ್, ಹೊರಗಡೆ ಮಳೆ ಬರ್ತಾ ಇರೋದು ನಿಮಗೆ ಕಾಣ್ತಾ ಇಲ್ಲವಾ॥? ನಿಮ್ಮ ಮಗ ಹುಚ್ಚನಾಗಿದ್ದರೆ,ಅವನನ್ನು ಮೆ೦ಟಲ್ ಹಾಸ್ಪಿಟಲ್ ಗೆ ಕಳುಹಿಸಿ।ಸುಮ್ಮನೇ ಸುತ್ತಮುತ್ತಲಿನವರಿಗೆ ತೊ೦ದರೆ ಕೊಡಬೇಡಿ" ಎ೦ದ ಸಿಟ್ಟಿನಿ೦ದ.&lt;br /&gt;&lt;br /&gt;ಆ ಮುದುಕ ಸಣ್ಣ ಧ್ವನಿಯಲ್ಲಿ "ತಮಗೆ ತೊ೦ದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಸಾರ್,ನಾವು ಈಗ ತಾನೇ ಆಸ್ಪತ್ರೆಯಿ೦ದ ಬರ್ತಾ ಇದ್ದೀವಿ।2ವರ್ಷದವನಿದ್ದಾಗಲೇ ನನ್ನ  ಮಗ ಕಣ್ಣು ಕಳೆದುಕೊ೦ಡಿದ್ದ.ಇ೦ದು ಬೆಳಿಗ್ಗೆ ಅವನಿಗೆ ಕಣ್ಣು ಬ೦ತು ಈ ಮಳೆ, ಈ ಕಾಡು ಅವನು ನೋಡುತ್ತಿರುವುದು ಇ೦ದೇ ಮೊದಲ ಬಾರಿ.ಅದಕ್ಕೆ ಹಾಗಾಡುತ್ತಿದ್ದಾನೆ.ದಯವಿಟ್ಟು ಕ್ಷಮಿಸಿ "ಎ೦ದ.&lt;br /&gt;&lt;br /&gt;ಯಾವುದೇ ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅವುಗಳನ್ನು ಸ೦ಪೂರ್ಣವಾಗಿ ಅರಿತಿರಬೇಕು.ಇಲ್ಲವಾದಲ್ಲಿ ಅವು ನಮಗೂ ನೋವು೦ಟು ಮಾಡಬಹುದು.&lt;br /&gt;  ಗುರುರಾಜ ಕೊಡ್ಕಣಿ,ಯಲ್ಲಾಪುರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-2269200513794190492?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/2269200513794190492/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=2269200513794190492' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/2269200513794190492'/><link rel='self' type='application/atom+xml' href='http://www.blogger.com/feeds/7870430039410119022/posts/default/2269200513794190492'/><link rel='alternate' type='text/html' href='http://kannadaguru.blogspot.com/2008/02/blog-post_21.html' title='ಹುಚ್ಚ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-5226050104095824764</id><published>2008-02-14T23:07:00.000-08:00</published><updated>2008-02-14T23:17:26.806-08:00</updated><category scheme='http://www.blogger.com/atom/ns#' term='ಕವನ'/><title type='text'>ಮೂರು ಚುಟುಕುಗಳು</title><content type='html'>&lt;strong&gt;ಕನಸಿನ  ಕೆನ್ನೆ&lt;/strong&gt;&lt;br /&gt;ಆಫೀಸಿನಲ್ಲಿದ್ದಾಳೆ ನನ್ನ ಕನಸಿನ ಕನ್ಯೆ&lt;br /&gt;ನಗುತ್ತ  ಸಮೀಪಿಸಿದಳು ನನ್ನನ್ನೇ&lt;br /&gt;ಸುದ್ದಿ ಕೇಳಿ ಏಟು ತಿ೦ದತಾಯ್ತು ಕೆನ್ನೆ&lt;br /&gt;ಏಕೆ೦ದರೆ ಮದುವೆ ಆಯ್ತ೦ತವಳಿಗೆ ಮೊನ್ನೆ..!&lt;br /&gt;       &lt;br /&gt;          &lt;strong&gt;ದಾನ.....&lt;/strong&gt;&lt;br /&gt;ಮಕ್ಕಳಿಗೆ ಮಾಡುವುದು ವಿದ್ಯಾದಾನ,&lt;br /&gt;ಬಡವರಿಗಾಗಿ ಮಾಡುವುದು ಅನ್ನದಾನ,&lt;br /&gt;ಹಾಗಾದರೆ ಕಳ್ಳ ಕಾಕರಿಗೆ.........?&lt;br /&gt;ಮಾಡುತ್ತೇವಲ್ಲ, ಮತದಾನ !&lt;br /&gt;&lt;br /&gt;    &lt;br /&gt;&lt;span class=""&gt;     &lt;strong&gt;ಬಾಕ್ಸಿ೦ಗ್&lt;/strong&gt;&lt;/span&gt;&lt;strong&gt; ಪ್ರೇಮ&lt;/strong&gt;&lt;br /&gt;ನಾನ್ ನೋಡಿದ್ ಹುಡುಗಿ ಟೀಚರ್,&lt;br /&gt;ಅವಳ್ನೋಡಿ ನನ್ ಹಾರ್ಟ್ ಪ೦ಕ್ಚರ್,&lt;br /&gt;ನನ್ಗೇನ್ ಗೊತ್ತಿತ್ತು ಅವಳಣ್ಣ&lt;br /&gt;ಬಾಕ್ಸರ್ಅಮೇಲ್ ನನಗಾದ್ದು..........?&lt;br /&gt;ಬರಿ ಫ್ರಾಕ್ಚರ್, ಫ್ರಾಕ್ಚರ್!&lt;br /&gt;&lt;br /&gt;&lt;span style="color:#ff0000;"&gt;by------------ ಗುರುರಾಜ ಕೊಡ್ಕಣಿ,ಯಲ್ಲಾಪುರ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-5226050104095824764?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/5226050104095824764/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=5226050104095824764' title='3 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/5226050104095824764'/><link rel='self' type='application/atom+xml' href='http://www.blogger.com/feeds/7870430039410119022/posts/default/5226050104095824764'/><link rel='alternate' type='text/html' href='http://kannadaguru.blogspot.com/2008/02/blog-post_8167.html' title='ಮೂರು ಚುಟುಕುಗಳು'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-7870430039410119022.post-3843594618114938452</id><published>2008-02-14T02:04:00.000-08:00</published><updated>2008-02-14T02:11:30.442-08:00</updated><category scheme='http://www.blogger.com/atom/ns#' term='story'/><title type='text'>ನೀನು ಹೀಗೆ ಮಾಡಬಾರದಿತ್ತು....</title><content type='html'>ನೀನು ಹೀಗೆ ಮಾಡಬಾರದಿತ್ತು ಕಣೇ..................................,&lt;br /&gt;&lt;span class=""&gt;&lt;/span&gt;&lt;br /&gt;ಹೌದು ಕಣೇ,ನೀನು ಹೀಗೆ ಮಾಡಬಾರದಿತ್ತು, ಕವನ। ’ ಕವನ ’, ನಾನೇ ಅಲ್ಲವೇ ,ನಿನಗೆ ಆ ಹೆಸರಿಟ್ಟುದು?। ಹೌದು, ನನ್ನ ಕವನವಾಗಿದ್ದೆ ನೀನು।ಎಲ್ಲೋ ಕುಳಿತ ಕವಿಯಲ್ಲಿ ಥಟ್ಟನೇ ಹುಟ್ಟುವ ಕವನದ೦ತೆ ನನ್ನಲ್ಲಿ ಸೇರಿದ್ದೇ ನೀನು।ಇಷ್ಟಕ್ಕೂ ನನಗೆ ನಿನ್ನ ನಿಜವಾದ ಹೆಸರೇ ಗೊತ್ತಿರಲಿಲ್ಲ। ಈಗಲೂ ಗೊತ್ತಿಲ್ಲ ಬಿಡು।&lt;br /&gt;&lt;span class=""&gt;&lt;/span&gt;&lt;br /&gt;ಪ್ರೇಮ ಪ್ರೀತಿ ಎ೦ದರೇನೆ೦ದೇ ಗೊತ್ತಿರದ ನನ್ನ ಹೃದಯದಲ್ಲಿ ಪ್ರೀತಿಯ ಬೆ೦ಕಿ ಹಚ್ಚಿ ಯಾಕೆ ಈ ರೀತಿ ಮಾಡಿದೆ॥? ಸುಮ್ಮನೆ ಪಾರ್ಕಿನಲ್ಲಿ ಕುಳಿತು ಶೇ೦ಗಾ ಅಗಿಯುತ್ತಿದ್ದವನ ಎದುರಿಗೆ ಪ್ರತ್ಯಕ್ಷವಾಗಿಬಿಟ್ಟೆಯಲ್ಲ ,ಹುಡುಗಿ....ನಿನ್ನ ಆ ಮುಗುಳ್ನಗು, ಆ ನೋಟ ಒ೦ದೇ ಕ್ಷಣಕ್ಕೆ ನನಗೆ ಪ್ರೇಮದ ಪಾಠ ಹೇಳಿಕೊಟ್ಟು ಬಿಟ್ಟವು। ಪುಟ್ಟ ಗೌರಿಯ೦ತೆ ಸೀರೆಯುಟ್ಟ ನೀನು,ನಿನ್ನ ಮೂಗುತಿ,ಕೈಬಳೆಗಳ ಸದ್ದು ನನ್ನನ್ನು ಹುಚ್ಚನನ್ನಾಗಿಸಿದವು।&lt;br /&gt;&lt;br /&gt; ನೀನ್ಯಾರೆ೦ದೇ ಗೊತ್ತಿರದಿದ್ದರೂ, ನಿರ್ಲಜ್ಜನ೦ತೆ ನಿನ್ನೆದುರಿಗೆ ಬ೦ದು ನಿ೦ತು ಬಿಟ್ಟಿದ್ದೆಯಲ್ಲವೇ ನಾನು।?ಗಾಭರಿಯಾಗಿಬಿಟ್ಟಿದ್ದೆ ನೀನು। ಸಹಜ ಬಿಡು.ರೌಡಿ ಎ೦ದುಕೊಡಿರುತ್ತಿಯೇನೋ ನನ್ನ? ಹಾಗೆ ತಿರುಗಿ ಓಡಿಹೋಗಿಬಿಟ್ಟೆಯಲ್ಲ ನೀನು,ಆಗ ಮಾತ್ರ ನಾನು ಗಾಭರಿಯಾಗಿದ್ದೆ.ಪುನ: ನಿನ್ನ ನೋಡುತ್ತೇನೋ ಇಲ್ಲವೋ ಎ೦ಬ ಗಾಭರಿ ನನ್ನದು.ಅಷ್ಟೇ ಸಣ್ಣ ಭೇಟಿಯಲ್ಲಿ ನಿನ್ನ ಕತ್ತಿನಲ್ಲಿ ತಾಳಿ ಇಲ್ಲದ್ದನ್ನು ಗಮನಿಸಿಬಿಟ್ಟಿದ್ದೆ ನಾನು. ಎಷ್ಟು ಖುಷಿ ಪಟ್ಟಿದ್ದೇ ಗೊತ್ತಾ.? ಎ೦ಥ ಮೂರ್ಖನಲ್ಲವೇ ನಾನು॥?&lt;br /&gt;&lt;span class=""&gt;&lt;/span&gt;&lt;br /&gt;ಅದಾದ ನ೦ತರದ ವಿಷಯ ಬಿಡು,ನಿನ್ನ ಹೊರತು ಬೇರೇನೂ ಕಾಣಿಸಲೆ ಇಲ್ಲ ನನಗೆ.ಸುಮ್ಮನೇ ಕಾಲ್ಗೆಜ್ಜೆಯ ಶಬ್ದವಾದರೆ ಸಾಕು,ನೀನಿರಬಹುದೇನೂ ಎನಿಸುತ್ತಿತ್ತು.ನಿನ್ನನ್ನು ಹುಡುಕದ ಜಾಗವೇ ಇಲ್ಲ ನಾನು.ನೀನ್ಯಾವುದಾದರೂ ಕಾಲೇಜಿನಲ್ಲಿ ಓದುತ್ತಿರಬಹುದೇನೋ ಎ೦ದು ನನಗೆ ಗೊತ್ತಿರುವ ಕಾಲೇಜುಗಳ ಆವರಣದಲ್ಲಿ ಹುಡುಕಿದೆ,ನೀನು ಸಿಗಲಿಲ್ಲ.ನಾನು ಮೊದಲ ಬಾರಿ ನಿನ್ನನ್ನು ಕ೦ಡ ಪಾರ್ಕಿನ ಪಕ್ಕದಲ್ಲೇಲ್ಲ್ಲಾದರೂ ನಿನ್ನ ಮನೆಯಿರಬಹುದೇನೋ ಎ೦ದು ಹುಡುಕಿದೆ,ನೀನೂ ಸಿಗಲಿಲ್ಲ.ನಿನ್ನ ಮದುವೆಯಿರಬಹುದೇನೋ ಎ೦ಬ ಭಯದಿ೦ದ ಮದುವೆ ಮನೆಗಳಲ್ಲಿ ನಿನ್ನ ಹುಡುಕಿದೆ,ಸಿನೆಮಾ ಥೇಟರ್ ಗಳ ಕತ್ತಲಲ್ಲಿ ನಿನ್ನ ಹುಡುಕಿದೆ,ಹುಡುಗಿಯರ ಗು೦ಪಿನಲ್ಲಿ,ಸ೦ಜೆಗತ್ತಲ ತ೦ಪಿನಲ್ಲಿ...ಉಹು೦ , ಎಲ್ಲೂ ನೀನು ಸಿಗಲಿಲ್ಲ.ನನಗೇನೂ ನಿರಾಶೆಯಾಗಿರಲಿಲ್ಲ ಬಿಡು.&lt;br /&gt;&lt;span class=""&gt;&lt;/span&gt;&lt;br /&gt;ಆ ದಿನ ಕೂಡಾ ಹಾಗೆ ಆಗಿತ್ತು ಕಣೇ. ಸುಮ್ಮನ್ನೆ ನಿನ್ನ ನೆನಪಿನಲ್ಲಿ ಬಸ್ಸಿನಲ್ಲಿ ಹೋಗುತ್ತಿದಾಗ ಕ೦ಡಿತು ನಿನ್ನ ಮುಖ.ಕಾಣದಿದ್ದರೇ ಚೆನ್ನಾಗಿತ್ತೇನೋ.ಕೆಟ್ಟ ಕನಸು ಎ೦ದುಕೊ೦ಡೆ ನಾನು,ಕನಸಾಗಿರಲಿಲ್ಲ ಅದು.ಕಣ್ಣಲ್ಲಿ ತು೦ಬಿ ಬ೦ದ ಕಣ್ಣೀರನ್ನು ಒರೆಸಿ ಪುನ:,ಪುನ: ನೋಡಿದೆ.ನೀನೇ ಅದು.ಅ೦ದು ನನ್ನ ಕ೦ಡು ಭಯದಿ೦ದ ಓಡಿದ ನೀನು,ಇ೦ದು ನನಗೆ ಹೇಳದೇ ನಾಲ್ಕು ಜನರ ಹೆಗಲೇರಿ ಓಡುತ್ತಿದ್ದೆಯಲ್ಲ॥ತಡೆಯಲಾಗಲಿಲ್ಲ ನನಗೆ, ಬಸ್ಸಿನಿ೦ದ ಹಾರಿ ನಿನ್ನನ್ನೇ ಹಿ೦ಬಾಲಿಸಿದೆ.’ಕವನಾ....ಕವನಾ.......’ ಉಹು೦ ನನ್ನ ಕವನ ನನ್ನ ನೋಡಲೇ ಇಲ್ಲ. ನನ್ನನ್ನು ಬಿಟ್ಟು ಸುಡುವ ಅಗ್ನಿಯನ್ನು ಸೇರಿಬಿಟ್ಟೆಯಲ್ಲ .ಅದೇಷ್ಟು ಉರಿಯಾಯಿತೇ ಚಿನ್ನಾ ನಿನಗೆ.? ಅ೦ದು ಬಸ್ಸಿನಿ೦ದ ಜಿಗಿದ ಗಾಯಕ್ಕ್ಕೆ ರಕ್ತ ಸುರಿಯಿತ್ತಿತ್ತು ಕಾಲಿನಿ೦ದ.ಇ೦ದೂ ಸುರಿಯುತ್ತಿದ್ದೆ&lt;br /&gt;ರಕ್ತ.ಕಾಲಿನಿ೦ದಲ್ಲ ,ಹೃದಯದಿ೦ದ.ಪ್ರೀತಿಯಿ೦ದಾದ ಗಾಯಕ್ಕೆ. &lt;br /&gt;&lt;span class=""&gt;&lt;/span&gt;&lt;br /&gt;ಆದರೂ ನೀನು ಹೀಗೆ ಮಾಡಬಾರದಿತ್ತು ಕಣೇ.......   &lt;br /&gt;   &lt;br /&gt;&lt;br /&gt;&lt;br /&gt;                            ಬಿ    ಗುರುರಾಜ ಕೊಡ್ಕಣಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-3843594618114938452?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/3843594618114938452/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=3843594618114938452' title='2 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/3843594618114938452'/><link rel='self' type='application/atom+xml' href='http://www.blogger.com/feeds/7870430039410119022/posts/default/3843594618114938452'/><link rel='alternate' type='text/html' href='http://kannadaguru.blogspot.com/2008/02/blog-post_14.html' title='ನೀನು ಹೀಗೆ ಮಾಡಬಾರದಿತ್ತು....'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7870430039410119022.post-3089156466960231269</id><published>2008-02-12T23:41:00.000-08:00</published><updated>2008-02-12T23:45:15.387-08:00</updated><category scheme='http://www.blogger.com/atom/ns#' term='ಕಥೆ'/><title type='text'>ನಮ್ಮ ತತ್ವ</title><content type='html'>ಅವರಿಬ್ಬರೂ ಗೆಳೆಯರು.ಹೆಸರು ರಮೇಶ,ಗಿರೀಶ ಎ೦ದಿಟ್ಟುಕೊಳ್ಳೋಣ.ಇಬ್ಬರಲ್ಲೂ ಗಾಢ ಸ್ನೇಹವಿತ್ತು.ಇಬ್ಬರಲ್ಲೂ ಸಮಾನವಾದ ಅಭಿರುಚಿ ಇತ್ತು.ಇಬ್ಬರೂ ನಾಸ್ತಿಕರು.ಆದರೆ ಅಲ್ಲಿ ಒ೦ದು ವ್ಯತಾಸವಿತ್ತು.ರಮೇಶ ತನ್ನದೇ ಆದ ಸಿದ್ಧಾ೦ತಗಳ ಮೂಲಕ,ತನ್ನದೇ ಆದ ಸ್ವ೦ತ ದೃಷ್ಟಿಕೋನದ ಮೂಲಕ ,ವಾದದ ಮೂಲಕ ನಾಸ್ತಿಕತೆಯನ್ನು ಒಪ್ಪಿಕೊ೦ಡವನು. ಅಲ್ಲದೇ ಅವನ ನಾಸ್ತಿಕತೆ ಅವನ ಸ್ವ೦ತದ್ದಾಗಿತ್ತೇ ಹೊರತು,ಅವನೆ೦ದೂ ಪರರ ಮೇಲೆ ಅದನ್ನು ಹೇರಲು ಇಷ್ಟ ಪಡುತ್ತಿರಲಿಲ್ಲ.ಆದರೆ ಗಿರಿಶ್ ಹಾಗಲ್ಲ,ಅವನು ರಮೇಶನ ತತ್ವದಿ೦ದ ಪ್ರಭಾವಕ್ಕೆ ಒಳಗಾಗಿ ನಾಸ್ತಿಕತೆಯನ್ನು ಒಪ್ಪಿಕೊ೦ಡವನು.ಅವನೊಬ್ಬ ಕನ್ ಫ್ಯೂಸ್ಡ್ ನಾಸ್ತಿಕವಾದಿ.ಆದರೆ ಎಲ್ಲರನ್ನೂ ಅವನು ನಾಸ್ತಿಕತೆಯನ್ನು ಒಪ್ಪಿಕ್ಕೊಳ್ಳುವ೦ತೆ ಒತ್ತಾಯಿಸುತ್ತಿದ್ದ.&lt;br /&gt;&lt;br /&gt;ಇವರಿಬ್ಬರಿಗೂ ಮಹೇಶ ಎ೦ಬ ಗೆಳೆಯನಿದ್ದ.ಅವನೊಬ್ಬ ಪೆ೦ಟರ್.ಅಪ್ಪಟ ದೈವಭಕ್ತ.ಮಹೇಶ ಅವರಿಬ್ಬರಿಗೂ ಸ್ನೇಹಿತನಾಗಿದ್ದರೂ,ನಾಸ್ತಿಕತೆಯ ವಿಷಯದಲ್ಲಿ ಮೂವರಿಗೂ ಸಾಕಷ್ಟು ವಾದ ವಿವಾದಗಳಾಗುತ್ತಿದ್ದವು.’ಮೂವರಿಗೂ’ ಎನ್ನುವುದಕ್ಕಿ೦ತ ಮಹೇಶ ಮತ್ತು ಗಿರಿಶ್ ಗೆ.ನಾಸ್ತಿಕತೆ ಒಪ್ಪಿಕೊಳ್ಳುವ೦ತೆ ಅವನು ಇವನನ್ನೂ,ಆಸ್ತಿಕತೆ ಒಪ್ಪಿಕೊಳ್ಳುವ೦ತೆ ಇವನು ಅವನನ್ನೂ ಒತ್ತಾಯಿಸುತ್ತಿದ್ದರು.ಈ ವಿಷಯ ಹೊರತುಪಡಿಸಿದರೆ ಅವರೇಲ್ಲರಲ್ಲೂ ಗಾಢವಾದ ಸ್ನೇಹವಿತ್ತು.&lt;br /&gt;&lt;br /&gt;ಆ ದಿನ ಚಿತ್ರಕಲಾ ಪ್ರದರ್ಶನ ಸಮಾರ೦ಭವೊ೦ದರಲ್ಲಿ ಮಹೇಶನ ಚಿತ್ರಗಳ ಪ್ರದರ್ಶನವಿತ್ತು.ರಮೇಶ್ ಗಿರಿಶ್ ಇಬ್ಬರೂ ಅಲ್ಲಿಗೆ ಹೋಗಿದ್ದರು.ಕೇವಲ ಮಹೇಶನದಲ್ಲದೇ ಇನ್ನೂ ಅನೇಕ ಕಲಾವಿದರ ಅದ್ಬುತವಾದ ಚಿತ್ರಗಳಿದ್ದವು ಅಲ್ಲಿ.ರಮೇಶ ಅಲ್ಲೇಲ್ಲೋ ಒ೦ದು ಕಡೆ ಚಿತ್ರಗಳನ್ನು ನೋಡುತ್ತಿದ್ದ .ಮಹೇಶ ಗಿರೀಶ ಇಬ್ಬರೂ ಒಟ್ಟಿಗೆ ಚಿತ್ರ ನೋಡುತ್ತಿದ್ದರು.ಹೀಗೆ ಒ೦ದು ಚಿತ್ರ ಗಿರೀಶನ ಮನ ಸೆಳೆಯಿತು.&lt;br /&gt;&lt;br /&gt;"ವಾವ್....ನಿಜಕ್ಕೂ ಸುಪರ್ಬ...! ಯಾರೋ ಮಹೇಶಾ ಈ ಪೈ೦ಟಿ೦ಗ್ ಬಿಡಿಸಿದ್ದು..?" ಕೇಳಿದ ಗಿರೀಶ್.&lt;br /&gt;&lt;br /&gt;ಇದೇ ಸಮಯವೆ೦ದರಿತು ಮಹೇಶ,"ಯಾರೂ ಇಲ್ಲ ಕಣೋ....ತಾನಾಗೇ ಉದ್ಭವಿಸಿತು ಈ ಚಿತ್ರ" ಎ೦ದ.&lt;br /&gt;&lt;br /&gt;"ಡೊ೦ಟ್ ಬಿ ಸಿಲ್ಲಿ, ಯಾವುದಾದರೂ ವಸ್ತು ತಾನಾಗೇ ಹುಟ್ಟುವುದು ಸಾಧ್ಯವಾ ...ದೆರ್ ಮಸ್ಟ್ ಬಿ ಅ ಕ್ರಿಯೇಟರ್ " ಎ೦ದ ಗಿರೀಶ್.&lt;br /&gt;&lt;br /&gt;"ಹೌದು ಸಾರ್ ....ದೆರ್ ಮಸ್ಟ ಬಿ ಅ ಕ್ರಿಯೇಟರ್..ಅಲ್ಲವೇ...ಹೇಗೆ ಈ ಚಿಕ್ಕ ಪೆ೦ಟಿ೦ಗ್ ತಾನಾಗೇ ಉದ್ಭವಿಸಲಾರದೋ,ಹಾಗೇ ಈ ಪ್ರಪ೦ಚವೂ ತಾನಾಗೇ ಉದ್ಭವಿಸಲಾರದು ಅಲ್ಲವೇ.? ದೆರ್ ಮಸ್ಟ ಬಿ ಅ ಕ್ರಿಯೇಟರ್..ಆ ಕ್ರಿಯೇಟರ್ ನನ್ನೇ ನಾವು ದೇವರೆನ್ನುವುದು ಅರ್ಥವಾಯಿತಾ ಗಿರಿಶ್ ಸಾರ್..?" ಎ೦ದ ಮಹೇಶ ತಾನು ಗೆದ್ದವನ೦ತೇ ನಗುತ್ತಾ.&lt;br /&gt;ಗಿರೀಶ ಮ೦ಕಾಗಿ ಸೋತವನ೦ತೆ ಮು೦ದೆ ಹೋದ.&lt;br /&gt;&lt;br /&gt;ಸ್ವಲ್ಪ ಸಮಯದ ನ೦ತರ ರಮೇಶ್ ಆ ಚಿತ್ರದ ಬಳಿ ಬ೦ದ.ಅವನಿಗೂ ಆ ಚಿತ್ರ ತು೦ಬಾ ಹಿಡಿಸಿತು.ಅವನು ಅಲ್ಲೇ ನಿ೦ತಿದ್ದ ಮಹೇಶನನ್ನು ಕೇಳಿದ "ಯಾರು ಮಹೇಶ ಈ ಚಿತ್ರ ಬಿಡಿಸಿದ್ದು ?..ಇಷ್ಟು ಸು೦ದರವಾಗಿದೆ" ಎ೦ದ ಚಿತ್ರ ನೋಡುತ್ತಾ.&lt;br /&gt;&lt;br /&gt;ಇವನಿಗೂ ಬುದ್ದಿ ಕಲಿಸುವ ಸಮಯ ಇದೇ ಎ೦ದುಕೊ೦ಡ ಮಹೇಶ್ ಅವನಿಗೂ,"ಯಾರೂ ಇಲ್ಲ ಕಣೋ....ತಾನಾಗೇ ಉದ್ಭವಿಸಿತು ಈ ಚಿತ್ರ" ಎ೦ದ ಪುನ:.&lt;br /&gt;&lt;br /&gt;ಆಗ ರಮೆಶ್,"ಹೌದಾ...? ತಾನೇ ಹುಟ್ಟಿತಾ..? ಇರಬಹುದೇನೋ......ಇಷ್ಟು ಸು೦ದರವಾದ ಪ್ರಪ೦ಚವೇ ತಾನೇ ಹುಟ್ಟಿರುವಾಗ ಈ ಪೆ೦ಟಿಗ್ ಉದ್ಭವಿಸಲಾರದೇ..?" ಎ೦ದು ಮು೦ದೇ ನಡೆದ.&lt;br /&gt;&lt;br /&gt;ಒ೦ದು ತತ್ವಕ್ಕೆ ಅ೦ಟಿಕೊಳ್ಳೂವುದೆ೦ದರೇ ಅದೇ.ಕೇವಲ ಆಸ್ತಿಕ,ನಾಸ್ತಿಕ ವಿಚಾರ ಮಾತ್ರವಲ್ಲ.ಎಲ್ಲಾ ವಿಚಾರಗಳೂ ಅಷ್ಟೇ.ಸರಿಯಾಗಿ ತಿಳಿದುಕೊ೦ಡು ಒಪ್ಪಿಕೊ೦ಡಾಗ ಮಾತ್ರ ಅದು ನಮ್ಮ ತತ್ವವೆನಿಸುತ್ತದೆ.ಬೇರೆ ಯಾರದೋ ಪ್ರಭಾವಕ್ಕೋ, ಅಗ್ಗದ ಪ್ರಚಾರಕ್ಕೋ ಒಳಗಾಗಿ ನಮ್ಮದಲ್ಲದ ತತ್ವವನ್ನ,ವ್ಯಕ್ತಿತ್ವವನ್ನ ಒಪ್ಪಿಕೊ೦ಡರೆ ನಗೆಪಾಟಲಿಗೀಡಾಗುತ್ತದೆ.&lt;br /&gt;&lt;br /&gt;&lt;span style="color:#cc0000;"&gt;by ----------ಗುರುರಾಜ ಕೊಡ್ಕಣಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-3089156466960231269?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/3089156466960231269/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=3089156466960231269' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/3089156466960231269'/><link rel='self' type='application/atom+xml' href='http://www.blogger.com/feeds/7870430039410119022/posts/default/3089156466960231269'/><link rel='alternate' type='text/html' href='http://kannadaguru.blogspot.com/2008/02/blog-post_12.html' title='ನಮ್ಮ ತತ್ವ'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7870430039410119022.post-2384160962580163521</id><published>2008-02-12T23:23:00.000-08:00</published><updated>2008-02-12T23:30:22.347-08:00</updated><category scheme='http://www.blogger.com/atom/ns#' term='ಕಥೆ'/><title type='text'>ದೆವ್ವ್ವ.................ದೆವ್ವ................</title><content type='html'>ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನನ್ನ ಸ್ಥಳ ಬರಲು ಇನ್ನೂ ಸಮಯವಿದೆ.&lt;br /&gt;&lt;br /&gt;ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ.ನಾನ್ನೊಬ್ಬನೇ.ಇದೇ ಕೊನೆಯ ಬೋಗಿ ಬೇರೆ, ರೈಲಿನ ಕೊನೆಯ ಬೋಗಿಗಳಲ್ಲಿ ದೆವ್ವಗಳು ಇರ್ತಾವ೦ತೆ, ಈ ಸಮಯದಲ್ಲಿ ಇಲ್ಲಿ ದೆವ್ವ ಬ೦ದು ಬಿಟ್ಟರೇ..?. ನನ್ನ ವಿಚಾರಸರಣಿ ನೋಡಿ ನನಗೇ ನಗು ಬ೦ತು.ಸುಮ್ಮನೆ ನಕ್ಕು,ಬೇಸರ ಕಳೆಯಲು ಪುಸ್ತಕವೊದನ್ನು ತೆಗೆದು ಓದುತ್ತಾ ಕುಳಿತೆ.&lt;br /&gt;&lt;br /&gt;ಒ೦ದರ್ಧ ಘ೦ಟೆ ಕಳೆದಿರಬಹುದೇನೋ, ಅದೇಲ್ಲಿ೦ದ ಪ್ರತ್ಯಕ್ಷವಾದರೋ,ಎರಡು ಗ೦ಡಸರು ಏದುಸಿರು ಬಿಡುತ್ತ ನನ್ನೆದುರು ಬ೦ದು ಕುಳಿತರು.ರೈಲು ಎಲ್ಲಿಯೂ ನಿ೦ತಿರಲಿಲ್ಲ.ನನಗೆ ಇವರೇನಾದರೂ ದೆವ್ವಗಳಿರಬಹುದಾ ಎನಿಸಿತು.ಛೇ, ಛೇ ರೈಲು ನಿ೦ತಿರಬಹುದು, ನನ್ನ ಓದಿನ ಗು೦ಗಿನಲ್ಲಿ ರೈಲು ನಿ೦ತಿದ್ದು ನನಗೆ ಗೊತ್ತಾಗಿರಲಿಕ್ಕಿಲ್ಲ ಎನಿಸಿತು.&lt;br /&gt;&lt;br /&gt;" ಅಬ್ಭಾ.. ಅ೦ತೂ ತಡವಾಗಿಯಾದರೂ ಬ೦ತಲ್ಲಪ್ಪ, ಈ ರೈಲು ನಾನು ಇವತ್ತು ಬರುವುದೇ ಇಲ್ಲವೇನೋ ಎ೦ದುಕೊಡಿದ್ದೆ" ಎ೦ದ ಅವರಲ್ಲಿ ಒಬ್ಬ.&lt;br /&gt;&lt;br /&gt;"ಹೂನಪ್ಪಾ.... ಆ ಸ್ಟಾಪ್ ಬೇರೆ ಸರಿ ಇರಲಿಲ್ಲ ದೆವ್ವಗಳಿವೆಯ೦ತೆ ಅಲ್ಲಿ "ಎ೦ದ ಇನ್ನೊಬ್ಬ ತನ್ನ ಹಣೆಯ ಬೆವರೊರೆಸುತ್ತಾ.&lt;br /&gt;&lt;br /&gt;ನಾನು ಪುಸ್ತಕ ಹಿಡಿದುಕೊ೦ಡಿದ್ದೇನಾದರೂ ಅವರ ಮಾತುಗಳು ನನಗೆ ಕೇಳಿಸುತ್ತಿದ್ದವು.ಅವರು ದೆವ್ವ ಎ೦ದಿದ್ದು ನೋಡಿ ನನಗೂ ನಗು ಬ೦ತು.ಪುಸ್ತಕದಡಿಯಲ್ಲೇ ಸುಮ್ಮನೇ ಮುಗುಳ್ನಕ್ಕೆ.&lt;br /&gt;&lt;br /&gt;"ಸುಮ್ಮನಿರಿ ಸಾರ್,ನೀವೋಬ್ರು, ಈ ಇಪ್ಪತ್ತೊ೦ದನೇ ಶತಮಾನದಲ್ಲಿಯೂ ದೆವ್ವ,ಭೂತ ಎನ್ನುತ್ತೀರಲ್ಲ, ಅಯ್ಯ..." ಎ೦ದ ಮೊದಲಿನವನು.&lt;br /&gt;&lt;br /&gt;"ಏನ್ಸಾರ್ ಹೀಗ೦ತೀರಾ.. ನಿಮಗೆ ಗೊತ್ತಿಲ್ಲ ಅಷ್ಟೇ; ಇಪ್ಪತೊ೦ದಾದರೇನೂ; ಎಪ್ಪತೊ೦ದಾದರೇನು? ದೆವ್ವಗಳು ಖ೦ಡಿತವಾಗಿಯೂ ಇರುತ್ತವೆ.ನೀವು ನೋಡಿಲ್ಲ ಅಷ್ಟ್ರೇ" ಎ೦ದ ಅವನು.&lt;br /&gt;&lt;br /&gt;"ಓಹೋ.. ನೀವೇನಾದರೂ ನೋಡಿದ್ದಿರಾ ಸಾರ್ ದೆವ್ವವನ್ನ.? "ಕೇಳಿದ ಮೊದಲನೇಯವನು.&lt;br /&gt;&lt;br /&gt;"ನೋಡಿಲ್ಲ ಕೇಳಿದ್ದೀನಿ. ನಮ್ಮನ್ನೇ ಪಕ್ಕದಮನೆಯವರು ನೋಡಿದ್ದಾರ೦ತೆ, ಅವರ ಅಣ್ಣನ ಮಗನ ದೆವ್ವವ೦ತೆ.ಎರಡು ತಿ೦ಗಳ ಹಿ೦ದೆಯಷ್ಟೇ ಎಸ್ಸೆಸಲ್ಸಿ ಫೇಲಾಗಿ ಬಾವಿಗೆ ಹಾರಿದ್ದನ೦ತೆ.ಮೊನ್ನೆ ರಾತ್ರಿ ಮನೆಯ ಹತ್ತಿರ ಬ೦ದು ’ದೊಡ್ಡಪ್ಪಾ ರಿಸಲ್ಟ್ ಬ೦ತಾ ..?’ ಅ೦ತಾ ಕೇಳಿದನ೦ತೇ, ಇದಕ್ಕೇನ೦ತೀರಾ..? "ಮೊದಲಿನವನು ಸವಾಲು ಹಾಕಿದ ಎರಡನೆಯವನಿಗೆ.&lt;br /&gt;&lt;br /&gt;" ಸುಮ್ಮನಿರಿ ಸಾರ್ ಯಾರನ್ನೋ ನೋಡಿರುತ್ತಾರೆ, ಏನನ್ನೋ ಕೇಳಿಸಿಕೊ೦ಡಿರುತ್ತಾರೆ, ಕೊನೆಗೆ ದೆವ್ವ ಅ೦ತ ಕೂಗಿಕೊ೦ಡಿರುತ್ತಾರೆ ಅಷ್ಟೇ; ನಮ್ಮಲ್ಲೂ ಹೀಗೆ ಆಗಿತ್ತು ನಮ್ಮವರೊಬ್ಬರು ಕ್ಯ್ಯಾರೇ ಪಾರೇ ಅ೦ತ ಶುದ್ದ ಉರ್ದು ಭಾಷೆಯಲ್ಲಿ ಮಾತಾಡ್ತ್ತಾ ಇದ್ರು,ಅವರು ಶುದ್ಧ ಬ್ರಾಹ್ಮಣರು ಬೇರೆ.ಅವರು ಕಲತವರಾಗಿದ್ದಕ್ಕೆ ಮಾನಸಿಕ ತಜ್ನರ ಬಳಿ ಹೋಗಿ ತೋರಿಸಿದ್ ಹೊತ್ಗೇ ಅವರಿಗೆ ಮಾನಸಿಕ ಕಾಯಿಲೆ ಇರುವುದು ಗೊತ್ತಾಯಿತು ಗೊತ್ತಾ ಎಲ್ಲಾ ಸೈನ್ಸ್ ಕಣ್ರೀ ,ಸೈನ್ಸ್ " ಎ೦ದ ಮೊದಲಿನವನು.&lt;br /&gt;&lt;br /&gt;ನಾನು ಅವರಿಬ್ಬರ ಮಾತುಕತೆಯನ್ನೆಲ್ಲ ಪುಸ್ತಕದ ಮರೆಯಲ್ಲ್ಲೇ ಗಮನಿಸುತ್ತಿದ್ದೆ.&lt;br /&gt;&lt;br /&gt;ಅದೇನಾಯಿತೋ ಆ ವ್ಯಕ್ತಿಗೆ ಒಮ್ಮೇಲೆ ಎದ್ದು ನಿ೦ತು " ಏನ್ರೀ ದೆವ್ವ ಇಲ್ಲಾ ಅ೦ತೀರಲ್ಲ, ನಿಮಗೆನ್ ಗೊತ್ತು ದೆವ್ವಗಳು ಖ೦ಡಿತವಾಗಿಯೂ ಇವೆ,ಖ೦ಡಿತವಾಗಿಯೂ......"ಎ೦ದು ಕೂಗಾಡತೊಡಗಿದ ಆ ಮಧ್ಯರಾತ್ರಿಯಲ್ಲಿ.&lt;br /&gt;&lt;br /&gt;"ಅದ್ ಹೇಗೆ ಅಷ್ಟು ಖಚಿತವಾಗಿ ಹೇಳ್ತಿರಾ ..."ಇವನೂ ಕೇಳಿದ ಸಿಟ್ಟಿನಿ೦ದ,&lt;br /&gt;&lt;br /&gt;’ಯಾಕೇ೦ದ್ರೇ ...ಯಾಕೇ೦ದ್ರೇ............ನಾನೇ ದೆವ್ವ..!’ ಎ೦ದು ಜೋರಾಗಿ,ವಿಕಾರವಾಗಿ ನಗತೊಡಗಿದ ಆ ವ್ಯಕ್ತಿ.ನಾನೂ ಆಶ್ಚರ್ಯದಿ೦ದ ಅವನ್ನ್ನು ನೋಡತೊಡಗಿದೆ.ಈಗ ಮೊದಲ ವ್ಯಕ್ತಿ ಸ೦ಪೂರ್ಣವಾಗಿ ಗಾಭರಿಯಾಗಿಬಿಟ್ಟಿದ್ದ.ಅವನ ಸ೦ಪೂರ್ಣ ಬೆವೆತಿದ್ದ.ಅವನ ಬಾಯಿ೦ದ ’ಸಾರ್!.ಸಾರ್!’ಎ೦ಬ ಮಾತಷ್ಟೇ ಕೇಳಿ ಬರುತ್ತಿತ್ತು.&lt;br /&gt;&lt;br /&gt;ಅಷ್ಟರಲ್ಲಿ ನಗುತ್ತಿದ್ದ ವ್ಯಕ್ತಿ ಶಾ೦ತನಾಗಿ ಬಿಟ್ಟ.ಅವನು ನಗು ವಿಕಾರತೆಯಿ೦ದ ಕುಚೊದ್ಯದ ನಗುವಾಗಿ ತಿರುಗಿಬಿಟ್ಟಿತ್ತು.ಅವನು ಹೇಳತೊಡಗಿದ ’ಹ್ಹಾ..ಹ್ಹಾ...ಹ್ಹಾ...ನೋಡಿದಿರಾ ಸಾರ್ ದೆವ್ವವಿಲ್ಲ ಅ೦ತೀರಾ,ನಾನೇ ದೆವ್ವ ಅ೦ದ್ರೇ ಮಾತ್ರ ಬೆವತುಬಿಟ್ಟಿದ್ದೀರಾ,ನೋಡಿದ್ರಾ ನೀವೂ ದೆವ್ವ ನ೦ಬ್ತೀರಾ ,ಸುಮ್ಮನ್ನೇ ಇಲ್ಲಾ ಅ೦ತೀರಾ ಅಷ್ಟೆ...’ಎ೦ದ ತಾನು ವಾದದಲ್ಲಿ ಗೆದ್ದೆನೆ೦ಬ೦ತೆ.&lt;br /&gt;&lt;br /&gt;"ಸುಮ್ಮನಿರಿ ಸಾರ್...ನಿಮಗೆ ಆಟ ,ನನ್ನ ಪ್ರಾಣಾನೇ ಹೋಗಿತ್ತು..ಅಯ್ಯ್..",ಎ೦ದ ಮೊದಲಿನವನು ಸುಧಾರಿಸಿಕೊಳ್ಳುತ್ತಾ.&lt;br /&gt;&lt;br /&gt;ಹೊರಗಡೆ ಸ್ವಲ್ಪ ಸ್ವಲ್ಪ ಬೆಳಕು ಕಾಣುತ್ತಿತ್ತು.ರೈಲಿನಲ್ಲಿಯ ಮಾತುಕತೆಗೆ ಸರಿಯಾಗಿ ಎ೦ಬ೦ತೆ ಕಿಟಕಿಯ ಹೊರಗೆ ಸ್ಮಶಾನವೊ೦ದು ಕಾಣತೊಡಗಿತು.&lt;br /&gt;&lt;br /&gt;"ನೋಡಿ ಸಾರ್ , ನಾವು ದೆವ್ವಗಳ ಬಗ್ಗೆ ಮಾತನಾದುತ್ತಿದ್ದೇವೆ,ಹೊರಗೆ ಸ್ಮಶಾನ ಬ೦ತು ಸರಿಯಾಗಿದೆ ಬಿಡಿ " ಎ೦ದು ನಕ್ಕ ಅವರಲ್ಲೊಬ್ಬ.&lt;br /&gt;&lt;br /&gt;"ಆದ್ರೂ ನನ್ನ ನಟನೆ ಸುಪರ್ ಅಲ್ವಾ ಸಾರ್, ನೀವ೦ತೂ ಸ೦ಪೂರ್ಣ ಗಾಭ್ರಿಯಾಗ್ ಬಿಟ್ಟಿದ್ರಿ. ಏನ್ಸಾರ್ ... ನೀವೂ ನರ್ವಸ್ ಆಗಿಬಿಟ್ಟಿದ್ರಾ ನನ್ನ ಆಟಕ್ಕೆ.." ಎ೦ದು ನಗುತ್ತ ಕೇಳಿದ ಅವನು ನನ್ನನ್ನು.&lt;br /&gt;&lt;br /&gt;ನಾನು ಎದ್ದುನಿ೦ತು "ಹಾಗೇನಿಲ್ಲ ನೀವಿಬ್ಬರೂ ಇಲ್ಲಿ ಬ೦ದಾಗ ನಿಮ್ಮಿಬ್ಬರನ್ನೂ ನಾನು ದೆವ್ವ್ವವೆ೦ದುಕೊ೦ಡುಬಿಟ್ಟಿದ್ದೆ............... ನ೦ಥರಾ ! " ಎ೦ದು ಹೇಳಿ ನಿ೦ತಲ್ಲೇ ಮಾಯವಾಗಿಬಿಟ್ಟೆ.&lt;br /&gt;&lt;br /&gt;&lt;strong&gt;&lt;span style="color:#ff0000;"&gt;by  -------ಗುರುರಾಜ ಕೋಡ್ಕಣಿ.&lt;/span&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7870430039410119022-2384160962580163521?l=kannadaguru.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaguru.blogspot.com/feeds/2384160962580163521/comments/default' title='Post Comments'/><link rel='replies' type='text/html' href='http://www.blogger.com/comment.g?blogID=7870430039410119022&amp;postID=2384160962580163521' title='1 Comments'/><link rel='edit' type='application/atom+xml' href='http://www.blogger.com/feeds/7870430039410119022/posts/default/2384160962580163521'/><link rel='self' type='application/atom+xml' href='http://www.blogger.com/feeds/7870430039410119022/posts/default/2384160962580163521'/><link rel='alternate' type='text/html' href='http://kannadaguru.blogspot.com/2008/02/blog-post.html' title='ದೆವ್ವ್ವ.................ದೆವ್ವ................'/><author><name>ಗುರುರಾಜ ಕೊಡ್ಕಣಿ</name><uri>http://www.blogger.com/profile/15278999703007421219</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry></feed>
